
ಬೆಂಗಳೂರು: ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ಮನ್ ದುರ್ಮರಣ ಹೊಂದಿರುವ ಘಟನೆ ಕೆಂಗೇರಿಯ 6ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮೈಸೂರು ಮೂಲದ ಶ್ರೀನಿವಾಸ್(28) ಮೃತ ಲೈನ್ಮನ್. ವಿದ್ಯುತ್ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಶ್ರೀನಿವಾಸ್ ಖಾಸಗಿ ಕಂಪನಿಯ ಪರವಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Power man electrocuted
Published On - 6:07 pm, Mon, 8 February 21