AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UT Khader; ಕೋಮು ದಳ್ಳುರಿಗೆ ಹೆಸರಾದ ಕರಾವಳಿ ಪ್ರದೇಶದಲ್ಲಿ ಯುಟಿ ಖಾದರ್ ಶಾಸಕನಾಗಿ ನಿರ್ವಹಿಸಿದ ಕೆಲಸ ಶ್ಲಾಘನೀಯ: ಗಾಲಿ ಜನಾರ್ಧನ ರೆಡ್ಡಿ

UT Khader; ಕೋಮು ದಳ್ಳುರಿಗೆ ಹೆಸರಾದ ಕರಾವಳಿ ಪ್ರದೇಶದಲ್ಲಿ ಯುಟಿ ಖಾದರ್ ಶಾಸಕನಾಗಿ ನಿರ್ವಹಿಸಿದ ಕೆಲಸ ಶ್ಲಾಘನೀಯ: ಗಾಲಿ ಜನಾರ್ಧನ ರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2023 | 4:06 PM

ಬಹಳ ವರ್ಷಗಳ ನಂತರ ಜನಾರ್ಧನ ರೆಡ್ಡಿ ಒಬ್ಬ ಜನ ಪ್ರತಿನಿಧಿಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದ್ದಾರೆ.

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ (Kalyana Karnataka Pragati Paksha) ಏಕೈಕ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಇಂದು ಸದನದಲ್ಲಿ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಯುಟಿ ಖಾದರ್ (UT Khader) ಅವರನ್ನು ತಮ್ಮ ಪಕ್ಷದ ವತಿಯಿಂದ ಅಭಿನಂದಿಸಿದರು. ಭಾಷಣದಲ್ಲಿ ಅವರು ಖಾದರ್ ಅವರ ಸರಳ ಮತ್ತು ಸಜ್ಜನಿಕೆ ಸ್ವಭಾವವನ್ನು ಕೊಂಡಾಡಿದರು. ಕರಾವಳಿ ಭಾಗ ಮತೀಯ ಗಲಭೆಗಳಿಗೆ ಕುಖ್ಯಾತಿ ಪಡೆದಾಗ್ಯೂ ಒಬ್ಬ ಶಾಸಕರಾಗಿ ಖಾದರ್ ಅವರು ನಡೆದುಕೊಂಡ ರೀತಿ ಮತ್ತು ಅತ್ಯಂತ ಸಂವೇದನಾಶೀಲತೆಯಿಂದ ನೀಡುತ್ತಿದ್ದ ಹೇಳಿಕೆಗಳನ್ನು ರೆಡ್ಡಿ ಶ್ಲಾಘಿಸಿದರು. ಬಹಳ ವರ್ಷಗಳ ನಂತರ ಜನಾರ್ಧನ ರೆಡ್ಡಿ ಒಬ್ಬ ಜನ ಪ್ರತಿನಿಧಿಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ