ಸಿದ್ದರಾಮಯ್ಯಗೆ ಹೊಸ ಕಾರ್ ಬೇಕಂತೆ.. ಆದ್ರೆ ಸ್ಪೀಕರ್ ಏನಂದ್ರು?

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೊಸ ಕಾರು ಖರೀದಿಗೆ ಸರ್ಕಾರ ಬ್ರೇಕ್ ಹಾಕಿದೆ. ಹೊಸ ಕಾರು ಖರೀದಿ ಸೇರಿದಂತೆ ಸಿದ್ದರಾಮಯ್ಯ ಮೂರು ಬೇಡಿಕೆ ಇಟ್ಟಿದ್ದರು. ಆದ್ರೆ, ಹೊಸ ಕಾರು ಖರೀದಿ ಪ್ರಸ್ತಾಪಕ್ಕೆ ವಿಧಾನಸಭೆ ಸ್ಪೀಕರ್ ಅನುಮತಿ ನೀಡಿಲ್ಲ. ಇಬ್ಬರು ಪಿಎಗಳನ್ನು ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹೊಸ ಕಾರು ಖರೀದಿ ಮಾಡಲು ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಪತ್ರ ಬರೆದಿದ್ದರು. 3 ಬೇಡಿಕೆ ಇಟ್ಟು ಬರೆದ ಪತ್ರ ಸ್ಪೀಕರ್ ಕಚೇರಿಯಲ್ಲೇ ಬಾಕಿಯಿದ್ದು, ಹಳೆಯ ಕಾರು ಬಳಕೆ […]

ಸಿದ್ದರಾಮಯ್ಯಗೆ ಹೊಸ ಕಾರ್ ಬೇಕಂತೆ.. ಆದ್ರೆ ಸ್ಪೀಕರ್ ಏನಂದ್ರು?
ಸಾಧು ಶ್ರೀನಾಥ್​

Updated on: Dec 30, 2019 | 1:59 PM

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೊಸ ಕಾರು ಖರೀದಿಗೆ ಸರ್ಕಾರ ಬ್ರೇಕ್ ಹಾಕಿದೆ. ಹೊಸ ಕಾರು ಖರೀದಿ ಸೇರಿದಂತೆ ಸಿದ್ದರಾಮಯ್ಯ ಮೂರು ಬೇಡಿಕೆ ಇಟ್ಟಿದ್ದರು. ಆದ್ರೆ, ಹೊಸ ಕಾರು ಖರೀದಿ ಪ್ರಸ್ತಾಪಕ್ಕೆ ವಿಧಾನಸಭೆ ಸ್ಪೀಕರ್ ಅನುಮತಿ ನೀಡಿಲ್ಲ.

ಇಬ್ಬರು ಪಿಎಗಳನ್ನು ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹೊಸ ಕಾರು ಖರೀದಿ ಮಾಡಲು ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಪತ್ರ ಬರೆದಿದ್ದರು. 3 ಬೇಡಿಕೆ ಇಟ್ಟು ಬರೆದ ಪತ್ರ ಸ್ಪೀಕರ್ ಕಚೇರಿಯಲ್ಲೇ ಬಾಕಿಯಿದ್ದು, ಹಳೆಯ ಕಾರು ಬಳಕೆ ಮಾಡುವಂತೆ ಸ್ಪೀಕರ್ ಕಚೇರಿಯಿಂದ ಮೌಖಿಕ ಸೂಚನೆ ನೀಡಲಾಗಿದೆ. ಶಾಸಕರ ಭವನದ ಇಬ್ಬರು ವಾಹನ ಚಾಲಕರು ಮತ್ತು ಒಬ್ಬ ಸ್ವೀಪರ್​ರನ್ನು ಅನ್ಯ ಸೇವೆ ಮೇಲೆ ನಿಯೋಜಿಸಲು ಮಾಡಿರುವ ಮನವಿಗೂ ಸ್ಪೀಕರ್ ಕಚೇರಿ ಸ್ಪಂದನೆ ನೀಡಿಲ್ಲ.

Published On - 1:55 pm, Mon, 30 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us