ಮಾಲ್ ಆರಂಭವಾಗಿ 2 ವಾರವಾಯ್ತು: ಜನ ಬರುತ್ತಿಲ್ಲ, ಮತ್ತೆ ಲಾಕ್​ಡೌನ್​ ಮಾಡಬೇಡಿ ಪ್ಲೀಸ್!

ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್​​ಡೌನ್​ ಜಾರಿ ಮಾಡಲಾಗಿತ್ತು. ಆದ್ರೆ ಅದರಿಂದ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ವರ್ತರ ಆದಾಯ  ಅಕ್ಷರಶಃ ಪಾತಾಳ ಕಚ್ಚಿತ್ತು. ಆದರೆ, ಕಳೆದ ಎರಡು ವಾರಗಳ ಹಿಂದೆ ಕುಸಿದಿದ್ದ ಆರ್ಥಿಕ ವಹಿವಾಟಿಗೆ ಮತ್ತೆ ಉತ್ತೇಜನೆ ನೀಡಲು ಮಾಲ್​ ಮತ್ತು ಇತರೆ ಸಂಸ್ಥೆಗಳನ್ನ ಮತ್ತೆ  ಆರಂಭಿಸಲು ಅನುಮತಿ ನೀಡಲಾಗಿತ್ತು. ಆದರೆ, ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು ಪುನಃ ಲಾಕ್​ಡೌನ್​ ಜಾರಿಗೊಳಿಸಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ.  ಬಟ್​ ಇದಕ್ಕೆ […]

ಮಾಲ್ ಆರಂಭವಾಗಿ 2 ವಾರವಾಯ್ತು: ಜನ ಬರುತ್ತಿಲ್ಲ, ಮತ್ತೆ ಲಾಕ್​ಡೌನ್​ ಮಾಡಬೇಡಿ ಪ್ಲೀಸ್!
ಸಾಧು ಶ್ರೀನಾಥ್​ Edited By:

Updated on: Jun 23, 2020 | 5:46 PM

ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್​​ಡೌನ್​ ಜಾರಿ ಮಾಡಲಾಗಿತ್ತು. ಆದ್ರೆ ಅದರಿಂದ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ವರ್ತರ ಆದಾಯ  ಅಕ್ಷರಶಃ ಪಾತಾಳ ಕಚ್ಚಿತ್ತು. ಆದರೆ, ಕಳೆದ ಎರಡು ವಾರಗಳ ಹಿಂದೆ ಕುಸಿದಿದ್ದ ಆರ್ಥಿಕ ವಹಿವಾಟಿಗೆ ಮತ್ತೆ ಉತ್ತೇಜನೆ ನೀಡಲು ಮಾಲ್​ ಮತ್ತು ಇತರೆ ಸಂಸ್ಥೆಗಳನ್ನ ಮತ್ತೆ  ಆರಂಭಿಸಲು ಅನುಮತಿ ನೀಡಲಾಗಿತ್ತು.

ಆದರೆ, ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು ಪುನಃ ಲಾಕ್​ಡೌನ್​ ಜಾರಿಗೊಳಿಸಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ.  ಬಟ್​ ಇದಕ್ಕೆ ಮಾಲ್​ಗಳ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಲ್​​ಗಳು ಆರಂಭವಾಗಿ ಕೇವಲ ಎರಡು ವಾರಗಳಾಗಿದೆ. ಮತ್ತೆ ಲಾಕ್​​ಡೌನ್ ಜಾರಿ ಮಾಡಿದ್ರೆ ತುಂಬಾ ತೊಂದರೆಯಾಗುತ್ತೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸದ್ಯಕ್ಕೆ ಕೇವಲ 10%  ರಷ್ಟು ಮಾತ್ರ ಜನರು ಮಾಲ್​ಗಳಿಗೆ ಭೇಟಿ ಕೊಡ್ತಿದ್ದಾರೆ. ವ್ಯಾಪಾರ ವಹಿವಾಟಿಲ್ಲದೆ ಮಳಿಗೆಗಳು ಬಿಕೋ ಎನ್ನುತ್ತಿವೆ. ಹಾಗಾಗಿ ಸದ್ಯಕ್ಕೆ ಲಾಕ್​ಡೌನ್​ ಜಾರಿಗೊಳಿಸುವುದು ಬೇಡ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬೇಕಿದ್ದರೆ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳೋಕೆ ರೆಡಿ. ಜೊತೆಗೆ ಸರ್ಕಾರದ ಈಗಿನ ನಿಯಮಗಳನ್ನ ಚಾಚೂ ತಪ್ಪದೆ ಪಾಲಿಸುತ್ತೇವೆ ಎಂದು ನಗರದ ಮಾಲ್​ವೊಂದರ ಮ್ಯಾನೇಜರ್​ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Published On - 5:42 pm, Tue, 23 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us