
ಬೆಂಗಳೂರು: ನಾಡಿನಲ್ಲಿಂದು ನಾಗರ ಪಂಚಮಿಯ ಸಡಗರ. ಹಾಗಾಗಿ, ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ನೆರವೇರಿಸಲು ರಾಜ್ಯದ ದೇವಸ್ಥಾನಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ಅಂಥದ್ದೇ ದೃಶ್ಯಗಳು ಕಂಡುಬಂದಿದ್ದು ನಗರದ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ.
ಸನ್ನಿಯ ನಾಗನ ಪೂಜೆಗೆ ಭಕ್ತರು ಆಗಮಿಸಿದ ದೃಶ್ಯಗಳು ಕಂಡುಬಂತು. ಬೆಳ್ಳಂ ಬೆಳ್ಳಗ್ಗೆ ನಾಗನಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿ ಪಾರ್ಥಿಸಿದ ಭಕ್ತರು ಸಾಮಾಜಿಕ ಅಂತರ ಕಾಯ್ದು ಕೊಳ್ಳೋ ನಿಟ್ಟಿನಲ್ಲಿ ಒಬ್ಬರ ಪೂಜೆ ಮುಗಿಯುವವರೆಗೂ ಮತ್ತೊಬ್ಬರು ಕಾಯುತ್ತಿರುವ ದೃಶ್ಯಗಳು ಕಂಡುಬಂದವು.
Published On - 8:33 am, Sat, 25 July 20