ಅಂಡರ್‌ ಪಾಸ್ ಜಲಾವೃತ: ಗೂಡ್ಸ್ ವಾಹನ ಹೊರತೆಗೆಯಲು ಸಿಬ್ಬಂದಿ ಹರಸಾಹಸ

ಬಾಗಲಕೋಟೆ: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಯು ಅವಾಂತರ ತಂದೊಡ್ಡಿದೆ. ಹುನಗುಂದ-ಅಮರಾವತಿ ರಸ್ತೆ ಅಂಡರ್‌ ಪಾಸ್ ಜಲಾವೃತಗೊಂಡಿದೆ. ಈ ಪರಿಣಾಮ ಗೂಡ್ಸ್ ವಾಹನ ಮುಳುಗಿದ್ದು, ನೀರಿನಲ್ಲಿ ಸಿಲುಕಿದ್ದ ವಾಹನವನ್ನು ಹರಸಾಹಸದ ನಂತರ ಹೊರತೆಗೆಯಲಾಗಿದೆ. ಧಾರಾಕಾರ ಮಳೆಯಿಂದ ಅಂಡರ್ ಪಾಸ್​ನಲ್ಲಿ ಗೂಡ್ಸ್ ವಾಹನ ಮುಳುಗಿತ್ತು. ಅದೃಷ್ಟವಶಾತ್ ಚಾಲಕ ಬಸವರಾಜ ವಾಲಿಕಾರ ಪಾರಾಗಿದ್ದಾನೆ. ಬಳಿಕ ಈಜುತ್ತಾ ವಾಹನದ ಬಳಿ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ವಾಹನ ಹೊರತೆಗೆಯುವ ಕಾರ್ಯಾಚರಣೆ ನಡೆದಿದ್ದು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಬಹಳ ಸಾಹಸದ ನಂತರ […]

ಅಂಡರ್‌ ಪಾಸ್ ಜಲಾವೃತ: ಗೂಡ್ಸ್ ವಾಹನ ಹೊರತೆಗೆಯಲು ಸಿಬ್ಬಂದಿ ಹರಸಾಹಸ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 26, 2020 | 12:21 PM

ಬಾಗಲಕೋಟೆ: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಯು ಅವಾಂತರ ತಂದೊಡ್ಡಿದೆ. ಹುನಗುಂದ-ಅಮರಾವತಿ ರಸ್ತೆ ಅಂಡರ್‌ ಪಾಸ್ ಜಲಾವೃತಗೊಂಡಿದೆ. ಈ ಪರಿಣಾಮ ಗೂಡ್ಸ್ ವಾಹನ ಮುಳುಗಿದ್ದು, ನೀರಿನಲ್ಲಿ ಸಿಲುಕಿದ್ದ ವಾಹನವನ್ನು ಹರಸಾಹಸದ ನಂತರ ಹೊರತೆಗೆಯಲಾಗಿದೆ.

ಧಾರಾಕಾರ ಮಳೆಯಿಂದ ಅಂಡರ್ ಪಾಸ್​ನಲ್ಲಿ ಗೂಡ್ಸ್ ವಾಹನ ಮುಳುಗಿತ್ತು. ಅದೃಷ್ಟವಶಾತ್ ಚಾಲಕ ಬಸವರಾಜ ವಾಲಿಕಾರ ಪಾರಾಗಿದ್ದಾನೆ. ಬಳಿಕ ಈಜುತ್ತಾ ವಾಹನದ ಬಳಿ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ವಾಹನ ಹೊರತೆಗೆಯುವ ಕಾರ್ಯಾಚರಣೆ ನಡೆದಿದ್ದು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಬಹಳ ಸಾಹಸದ ನಂತರ ಯಶಸ್ವಿಯಾಗಿ ಗೂಡ್ಸ್ ವಾಹನವನ್ನು ಹೊರತೆಗೆಯಲಾಗಿದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us