ಟಿಬೆಟ್ ಯುವಕನ ಹತ್ಯೆ ಯತ್ನ, 8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಮೈಸೂರು:ಎಂಟು ವರ್ಷದ ಹಿಂದೆ ಡ್ರ್ಯಾಗರ್​ನಿಂದ ಚುಚ್ಚಿ ಟಿಬೆಟ್ ಯುವಕನ ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ದುಬೈ, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು ಮೈಸೂರಿನಲ್ಲಿ ಎಂಟು ವರ್ಷದ ಹಿಂದೆ ಟಿಬೆಟ್​ ಯುವಕ ತನ್ ಜಿನ್ ದರ್ ಗ್ಯಾಲ್​ನನ್ನು ಡ್ರ್ಯಾಗರ್​ನಿಂದ ಚುಚ್ಚಿ, ಸಲೀಂ ಪಾಷಾ,ಸಲ್ಮಾನ್ ಪಾಷಾ, ಇಸ್ಮಾಯಿಲ್ ಖಾನ್ ಎಂಬ ಆರೋಪಿಗಳು ಕೊಲ್ಲುವ ಯತ್ನ ನಡೆಸಿದ್ದರು. ಪ್ರಕರಣದ ನಂತರ ಈ ಆರೋಪಿಗಳು ದುಬೈ ಹಾಗೂ ಕೆಲ ಕಾಲ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು. ಎಂಟು ವರ್ಷಗಳ ಕಾಲ […]

ಟಿಬೆಟ್ ಯುವಕನ ಹತ್ಯೆ ಯತ್ನ, 8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​

Updated on: Sep 02, 2020 | 12:45 PM

ಮೈಸೂರು:ಎಂಟು ವರ್ಷದ ಹಿಂದೆ ಡ್ರ್ಯಾಗರ್​ನಿಂದ ಚುಚ್ಚಿ ಟಿಬೆಟ್ ಯುವಕನ ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ದುಬೈ, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು
ಮೈಸೂರಿನಲ್ಲಿ ಎಂಟು ವರ್ಷದ ಹಿಂದೆ ಟಿಬೆಟ್​ ಯುವಕ ತನ್ ಜಿನ್ ದರ್ ಗ್ಯಾಲ್​ನನ್ನು ಡ್ರ್ಯಾಗರ್​ನಿಂದ ಚುಚ್ಚಿ, ಸಲೀಂ ಪಾಷಾ,ಸಲ್ಮಾನ್ ಪಾಷಾ, ಇಸ್ಮಾಯಿಲ್ ಖಾನ್ ಎಂಬ ಆರೋಪಿಗಳು ಕೊಲ್ಲುವ ಯತ್ನ ನಡೆಸಿದ್ದರು. ಪ್ರಕರಣದ ನಂತರ ಈ ಆರೋಪಿಗಳು ದುಬೈ ಹಾಗೂ ಕೆಲ ಕಾಲ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು.

ಎಂಟು ವರ್ಷಗಳ ಕಾಲ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಈಗ ಮೈಸೂರಿನ ದೇವರಾಜ ಠಾಣೆಯ ಪೊಲೀಸರು ಬಂಧಿಸಿದ್ದು, ವಿಚಾರಣೆಯ ನಂತರ ನ್ಯಾಯಲಯಕ್ಕೆ ಹಾಜರು ಪಡಿಸಲಿದ್ದಾರೆ.

Published On - 12:45 pm, Wed, 2 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us