ಪುಂಡಿಗಿಡದಲ್ಲಿ ಬೊಮ್ಮಸಾಗರದ ದುರ್ಗಾದೇವಿ ಅವತಾರವಂತೆ.. ವದಂತಿ ಕೇಳಿ ಹರಿದು ಬಂದ ಭಕ್ತ ಗಣ, ಯಾವೂರಲ್ಲಿ?

ಪುಂಡಿಗಿಡ ಕತ್ತರಿಸಲು ಹೋದಾಗ ಕುಡಗೋಲು ಕಸಿದು ಬೀಸಾಕಿದ ಅನುಭವವಾಯಿತಂತೆ. ತದ ನಂತರ ತಾನೂ ಪುಂಡಿಗಿಡದಲ್ಲಿ ನೆಲೆಸಿದ್ದೇನೆ ಎಂದು ಸ್ವತಃ ದುರ್ಗಾದೇವಿ, ಜೋಗತಿ ಮಹಿಳೆಯ ಮೇಲೆ ಬಂದು ಹೇಳಿದ್ದಾಳಂತೆ

ಪುಂಡಿಗಿಡದಲ್ಲಿ ಬೊಮ್ಮಸಾಗರದ ದುರ್ಗಾದೇವಿ ಅವತಾರವಂತೆ.. ವದಂತಿ ಕೇಳಿ ಹರಿದು ಬಂದ ಭಕ್ತ ಗಣ, ಯಾವೂರಲ್ಲಿ?

Updated on: Dec 26, 2020 | 7:33 AM

ಬಾಗಲಕೋಟೆ: ಪುಂಡಿಗಿಡದಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ ಎನ್ನುವ ಸುದ್ದಿ ಕೇಳಿ ಹತ್ತಾರು ಊರುಗಳಿಂದ ಜನರು ತಂಡ ತಂಡವಾಗಿ ಬರುತ್ತಿರುವ ಘಟನೆ ಬಾದಾಮಿ ತಾಲೂಕಿನಲ್ಲಿ ನಡೆದಿದೆ.

ಬಾದಾಮಿ ತಾಲೂಕಿನ ಢಾಣಕಶಿರೂರ ದಾರಿಯ ಬಳಿ ಇರುವ ಮದಕಟ್ಟಿ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಗದಗ ಜಿಲ್ಲೆ ಗಜೇಂದ್ರಗಡದ ಪ್ರಸಿದ್ದ ಬೊಮ್ಮಸಾಗರದ ದುರ್ಗಾದೇವಿ ಪುಂಡಿಗಿಡದಲ್ಲಿ ನೆಲೆಸಿದ್ದಾಳೆ ಎಂಬ ವದಂತಿ ಸುತ್ತಮುತ್ತಲಿನ ಗ್ರಾಮದಲ್ಲಿ ಹಬ್ಬಿದೆ. ಹೀಗಾಗಿ ಸುದ್ದಿ ಹಬ್ಬಿದ್ದೆ ತಡ ಗಿಡಕ್ಕೆ ಭರ್ಜರಿ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಅಲ್ಲದೆ ಈ ವಿಚಿತ್ರವನ್ನ ನೋಡಲು ಹತ್ತಾರು ಊರುಗಳಿಂದ ಜನರು ತಂಡ ತಂಡವಾಗಿ ಬರಲು ಆರಂಭ ಮಾಡಿದ್ದಾರೆ.

ಅಸಲಿಗೆ ಆಗಿರುವುದೆನೆಂದರೆ.. ಪುಂಡಿಗಿಡ ಕತ್ತರಿಸಲು ಹೋದಾಗ ಕುಡಗೋಲು ಕಸಿದು ಬೀಸಾಕಿದ ಅನುಭವವಾಯಿತಂತೆ. ತದ ನಂತರ ತಾನೂ ಪುಂಡಿಗಿಡದಲ್ಲಿ ನೆಲೆಸಿದ್ದೇನೆ ಎಂದು ಸ್ವತಃ ದುರ್ಗಾದೇವಿ, ಜೋಗತಿ ಮಹಿಳೆಯ ಮೇಲೆ ಬಂದು ಹೇಳಿದ್ದಾಳಂತೆ ಎಂಬ ವದಂತಿ ಸುತ್ತಮುತ್ತಲಿನ ಗ್ರಾಮಗಳಿಗೆ ಹಬ್ಬಿದೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ದುರ್ಗಾದೇವಿ ದರ್ಶನಕ್ಕೆಂದು ಹತ್ತಾರು ಊರುಗಳ ನೂರಾರು ಜನರು ಪುಂಡಿಗಿಡದ ಮಹಾತ್ಮೆ ನೋಡಲು ಬರ್ತಿದ್ದಾರೆ.