ಕೊರೊ‌ನಾ ಲಾಕ್​ಡೌನ್ ಮುಗಿದ್ರೂ ಈ ಏರಿಯಾಗೆ ಮಾತ್ರ ಸ್ವಯಂ ಲಾಕ್​ಡೌನು.. ಯಾಕೆ?

ಬೆಂಗಳೂರು: ವಿವಿಧ ಕಾಮಗಾರಿಗಳ ಹೆಸರಲ್ಲಿ BBMP ಅಧಿಕಾರಿಗಳು ರಸ್ತೆಯೊಂದನ್ನು ಪೂರ್ತಿ ಅಗೆದಿದ್ದು, ಹೆಣ್ಣೂರು ಬಳಿಯ ಗೋಲ್ಡನ್ ಗ್ರಾಂಡ್ ಅಪಾರ್ಟ್ಮೆಂಟ್ ನಿವಾಸಿಗಳು ದಿನ ನಿತ್ಯದ ಕೆಲಸಗಳಿಗೆ ಹೊರಗಡೆಗೆ ಹೋಗಲಾಗದೆ ಪರದಾಡುತ್ತಿದ್ದಾರೆ. ಹೆಣ್ಣೂರು, ಥಣಿಸಂದ್ರ ಸೇರಿದಂತೆ ಪ್ರಮುಖ ಏರಿಯಾಗಳಿಗೆ ಸಂಪರ್ಕ ಕಲ್ಪಿಸಲು ಇರುವ ಏಕೈಕ ರಸ್ತೆಯನ್ನು, ಬಿಬಿಎಂಪಿ ಅವರು ವಿವಿಧ ಕಾಮಗಾರಿಗಳ ಹೆಸರಲ್ಲಿ ಅಗೆದಿದ್ದಾರೆ. ಇದರಿಂದ ಜನ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. 2 ತಿಂಗಳ ಹಿಂದಷ್ಟೆ ಮುಖ್ಯ ರಸ್ತೆಗೆ ಡಾಂಬರು ಮಾಡಲಾಗಿತ್ತು. ಆದರೆ ಇದೀಗ ರಸ್ತೆಯನ್ನು ಸಂಪೂರ್ಣವಾಗಿ […]

ಕೊರೊ‌ನಾ ಲಾಕ್​ಡೌನ್ ಮುಗಿದ್ರೂ ಈ ಏರಿಯಾಗೆ ಮಾತ್ರ ಸ್ವಯಂ ಲಾಕ್​ಡೌನು.. ಯಾಕೆ?

Updated on: Sep 03, 2020 | 12:04 PM

ಬೆಂಗಳೂರು: ವಿವಿಧ ಕಾಮಗಾರಿಗಳ ಹೆಸರಲ್ಲಿ BBMP ಅಧಿಕಾರಿಗಳು ರಸ್ತೆಯೊಂದನ್ನು ಪೂರ್ತಿ ಅಗೆದಿದ್ದು, ಹೆಣ್ಣೂರು ಬಳಿಯ ಗೋಲ್ಡನ್ ಗ್ರಾಂಡ್ ಅಪಾರ್ಟ್ಮೆಂಟ್ ನಿವಾಸಿಗಳು ದಿನ ನಿತ್ಯದ ಕೆಲಸಗಳಿಗೆ ಹೊರಗಡೆಗೆ ಹೋಗಲಾಗದೆ ಪರದಾಡುತ್ತಿದ್ದಾರೆ.

ಹೆಣ್ಣೂರು, ಥಣಿಸಂದ್ರ ಸೇರಿದಂತೆ ಪ್ರಮುಖ ಏರಿಯಾಗಳಿಗೆ ಸಂಪರ್ಕ ಕಲ್ಪಿಸಲು ಇರುವ ಏಕೈಕ ರಸ್ತೆಯನ್ನು, ಬಿಬಿಎಂಪಿ ಅವರು ವಿವಿಧ ಕಾಮಗಾರಿಗಳ ಹೆಸರಲ್ಲಿ ಅಗೆದಿದ್ದಾರೆ. ಇದರಿಂದ ಜನ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ.

2 ತಿಂಗಳ ಹಿಂದಷ್ಟೆ ಮುಖ್ಯ ರಸ್ತೆಗೆ ಡಾಂಬರು ಮಾಡಲಾಗಿತ್ತು. ಆದರೆ ಇದೀಗ ರಸ್ತೆಯನ್ನು ಸಂಪೂರ್ಣವಾಗಿ ಅಗೆದಿರುವುದರಿಂದ ಓಡಾಡಲು ರಸ್ತೆಯೇ ಇಲ್ಲದಂತಾಗಿದೆ. ಮಳೆ ಬಂದಾಗ, ರಸ್ತೆ ಮುಳುಗಡೆಯಾಗಲಿದೆ. ಇದರಿಂದಾಗಿ ವಾಹನಗಳು ಪ್ರತಿದಿನ ಕೆಸರಲ್ಲಿ ಸಿಲುಕಿ ಹಾಕಿಕೊಳ್ಳುತ್ತಿವೆ.  2 ದಿನಗಳಿಂದ ಪೌರಾಡಳಿತದ ನಿರ್ಲಕ್ಷ್ಯ ದಿಂದ ಹೊರಹೋಗಲಾಗದೆ ಜನ ಮನೆಯಲ್ಲೇ ಲಾಕ್​ಡೌನ್ ಆಗಿಬಿಟ್ಟಿದ್ದಾರೆ.


Published On - 11:59 am, Thu, 3 September 20