AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಚೆನ್ನಾಗಿರಬೇಕಂದ್ರೆ ಸ್ಮಾರ್ಟ್​ಫೋನ್ ಬಳಕೆ ಬಿಟ್ಟುಬಿಡಿ; ಆದರೆ ಹೇಗೆ ಬಿಡೋದು?

ಇಷ್ಟು ಸೂತ್ರಗಳನ್ನು ಅಳವಡಿಡಿಕೊಂಡರೆ ಸಾಕು ಏನೋ ಯಾವಾಗಲೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರ್ತೀಯಾ? ಮೊಬೈಲ್ ಇಟ್ಟು ಒಂದು ನಿಮಿಷವಾದರೂ ಇರೋಕೆ ಆಗಲ್ವಾ ಎಂಬ ಅಮ್ಮನ ಬೈಗುಳದಿಂದ ಪಾರಾಗಬಹುದು!

ಆರೋಗ್ಯ ಚೆನ್ನಾಗಿರಬೇಕಂದ್ರೆ ಸ್ಮಾರ್ಟ್​ಫೋನ್ ಬಳಕೆ ಬಿಟ್ಟುಬಿಡಿ; ಆದರೆ ಹೇಗೆ ಬಿಡೋದು?
ಸ್ಮಾರ್ಟ್​ಫೋನ್ ಬಳಕೆ ಕಡಿಮೆ ಮಾಡುವ ಸೂತ್ರಗಳು
Follow us
guruganesh bhat
|

Updated on: Mar 20, 2021 | 10:40 AM

ಇದು ಎಲೆಕ್ಟ್ರಾನಿಕ್ ಗ್ಯಾಡ್ಜೆಟ್​ಗಳ ಯುಗ. ಇಂದು ಮಾರುಕಟ್ಟೆಗೆ ಬಂದ ಗ್ಯಾಡ್ಜೆಟ್ ನಾಳೆ ಇರಲ್ಲ. ಹೊಸ ಫೀಚರ್​ಗಳ ಇನ್ನಷ್ಟು ಆಧುನಿಕ ಗ್ಯಾಡ್ಜೆಟ್ ನಿಮಗೆ ಸ್ವಾಗತ ಕೋರುತ್ತೆ. ಇಷ್ಟು ಫಾಸ್ಟ್ ಯುಗದಲ್ಲಿ ಸ್ಮಾರ್ಟ್​ಫೋನ್​ಗಳೆಂಬ ಸಂಗಾತಿಗಳನ್ನು ನಮ್ಮ ತೆಕ್ಕೆಯಲ್ಲಿ ಮುದ್ದಾಡುತ್ತಲೇ ಇರುತ್ತೇವೆ ನಾವು. ನಮ್ಮೆಲ್ಲರಿಗೂ ಆಪ್ತ ಗೆಳೆಯ ಗೆಳತಿಯ ಸ್ಥಾನವನ್ನು ಸ್ಮಾರ್ಟ್​ಫೋನ್​ಗಳು ಅತಿಕ್ರಮಿಸಿವೆ. ನಮ್ಮ ಎಲ್ಲ ಗುಟ್ಟುಗಳನ್ನು ಅರಿತಿವೆ. ಹಾಗೆಯೇ ಇದೇ ಸ್ಮಾರ್ಟ್​ಫೋನ್​ಗಳು ನಮ್ಮ ಪಾಲಿನ ಶತ್ರುವೂ ಆಗಿವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರದ ಸತ್ಯ. ಅದು ಹೇಗೆ ಅಂತೀರಾ ಈ ಸ್ಟೋರಿ ಓದಿ..

ಏನೋ ಯಾವಾಗಲೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರ್ತೀಯಾ? ಮೊಬೈಲ್ ಇಟ್ಟು ಒಂದು ನಿಮಿಷವಾದರೂ ಇರೋಕೆ ಆಗಲ್ವಾ ಎಂದು ಎಲ್ಲರ ಅಮ್ಮಂದಿರೂ ಬೈಯುತ್ತಾರೆ. ಅವರ ಬೈಗುಳದ ಹಿಂದೆ ಇರುವ ಆರೋಗ್ಯ ಕಾಳಜಿ ನಮಗೆ ನೆನಪಾಗುವುದಿಲ್ಲ. ಮುಂದೊಂದು ದಿನ ಕಣ್ಣಿನ ಸಮಸ್ಯೆ ಅಥವಾ ಇನ್ನೊಂದು ಯಾವುದೋ ಸಮಸ್ಯೆ ತಲೆದೋರಿದಾಗಲೇ ನೆನಪಾಗುತ್ತದೆ.

ಸ್ಮಾರ್ಟ್​ಫೋನ್​ಗಳು ಅಡಿಕ್ಷನ್ ಎಂಬುದು ನಮ್ಮ ಮೇಲೆ ನೇರವಾಗಿ ಆಕ್ರಮಣ ಮಾಡುವ ಶತ್ರು. ಸ್ಮಾರ್ಟ್​ಫೋನ್​ ಅಡಿಕ್ಷನ್​ನಿಂದ ಹೊರಬರುವುದು ಹೇಗೆ ಎಂದು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ,

ಸ್ಮಾರ್ಟ್​ಫೋನ್​ ಅಡಿಕ್ಷನ್ನಿಂದ ಹೊರಬರಲು ಮೊದಲು ನೀವು ಗಟ್ಟಿ ನಿರ್ಧಾರ ಮಾಡಬೇಕು. ಕೆಲವು ಸಮಯದಲ್ಲಾದರೂ ಮೊಬೈಲ್ ಅಥವಾ ಸ್ಮಾರ್ಟ್​ಫೋನ್​ ಮುಟ್ಟುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಬೇಕು. ಉದಾಹರಣೆಗೆ ಊಟ ಮಾಡುವಾಗ ಸುಖಾಸುಮ್ಮನೆ ಸ್ಮಾರ್ಟ್​ಫೋನ್​ ಬಳಕೆ ಮಾಡಬಾರದು.

ಕುಟುಂಬದ ಜತೆ ಕಳೆಯುವ ಆಪ್ತ ಕ್ಷಣಗಳಲ್ಲಿ ಯಾವುದೇ ಕಾರಣಕ್ಕೂ ಸ್ಮಾರ್ಟ್​ಫೋನ್​ ಬಳಕೆ ಮಾಡಬಾರದು.

ನೀವು ಯಾವುದೇ ಉಪಯೋಗವಿಲ್ಲದಿದ್ದರು ಅತ್ಯಂತ ಹೆಚ್ಚು ಬಳಸುವ ಆ್ಯಪ್ ಯಾವುದು ಪತ್ತೆಹಚ್ಚಿ. ಅದನ್ನು ಮೊದಲು ಅನ್ಇನ್ಸ್ಟಾ​ಲ್ ಮಾಡಿ. ಇದರಿಂದ ನಿಮ್ಮ ಸಮಯ ಉಳಿಯುತ್ತದೆ. ಇದು ಸುಳ್ಳು ಎನಿಸಿದರೆ ಒಮ್ಮೆ ಪ್ರಯೋಗಕ್ಕಾದರೂ ಮಾಡಿನೋಡಿ. ನಂತರ ನಿಮಗೇ ಅನಿಸುತ್ತದೆ ಅರೇ! ನನ್ನ ಇಷ್ಟೊಂದು ಸಮಯವನ್ನು ಈ ಆ್ಯಪ್​ಗಳು ಗುಳುಂ ಮಾಡುತ್ತಿದ್ದವೇ?! ಎಂದು.

ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ. ಅವಶ್ಯವಿದ್ದರಷ್ಟೇ ಸಾಮಾಜಿಕ ತಾಣಗಳನ್ನು ಬಳಸಿ. ಬೇಸರವಾಗುತ್ತಿದೆ ಅಥವಾ ಬೋರ್ ಬರುತ್ತಿದೆ ಎಂದು ಸೋಷಿಯಲ್ ಮೀಡಿಯಾ ಬಳಕೆ ಬೇಡ.

ರಾತ್ರಿ ಮಲಗುವ ಒಂದು ಗಂಟೆಗೂ ಮುನ್ನ ಸ್ಮಾರ್ಟ್​ಫೋನ್​ ಬಳಕೆ ನಿಲ್ಲಿಸಿ. ಇದನ್ನು ಒಮ್ಮೆ ಅಭ್ಯಾಸ ಮಾಡಿಕೊಂಡರೆ ಸಾಕು.

ಇಷ್ಟು ಸೂತ್ರಗಳನ್ನು ಅಳವಡಿಡಿಕೊಂಡರೆ ಸಾಕು ಏನೋ ಯಾವಾಗಲೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರ್ತೀಯಾ? ಮೊಬೈಲ್ ಇಟ್ಟು ಒಂದು ನಿಮಿಷವಾದರೂ ಇರೋಕೆ ಆಗಲ್ವಾ ಎಂಬ ಅಮ್ಮನ ಬೈಗುಳದಿಂದ ಪಾರಾಗಬಹುದು!

ಇದನ್ನೂ ಓದಿ: ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?

ನಿಮಗೆ ಗೊತ್ತಾ ಮಧುಮೇಹದ ಅಪಾಯ ಈ ರಕ್ತದ ಗುಂಪಿನವರಿಗೇ ಜಾಸ್ತಿಯಂತೆ? ನಿಮ್ಮ ಬ್ಲಡ್​ ಗ್ರೂಪ್​ ಯಾವುದು ನೋಡಿಕೊಳ್ಳಿ !

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ