MSIL ಮದ್ಯದಂಗಡಿ ಧಗಧಗ! ಲಕ್ಷಾಂತರ ಮೌಲ್ಯದ ಮದ್ಯಕ್ಕೆ ಬೆಂಕಿಯಿಟ್ಟಿದ್ದು ಯಾರು?

ಚಾಮರಾಜನಗರ: ಇದು ನಿಜಕ್ಕೂ ಮದ್ಯಪ್ರೇಮಿಗಳಿಗೆ ಭಾರೀ ಬೇಸರ ತರಿಸುವ ಸಂಗತಿ. ಕಣ್ಣೆದುರೇ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಅಗ್ನಿಗಾಹುತಿಯಾದ್ರೆ, ಕುಡುಕರ ಹೊಟ್ಟೆ ಭಗ್ ಅನ್ನಲ್ವಾ? ಹೌದು ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಎಂಎಸ್ಐಎಲ್ ಮದ್ಯದಂಗಡಿಗೆ ಬೆಂಕಿ ಬಿದ್ದಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯದಂಗಡಿಗೆ ಬೆಂಕಿ ಬಿದ್ದಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಥವಾ ಕಳೆದ ಎರಡು ತಿಂಗಳಿನಿಂದ ಮದ್ಯ ಸಿಗದಿದ್ದಕ್ಕೆ ಯಾರೋ ಕಿರಾತಕ ಇಂತಹ ಕುಕೃತ್ಯ ಎಸಗಿದ್ದಾನಾ ಎಂಬ ಅನುಮಾನವೂ ಮೂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ […]

MSIL ಮದ್ಯದಂಗಡಿ ಧಗಧಗ! ಲಕ್ಷಾಂತರ ಮೌಲ್ಯದ ಮದ್ಯಕ್ಕೆ ಬೆಂಕಿಯಿಟ್ಟಿದ್ದು ಯಾರು?
ಸಾಧು ಶ್ರೀನಾಥ್​

Updated on: May 11, 2020 | 1:23 PM

ಚಾಮರಾಜನಗರ: ಇದು ನಿಜಕ್ಕೂ ಮದ್ಯಪ್ರೇಮಿಗಳಿಗೆ ಭಾರೀ ಬೇಸರ ತರಿಸುವ ಸಂಗತಿ. ಕಣ್ಣೆದುರೇ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಅಗ್ನಿಗಾಹುತಿಯಾದ್ರೆ, ಕುಡುಕರ ಹೊಟ್ಟೆ ಭಗ್ ಅನ್ನಲ್ವಾ? ಹೌದು ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಎಂಎಸ್ಐಎಲ್ ಮದ್ಯದಂಗಡಿಗೆ ಬೆಂಕಿ ಬಿದ್ದಿದೆ.

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯದಂಗಡಿಗೆ ಬೆಂಕಿ ಬಿದ್ದಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಥವಾ ಕಳೆದ ಎರಡು ತಿಂಗಳಿನಿಂದ ಮದ್ಯ ಸಿಗದಿದ್ದಕ್ಕೆ ಯಾರೋ ಕಿರಾತಕ ಇಂತಹ ಕುಕೃತ್ಯ ಎಸಗಿದ್ದಾನಾ ಎಂಬ ಅನುಮಾನವೂ ಮೂಡಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಆಕಸ್ಮಿಕವೇ, ಉದ್ದೇಶ ಪೂರ್ವಕವಾಗಿ ಹಾಕಲಾಗಿದೆಯೇ ತನಿಖೆ ನಡೆಸುವಂತೆ ಸ್ಥಳೀಯರ ಆಗ್ರಹಿಸುತ್ತಿದ್ದಾರೆ.

Published On - 1:20 pm, Mon, 11 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us