AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬಿನಿ ಹಿನ್ನೀರಿನಲ್ಲಿ ವಿದೇಶಿ ಪಕ್ಷಿಗಳು ಕಲರವ: ಫಾರಿನ್ ಹಕ್ಕಿಗಳ ನೋಟವೇ ಬಲುಚೆಂದ

ಮೈಸೂರು: ಕಬಿನಿ ಜಲಾಶಯದಲ್ಲೀಗ ಫಾರಿನ್ ಗೆಸ್ಟ್​ಗಳ ಮೋಡಿ ಜೋರಾಗಿದೆ. ತಿಳಿನೀರಲ್ಲಿ ಆಡ್ತಾ, ಬಾನಲ್ಲಿ ಹಾರಾಡ್ತಾ, ನೀರಲ್ಲಿ ಮುಳುಗೇಳ್ತಾ ಮಸ್ತಿ ಮಾಡ್ತಿದ್ದಾರೆ. ಅವ್ರ ಚೆಲ್ಲಾಟ ನೋಡೋಕಂತ್ಲೇ ಪ್ರವಾಸಿಗರು ಸಹ ಬರ್ತಿದ್ದಾರೆ. ತಿಳಿಗಾಳಿಗೆ ಮೆಲ್ಲನೆ ಅಪ್ಪಳಿಸೋ ಅಲೆ.. ತಂಗಾಳಿಯ ಸ್ಪರ್ಶ.. ತಮ್ಮದೇ ಲೋಕದಲ್ಲಿ ತೇಲಾಡೋ ಬಾನಾಡಿಗಳು. ಒಮ್ಮೆ ದಡದಲ್ಲಿ, ಮತ್ತೊಮ್ಮೆ ನೀರಲ್ಲಿ, ಮಗದೊಮ್ಮೆ ಬಾನಲ್ಲಿ. ಎಲ್ಲೆಲ್ಲೂ ಈ ಚಿಲಿಪಿಲಿಗಳದ್ದೇ ಕಲರವ. ಪಕ್ಷಿಲೋಕದ್ದೇ ತುಂಟಾಟ. ಬಾನಾಡಿಗಳ ಕಲರವ ಜೋರು:  ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲೀಗ ಬಾನಾಡಿಗಳ ಕಲರವ ಜೋರಾಗಿದೆ. ಮೈಸೂರಿಗೆ ದೂರದ […]

ಕಬಿನಿ ಹಿನ್ನೀರಿನಲ್ಲಿ ವಿದೇಶಿ ಪಕ್ಷಿಗಳು ಕಲರವ: ಫಾರಿನ್ ಹಕ್ಕಿಗಳ ನೋಟವೇ ಬಲುಚೆಂದ
Follow us
ಸಾಧು ಶ್ರೀನಾಥ್​
|

Updated on:Jan 19, 2020 | 1:34 PM

ಮೈಸೂರು: ಕಬಿನಿ ಜಲಾಶಯದಲ್ಲೀಗ ಫಾರಿನ್ ಗೆಸ್ಟ್​ಗಳ ಮೋಡಿ ಜೋರಾಗಿದೆ. ತಿಳಿನೀರಲ್ಲಿ ಆಡ್ತಾ, ಬಾನಲ್ಲಿ ಹಾರಾಡ್ತಾ, ನೀರಲ್ಲಿ ಮುಳುಗೇಳ್ತಾ ಮಸ್ತಿ ಮಾಡ್ತಿದ್ದಾರೆ. ಅವ್ರ ಚೆಲ್ಲಾಟ ನೋಡೋಕಂತ್ಲೇ ಪ್ರವಾಸಿಗರು ಸಹ ಬರ್ತಿದ್ದಾರೆ. ತಿಳಿಗಾಳಿಗೆ ಮೆಲ್ಲನೆ ಅಪ್ಪಳಿಸೋ ಅಲೆ.. ತಂಗಾಳಿಯ ಸ್ಪರ್ಶ.. ತಮ್ಮದೇ ಲೋಕದಲ್ಲಿ ತೇಲಾಡೋ ಬಾನಾಡಿಗಳು. ಒಮ್ಮೆ ದಡದಲ್ಲಿ, ಮತ್ತೊಮ್ಮೆ ನೀರಲ್ಲಿ, ಮಗದೊಮ್ಮೆ ಬಾನಲ್ಲಿ. ಎಲ್ಲೆಲ್ಲೂ ಈ ಚಿಲಿಪಿಲಿಗಳದ್ದೇ ಕಲರವ. ಪಕ್ಷಿಲೋಕದ್ದೇ ತುಂಟಾಟ.

ಬಾನಾಡಿಗಳ ಕಲರವ ಜೋರು:  ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲೀಗ ಬಾನಾಡಿಗಳ ಕಲರವ ಜೋರಾಗಿದೆ. ಮೈಸೂರಿಗೆ ದೂರದ ಊರಿನಿಂದ ಬಂದಿರೋ ವಿದೇಶಿ ಪಕ್ಷಿಗಳು ತುಂಟಾಟ ಆಡ್ತಿವೆ. ವರ್ಷದ ಕೊನೆಯಲ್ಲಿ ಬರೋ ಈ ಬಾರ್‌ಹೆಡ್‌ ಗೊಸ್‌ ಪಕ್ಷಿಗಳು ಮೂರು ತಿಂಗಳ ಕಾಲ ಮೈಸೂರಿನಲ್ಲೇ ಬೀಡು ಬಿಟ್ಟಿರ್ತಾವೆ. ಅದರಲ್ಲು ಚಳಿಗಾಲದ ಸಂದರ್ಭದಲ್ಲಿ ಹೆಚ್.ಡಿ.ಕೋಟೆಯ ಬೀಚನಹಳ್ಳಿಯ ಕಬಿನಿ ಡ್ಯಾಂಗೆ ಲಗ್ಗೆ ಇಡುತ್ವೆ. ಅವುಗಳ ಎಂಟ್ರಿಯಿಂದ ಜಲಾಶಯದ ಅಂದವೇ ಹೆಚ್ಚಾಗಿದೆ.

ಪಕ್ಷಿಲೋಕದ ನೋಟವೇ ಬಲುಚೆಂದ: ಇನ್ನು ಈ ಬಾರ್ ಹೆಡ್ ಗೂಸ್ ಪಕ್ಷಿಗಳು ವಲಸೆ ಹಕ್ಕಿಗಳಾಗಿದ್ದು ನೇಪಾಳ, ಮಂಗೋಲಿಯಾ, ಸೈಬಿರಿಯಾ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳು ಸಂತಾನೋತ್ಪತ್ತಿಗಾಗಿ ನದಿಗಳು ಹಾಗೂ ಜಲಾಶಯದ ಹಿನ್ನೀರನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಮೂರ್ನಾಲ್ಕು ತಿಂಗಳು ಕಾಲ ವಲಸೆ ಬಂದು ಕಬಿನಿ ಡ್ಯಾಂ ಬಳಿಯೇ ಬೀಡು ಬಿಟ್ಟಿರುತ್ತವೆ. ಹೊಲ ಗದ್ದೆಗಳಲ್ಲಿ ಆಹಾರ ಸೇವಿಸಿ ಸಂತಾನೋತ್ಪತ್ತಿ ಮುಗಿಸಿ ವಾಪಸ್ಸಾಗುತ್ತವೆ. ಪಕ್ಷಿಲೋಕದ ನೋಟವೇ ಬಲುಚೆಂದ. ಅದ್ರಲ್ಲೂ ದೂರದೂರಿಂದ ಹಿಂಡು ಹಿಂಡಾಗಿ ಬರೋ ಈ ಪಕ್ಷಿಗಳು ನೋಡೋ ಕಂಗಳಿಗೆ ಖುಷಿ ಕೊಡುತ್ತವೆ. ಹಾಗೇ ಪ್ರಕೃತಿ ಅಂದವನ್ನ ಮತ್ತಷ್ಟು ಹೆಚ್ಚಿಸುತ್ತವೆ.

Published On - 1:33 pm, Sun, 19 January 20

ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್