ಕಳಂಕಿತ ಆಸ್ತಿ ಜಪ್ತಿ ವಿಚಾರ; ಆಸ್ತಿ ಪತ್ತೆಯಾದ ದಿನದಿಂದ PMLA ಕಾಯ್ದೆ ಅನ್ವಯ: ಹೈಕೋರ್ಟ್

ಅಪರಾಧ ಮೂಲದ ಹಣ ಪ್ರಸರಣೆ ಗಂಭೀರ ವಿಚಾರ ಎಂದು ಹೇಳಿದ ನ್ಯಾಯಪೀಠ ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಅನುಸೂಚಿತ ಅಪರಾಧವಿಲ್ಲದಿದ್ದರೂ ಕಳಂಕಿತ ಸಂಪತ್ತು ಜಪ್ತಿ ಮಾಡಲು PMLA ಕಾಯ್ದೆ ಬಳಸಬಹುದು ಎಂದು ಹೈಕೋರ್ಟ್ ಹೇಳಿದೆ.

ಕಳಂಕಿತ ಆಸ್ತಿ ಜಪ್ತಿ ವಿಚಾರ; ಆಸ್ತಿ ಪತ್ತೆಯಾದ ದಿನದಿಂದ PMLA ಕಾಯ್ದೆ ಅನ್ವಯ: ಹೈಕೋರ್ಟ್
ಕರ್ನಾಟಕ ಹೈಕೋರ್ಟ್​
ರಶ್ಮಿ ಕಲ್ಲಕಟ್ಟ

Updated on: Dec 31, 2020 | 3:53 PM

ಬೆಂಗಳೂರು: ಕಳಂಕಿತ ಆಸ್ತಿ ಪತ್ತೆಯಾದ ದಿನದಿಂದ PMLA ಕಾಯ್ದೆಯು ಅನ್ವಯ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. PMLA ಕಾಯ್ದೆ ಪೂರ್ವಾನ್ವಯ ಪ್ರಶ್ನಿಸಿ ಅವ್ವಾ ಮಾದೇಶ ಸೇರಿ ಹಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದು, ಜಾರಿ ನಿರ್ದೇಶನಾಲಯದಿಂದ ಆಸ್ತಿ ಜಪ್ತಿ ಪ್ರಶ್ನಿಸಿದ್ದರು.

ಅಪರಾಧ ಮೂಲದ ಹಣವನ್ನು ಪ್ರಸಾರ ಮಾಡುವುದು ಗಂಭೀರ ವಿಚಾರ ಎಂದು ಹೇಳಿದ ನ್ಯಾಯಪೀಠ ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಅನುಸೂಚಿತ ಅಪರಾಧವಿಲ್ಲದಿದ್ದರೂ ಕಳಂಕಿತ ಸಂಪತ್ತು ಜಪ್ತಿ ಮಾಡಲು PMLA ಕಾಯ್ದೆ ಬಳಸಬಹುದು. ಕಾಯ್ದೆಯು ಪೂರ್ವಾನ್ವಯವಲ್ಲವೆಂದು ಅಪರಾಧ ಅಳಿಸಿಹೋಗುವುದಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಅಕ್ರಮ ಆಸ್ತಿಗಳಿಕೆಯನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಸಂಪತ್ತಿನ ಮೂಲದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದಾಗ ಕಳಂಕಿತ ಸಂಪತ್ತು ಪತ್ತೆಯಾದ ದಿನಾಂಕದಿಂದ ಕಾಯ್ದೆ ಅನ್ವಯಿಸಬಹುದು. PMLA ಕಾಯ್ದೆ ಸೆ.3ರಿಂದ ಅನ್ವಯವಾಗಲಿದೆ ಎಂದು ನ್ಯಾ.ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠವು ತೀರ್ಪು ನೀಡಿದೆ.

ಏನಿದು PMLA ಕಾಯ್ದೆ ?

PMLA (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ) ಹಣ ವರ್ಗಾವಣೆಯನ್ನು ತಡೆಗಟ್ಟಲು ಮತ್ತು ಹಣ ವರ್ಗಾವಣೆಯಿಂದ ಪಡೆದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿಗೆ ತಂದಿರುವ ಕಾಯ್ದೆಯಾಗಿದೆ. ಇದು 2005, 2009, 2012ರಲ್ಲಿ ತಿದ್ದುಪಡಿಯಾಗಿದೆ.

ಕಣ್ವ ಸಂಸ್ಥೆಯ ನೂರಾರು ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ED

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us