ಪ್ರತಿಭಟನೆ ಮಾಡಿ.. ಆದ್ರೆ ವೈರಸ್​ ಬಗ್ಗೆ ಸ್ವಲ್ಪ ಕೇಳಿ – ಮೈಸೂರು SP ಕೊರೊನಾ ಪಾಠ

ಮೈಸೂರು‌: ಪ್ರತಿಭಟನಾನಿರತ ರೈತರಿಗೆ ಜಿಲ್ಲಾ ಪೊಲೀಸ್ SP ರಿಷ್ಯಂತ್ ಕೊರೊನಾ ಪಾಠ ಮಾಡಿದ್ದಾರೆ. ಜಿಲ್ಲೆಯ ನಂಜನಗೂಡಿನ ಮಿನಿ ವಿಧಾನಸೌಧದ ಕಚೇರಿಯ ಮುಂಭಾಗದಲ್ಲಿ ಘಟನೆ ನಡೆದಿದೆ. ರೈತ-ಕಾರ್ಮಿಕ‌ ಸಂಘಟನೆಗಳ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ SP ರಿಷ್ಯಂತ್ ಪ್ರತಿಭಟನಾಕಾರರಿಗೆ ಕೊರೊನಾವೈರಸ್ ಸೋಂಕಿನ ಕುರಿತು ಅರಿವು ಮೂಡಿಸಿದ್ದಾರೆ. ಪ್ರತಿಭಟನೆ […]

ಪ್ರತಿಭಟನೆ ಮಾಡಿ.. ಆದ್ರೆ ವೈರಸ್​ ಬಗ್ಗೆ ಸ್ವಲ್ಪ ಕೇಳಿ - ಮೈಸೂರು SP ಕೊರೊನಾ ಪಾಠ
Edited By:

Updated on: Sep 28, 2020 | 2:14 PM

ಮೈಸೂರು‌: ಪ್ರತಿಭಟನಾನಿರತ ರೈತರಿಗೆ ಜಿಲ್ಲಾ ಪೊಲೀಸ್ SP ರಿಷ್ಯಂತ್ ಕೊರೊನಾ ಪಾಠ ಮಾಡಿದ್ದಾರೆ. ಜಿಲ್ಲೆಯ ನಂಜನಗೂಡಿನ ಮಿನಿ ವಿಧಾನಸೌಧದ ಕಚೇರಿಯ ಮುಂಭಾಗದಲ್ಲಿ ಘಟನೆ ನಡೆದಿದೆ.

ರೈತ-ಕಾರ್ಮಿಕ‌ ಸಂಘಟನೆಗಳ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ SP ರಿಷ್ಯಂತ್ ಪ್ರತಿಭಟನಾಕಾರರಿಗೆ ಕೊರೊನಾವೈರಸ್ ಸೋಂಕಿನ ಕುರಿತು ಅರಿವು ಮೂಡಿಸಿದ್ದಾರೆ.

ಪ್ರತಿಭಟನೆ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಪ್ರತಿಭಟನೆಯನ್ನು ಕಸಿದುಕೊಳ್ಳುವ ಅಥವಾ ಹತ್ತಿಕ್ಕುವ ಯಾವುದೇ ಪ್ರಯತ್ನ ನಮ್ಮದಲ್ಲ. ಕಾನೂನುಬಾಹಿರ ಪ್ರತಿಭಟನೆಗೆ ಕಡಿವಾಣ ಹಾಕುತ್ತೇವೆ. ಆದರೆ, ಕಾನೂನುಬದ್ಧವಾಗಿ ಪ್ರತಿಭಟನೆ ನಡೆಸಿದರೆ ಸಹಕರಿಸುತ್ತೇವೆ ಎಂದು SP ರಿಷ್ಯಂತ್ ಹೇಳಿದರು.

ಜೀವ ಬದುಕಿದರೆ ಏನು ಬೇಕಾದರೂ ಸಾಧಿಸಬಹುದು. ಜೀವ ಕಳೆದುಕೊಂಡಾಗ ವ್ಯಥೆ ಪಡುವವರು ಕುಟುಂಬಸ್ಥರು. ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಿ. ಕೊರೊನಾ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ರಾಜ್ಯದಲ್ಲಿ ಎಷ್ಟೋ ಜನರ ಪ್ರಾಣವನ್ನು ಕೊರೊನಾ ನುಂಗಿದೆ.

ವಾಸ್ತವತೆ ಹೀಗಿರುವಾಗ ಎಚ್ಚರಿಕೆಯಿಂದ, ಜಾಗೃತಿಯಿಂದ ಕಾನೂನುಬದ್ಧವಾಗಿ ಪ್ರತಿಭಟನೆ ಮಾಡುವುದು ಒಳಿತು ಎಂದು ಪ್ರತಿಭಟನಾಕಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಹೇಳಿದರು. ಖುದ್ದು ಕೊರೊ‌ನಾ ಸೋಂಕಿತರಾಗಿ ಗುಣಮುಖರಾಗಿದ್ದ ಪೊಲೀಸ್​ ವರಿಷ್ಠಾಧಿಕಾರಿ CB ರಿಷ್ಯಂತ್ ಮಾತಿಗೆ ಪ್ರತಿಭಟನಾಕಾರರು ಸಮ್ಮತಿಸಿದರು.