
ಹಾವೇರಿ:ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, ಇಂದ್ರಜಿತ್ ಲಂಕೇಶ್ ದೊಡ್ಡ ಹೀರೋ ಆಗಲು ಹೊರಟಿದ್ದಾರೆ ಎಂದಿದ್ದಾರೆ.
ಗೌರಿ ಲಂಕೇಶ್ ಅವರೇ ಡ್ರಗ್ ಅಡಿಕ್ಟ್ ಆಗಿದ್ದರು..
ನಿಮ್ಮ ಅಕ್ಕ ಗೌರಿ ಲಂಕೇಶ್ ಅವರೇ ಡ್ರಗ್ ಅಡಿಕ್ಟ್ ಆಗಿದ್ದರು, ಆಗ ನೀವೆಲ್ಲಿ ಹೋಗಿದ್ರಿ? ಅವಳನ್ನ ಯಾಕೆ ಸುಧಾರಿಸಲಿಲ್ಲ? ಈಗ ಚಿತ್ರರಂಗದ ಬಗ್ಗೆ ಮಾತನಾಡೋರು ಆಗ ಯಾಕೆ ಮಾತನಾಡ್ಲಿಲ್ಲ ಎಂದು ಮುತಾಲಿಕ್ ಇಂದ್ರಜಿತ್ ಲಂಕೇಶ್ ಅವರನ್ನು ಪ್ರಶ್ನಿಸಿದ್ದಾರೆ.
ಈಗ ಸತ್ತಂತಹ ವ್ಯಕ್ತಿಯ ಹೆಸರು ತೆಗೆದುಕೊಳ್ಳೋ ಅಗತ್ಯವಿರಲಿಲ್ಲ.ಸರ್ಜಾ ಕುಟುಂಬದವರು ಶುದ್ಧವಾಗಿದ್ದಾರೆ. ಅವರನ್ನ ಯಾಕೆ ತರ್ತೀರಿ? ಎಂದಿದ್ದಾರೆ.
ಹ್ಯಾರಿಸ್ ಪುತ್ರನೇ ಇದರಲ್ಲಿದ್ದಾರೆ..
ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಇದ್ದಾರೆ. ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲದೆ ಡ್ರಗ್ ಮಾಫಿಯಾ ಸಾಧ್ಯವೇ ಇಲ್ಲ. ಪೊಲೀಸರಿಗೆ ಇದರ ಬಗ್ಗೆ ಎಲ್ಲವೂ ಗೊತ್ತಿರುತ್ತೆ. ಆದರೆ ದುಡ್ಡು, ಭ್ರಷ್ಟಾಚಾರ, ರಾಜಕೀಯ ಒತ್ತಡದಿಂದ ಬಾಯಿ ಬಂದ್ ಮಾಡ್ತಾರೆ. ಈಗ ಪೊಲೀಸರು ಮತ್ತು ರಾಜಕಾರಣಿಗಳು ಇದನ್ನು ಬೇರುಸಹಿತ ಕಿತ್ತು ಹಾಕುತ್ತೇವೆ ಅಂತಾ ಈಗ ಹಾರಾಡ್ತಿದ್ದಾರೆ. ಅದು ಸಾಧ್ಯವೇ ಇಲ್ಲ.
ರಾಜಕಾರಣಿಗಳೆ ಇದರಲ್ಲಿದ್ದಾರೆ. ಸ್ವತಃ ಹ್ಯಾರಿಸ್ ಪುತ್ರನೇ ಇದರಲ್ಲಿದ್ದಾರೆ. ಪೊಲೀಸರು ನಮ್ಮ ಕಡೆಯಿಂದ ಹುಡುಕಲು ಆಗಿಲ್ಲ ಅಂತಾ ಕೈ ಎತ್ತಲಿ, ನಾನು ತೋರಿಸ್ತೇನೆ ಅಂತಾ ಸವಾಲು ಹಾಕಿದ್ದಾರೆ. ಡ್ರಗ್ ದಂಧೆಯಲ್ಲಿ ಸಾವಿರಾರು ಕೋಟಿ ವ್ಯವಹಾರ ಆಗುತ್ತದೆ. ಹೀಗಾಗಿ ಇದರ ವಿರುದ್ಧ ಪಾಲಕರು ಸಿಡಿದೇಳಬೇಕು.
ಪಬ್ ದಾಳಿ ಆದಾಗಲೆ ಡ್ರಗ್ ಮಾಫಿಯಾ ಇತ್ತು..
ಗೃಹ ಸಚಿವರು, ಸಿಟಿ ರವಿ ಹೇಳ್ತಾರೆ ಬೇರು ಸಮೇತ ಕಿತ್ತು ಹಾಕ್ತೇವೆ ಅಂತೆಲ್ಲಾ ನಾಟಕ ಮಾಡ್ತಾರೆ, ಆದರೆ ಸ್ವಲ್ಪ ದಿನದಲ್ಲಿ ಎಲ್ಲವನ್ನು ಮರೆತು ಬಿಡ್ತಾರೆ. ಹೀಗಾಗಿ ಈ ಬಗ್ಗೆ ನಾವು ಜನಾಂದೋಲನ ಮಾಡ್ತೇವೆ. ಈ ಹಿಂದೆ ಪಬ್ ದಾಳಿ ಆದಾಗಲೆ ಡ್ರಗ್ ಮಾಫಿಯಾ ಬಗ್ಗೆ ಹೇಳಿದ್ದವು. ಅಲ್ಲಿದ್ದವರು ಡ್ರಗ್ ಸೇವನೆ ಮಾಡಿದ್ದರು. ಆದರೆ ಆವತ್ತು ಸರಕಾರ ಅದನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ ನನ್ನನ್ನೆ ಟಾರ್ಗೆಟ್ ಮಾಡಿದರು ಎಂದು ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.