ನಂಜನಗೂಡು ಟಿಹೆಚ್​ಒ ಆತ್ಮಹತ್ಯೆ ಕೇಸ್: ಡಿಸಿ ಜತೆ ಟಿಹೆಚ್​ಒ ಮಾತಾಡಿದ್ದಾರೆನ್ನುವ ಆಡಿಯೋ ವೈರಲ್

ಮೈಸೂರು: ನಂಜನಗೂಡು ಟಿಹೆಚ್​ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿ ಜತೆ ಟಿಹೆಚ್​ಒ ಮಾತಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ. ಮೇಲಧಿಕಾರಿ ಕಿರುಕುಳದಿಂದ ನೇಣಿಗೆ ಶರಣಾಗಿದ್ದ ನಾಗೇಂದ್ರರಿಗೆ ಅಧಿಕಾರಿಗಳು ಕೋವಿಡ್ ಟೆಸ್ಟ್​ ವಿಚಾರದಲ್ಲಿ ಟಾರ್ಗೆಟ್ ನೀಡಿದ್ದರು. ಈ ಬಗ್ಗೆ ಡಾ.ನಾಗೇಂದ್ರ ಜತೆ ಮಾತಾಡಿದ್ದಾರೆ ಎನ್ನಲಾದ ಡಿಸಿ ಆಡಿಯೋ ಸಿಕ್ಕಿದೆ. ಆ ಆಡಿಯೋನಲ್ಲಿ ಕೊವಿಡ್ ಟೆಸ್ಟ್​ ವಿಚಾರದಲ್ಲಿ ಡಿಸಿ ಅಭಿರಾಂ ಜಿ ಶಂಕರ್ ನಾಗೇಂದ್ರಗೆ ಸ್ಪಷ್ಟನೆ ಕೇಳಿದ್ದಾರೆ. 150 ಜನರ ಕೊವಿಡ್-19​ ಟೆಸ್ಟ್ ಮಾಡಲು ಟಾರ್ಗೆಟ್​ ನೀಡಲಾಗಿತ್ತು. ಪ್ರತಿ ದಿನ […]

ನಂಜನಗೂಡು ಟಿಹೆಚ್​ಒ ಆತ್ಮಹತ್ಯೆ ಕೇಸ್: ಡಿಸಿ ಜತೆ ಟಿಹೆಚ್​ಒ ಮಾತಾಡಿದ್ದಾರೆನ್ನುವ ಆಡಿಯೋ ವೈರಲ್

Updated on: Aug 23, 2020 | 9:23 AM

ಮೈಸೂರು: ನಂಜನಗೂಡು ಟಿಹೆಚ್​ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿ ಜತೆ ಟಿಹೆಚ್​ಒ ಮಾತಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ.

ಮೇಲಧಿಕಾರಿ ಕಿರುಕುಳದಿಂದ ನೇಣಿಗೆ ಶರಣಾಗಿದ್ದ ನಾಗೇಂದ್ರರಿಗೆ ಅಧಿಕಾರಿಗಳು ಕೋವಿಡ್ ಟೆಸ್ಟ್​ ವಿಚಾರದಲ್ಲಿ ಟಾರ್ಗೆಟ್ ನೀಡಿದ್ದರು. ಈ ಬಗ್ಗೆ ಡಾ.ನಾಗೇಂದ್ರ ಜತೆ ಮಾತಾಡಿದ್ದಾರೆ ಎನ್ನಲಾದ ಡಿಸಿ ಆಡಿಯೋ ಸಿಕ್ಕಿದೆ. ಆ ಆಡಿಯೋನಲ್ಲಿ ಕೊವಿಡ್ ಟೆಸ್ಟ್​ ವಿಚಾರದಲ್ಲಿ ಡಿಸಿ ಅಭಿರಾಂ ಜಿ ಶಂಕರ್ ನಾಗೇಂದ್ರಗೆ ಸ್ಪಷ್ಟನೆ ಕೇಳಿದ್ದಾರೆ.

150 ಜನರ ಕೊವಿಡ್-19​ ಟೆಸ್ಟ್ ಮಾಡಲು ಟಾರ್ಗೆಟ್​ ನೀಡಲಾಗಿತ್ತು. ಪ್ರತಿ ದಿನ 20 ರಿಂದ 25 ಜನರಿಗೆ ಮಾತ್ರ ಟೆಸ್ಟ್​ ಮಾಡಲಾಗುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.