ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀನಿ ಅಂತಾ ನಂಬಿಸಿ.. ಹೆಂಡ್ತಿಯನ್ನ ಕೊಲೆಗೈದುಬಿಟ್ಟ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಗಂಡನಿಂದಲೇ ಪತ್ನಿಯ‌ ಕೊಲೆಯಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಹೊರವಲಯದಲ್ಲಿ ನಡೆದಿದೆ. ವಿದ್ಯಾ ಕೇಶಪ್ಪನವರ್(25) ಕೊಲೆಯಾದ ಮಹಿಳೆ. ಹೆಂಡತಿಯನ್ನ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ನಂಬಿಸಿದ ಪತಿರಾಯ ನಿಂಗಪ್ಪ ಕೇಶಪ್ಪನವರ್ ದಾರಿ ಮಧ್ಯೆ ಹೆಂಡತಿಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಂಗಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀನಿ ಅಂತಾ ನಂಬಿಸಿ.. ಹೆಂಡ್ತಿಯನ್ನ ಕೊಲೆಗೈದುಬಿಟ್ಟ
Updated By: ಸಾಧು ಶ್ರೀನಾಥ್​

Updated on: Aug 15, 2020 | 2:55 PM

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಗಂಡನಿಂದಲೇ ಪತ್ನಿಯ‌ ಕೊಲೆಯಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಹೊರವಲಯದಲ್ಲಿ ನಡೆದಿದೆ. ವಿದ್ಯಾ ಕೇಶಪ್ಪನವರ್(25) ಕೊಲೆಯಾದ ಮಹಿಳೆ.

ಹೆಂಡತಿಯನ್ನ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ನಂಬಿಸಿದ ಪತಿರಾಯ ನಿಂಗಪ್ಪ ಕೇಶಪ್ಪನವರ್ ದಾರಿ ಮಧ್ಯೆ ಹೆಂಡತಿಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಂಗಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.