ಕಬ್ಬನ್ ಪಾರ್ಕ್​ ವಾಯು ವಿಹಾರಕ್ಕೆ ನಾಯಿನ್ನ ಕರೆದೊಯ್ಯುವ ಮುನ್ನ ನಿಮ್ಮ ಬಳಿ ಇವೆಲ್ಲ ಇರಲೇಬೇಕು, ಎಚ್ಚರಾ!

ಕಬ್ಬನ್ ಪಾರ್ಕ್ ವಾಯು ವಿಹಾರಕ್ಕೆ ಬರುವಾಗ ತಮ್ಮ ತಮ್ಮ ಮುದ್ದಿನ ನಾಯಿಗಳನ್ನು ಜೊತೆಯಲ್ಲಿ ತರುವವರಿಗೆ ಕೆಲವು ನಿಯಮಗಳನ್ನು ಪಾಲಿಸಬೇಕೆಂದು ತೋಟಗಾರಿಕೆ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. ಉದ್ಯಾನವನಕ್ಕೆ ಸಾಕು ನಾಯಿಗಳನ್ನು ಕರೆತರುವ ಜೊತೆಯಲ್ಲಿ ಅದರ ಆರೋಗ್ಯ ಪ್ರಮಾಣಪತ್ರ ಕಡ್ಡಾಯವಾಗಿ ತರಬೇಕು. ನಿಯಮ ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ವಾಕ್ ಮಾಡಲು ಹೊರಗಡೆ ಹೋದಾಗ ನಾಯಿಗಳನ್ನು ಕರೆದೊಯ್ಯುವುದು ಸಹಜ. ಆದರೆ ಕೆಲವೊಮ್ಮೆ ಇದರಿಂದ ಜನರಿಗೆ ನಾನಾ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ ಗೆ […]

ಕಬ್ಬನ್ ಪಾರ್ಕ್​ ವಾಯು ವಿಹಾರಕ್ಕೆ ನಾಯಿನ್ನ ಕರೆದೊಯ್ಯುವ ಮುನ್ನ ನಿಮ್ಮ ಬಳಿ ಇವೆಲ್ಲ ಇರಲೇಬೇಕು, ಎಚ್ಚರಾ!
ಸಾಧು ಶ್ರೀನಾಥ್​

Updated on: Nov 10, 2020 | 1:23 PM

ಕಬ್ಬನ್ ಪಾರ್ಕ್ ವಾಯು ವಿಹಾರಕ್ಕೆ ಬರುವಾಗ ತಮ್ಮ ತಮ್ಮ ಮುದ್ದಿನ ನಾಯಿಗಳನ್ನು ಜೊತೆಯಲ್ಲಿ ತರುವವರಿಗೆ ಕೆಲವು ನಿಯಮಗಳನ್ನು ಪಾಲಿಸಬೇಕೆಂದು ತೋಟಗಾರಿಕೆ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. ಉದ್ಯಾನವನಕ್ಕೆ ಸಾಕು ನಾಯಿಗಳನ್ನು ಕರೆತರುವ ಜೊತೆಯಲ್ಲಿ ಅದರ ಆರೋಗ್ಯ ಪ್ರಮಾಣಪತ್ರ ಕಡ್ಡಾಯವಾಗಿ ತರಬೇಕು. ನಿಯಮ ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ವಾಕ್ ಮಾಡಲು ಹೊರಗಡೆ ಹೋದಾಗ ನಾಯಿಗಳನ್ನು ಕರೆದೊಯ್ಯುವುದು ಸಹಜ. ಆದರೆ ಕೆಲವೊಮ್ಮೆ ಇದರಿಂದ ಜನರಿಗೆ ನಾನಾ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ ಗೆ ಹೋಗುವವರಿಗೆ ಹೊಸ ನಿರ್ಬಂಧನೆಗಳನ್ನು ತೋಟಗಾರಿಕೆ ಇಲಾಖೆ ಜಾರಿಗೊಳಿಸಿದೆ.

ನಿಯಮಗಳೇನು: ನಾಯಿಗಳಿಗೆ ಮುಖಗವಸು (ಮಾಸ್ಕ್) ಮತ್ತು ಲಸಿಕೆ ಹಾಕಿಸಿ, ಜೊತೆಗೆ ಆರೋಗ್ಯ ಪ್ರಮಾಣಪತ್ರ ತಂದರೆ ಪಾರ್ಕ್ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ನಾಯಿಯ ಕೊರಳು ಪಟ್ಟಿಗೆ ಸಿಲುಕಿಸುವ ಚೈನ್ ನನ್ನು ಮಾಲಿಕರು ಹಿಡಿತದಲ್ಲಿರಿಸಿಕೊಳ್ಳಬೇಕು.

ಉದ್ಯಾನವನದ ಒಳಗೆ ನಾಯಿಗಳು ಮಲ ಹಾಗೂ ಮೂತ್ರ ವಿಸರ್ಜನೆ ಮಾಡಿದರೆ ಸಂಬಂಧಪಟ್ಟ ಮಾಲಿಕರೇ ಶುಚಿಗೊಳಿಸಬೇಕು. ನಿಯಮಗಳನ್ನು ನಿರ್ಲಕ್ಷಿಸಿಸುವ ಮಾಲಿಕರಿಗೆ ಇಂತಿಷ್ಟು ದಂಡ ಹಾಕುವುದು ಅಂತಾನೂ ನಿಗದಿಯಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us