ಕಾಂಗ್ರೆಸ್ ಕಚೇರಿ ಇರುವ ಕ್ವೀನ್ಸ್ ರಸ್ತೆ Seal Down

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಕಚೇರಿ ಇರುವ ಕ್ವೀನ್ಸ್ ರಸ್ತೆ ಸೇರಿದಂತೆ ರಾಜೀವ್ ಗಾಂಧಿ ಕಾಲೋನಿಯನ್ನೂ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಕಾರಣ ಈಗಾಗಲೇ ಆ ಏರಿಯಾ ಸೀಲ್​ ಡೌನ್​ ಆಗಿದೆ. ಹಾಗಾಗಿ ಶಿವಾಜಿನಗರದ ಪಕ್ಕದ ಏರಿಯಾಗಳಿಗೂ ಸೋಂಕಿನ ಸುಳಿ ವ್ಯಾಪಿಸುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಿಂದಾಗಿ ಸ್ಥಳೀಯ ಪೊಲೀಸ್ರು ಏರಿಯಾ ಬಂದ್ ಮಾಡಿದ್ದಾರೆ. ಚಾಂದನಿ ಚೌಕ್ ನ ಪಕ್ಕದಲ್ಲಿಯೇ ಇರುವ ರಾಜೀವ್ ಗಾಂಧಿ ಕಾಲೋನಿಗೂ ಟೆನ್ಷನ್ ಶುರುವಾಗಿದೆ. […]

ಕಾಂಗ್ರೆಸ್ ಕಚೇರಿ ಇರುವ ಕ್ವೀನ್ಸ್ ರಸ್ತೆ Seal Down
ಸಾಧು ಶ್ರೀನಾಥ್​

Updated on: May 13, 2020 | 2:08 PM

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಕಚೇರಿ ಇರುವ ಕ್ವೀನ್ಸ್ ರಸ್ತೆ ಸೇರಿದಂತೆ ರಾಜೀವ್ ಗಾಂಧಿ ಕಾಲೋನಿಯನ್ನೂ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಕಾರಣ ಈಗಾಗಲೇ ಆ ಏರಿಯಾ ಸೀಲ್​ ಡೌನ್​ ಆಗಿದೆ. ಹಾಗಾಗಿ ಶಿವಾಜಿನಗರದ ಪಕ್ಕದ ಏರಿಯಾಗಳಿಗೂ ಸೋಂಕಿನ ಸುಳಿ ವ್ಯಾಪಿಸುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಿಂದಾಗಿ ಸ್ಥಳೀಯ ಪೊಲೀಸ್ರು ಏರಿಯಾ ಬಂದ್ ಮಾಡಿದ್ದಾರೆ.

ಚಾಂದನಿ ಚೌಕ್ ನ ಪಕ್ಕದಲ್ಲಿಯೇ ಇರುವ ರಾಜೀವ್ ಗಾಂಧಿ ಕಾಲೋನಿಗೂ ಟೆನ್ಷನ್ ಶುರುವಾಗಿದೆ. ಇದೀಗ ಕ್ವೀನ್ಸ್ ರಸ್ತೆ ಕ್ಲೋಸ್ ಮಾಡಿ, ರಾಜೀವ್ ಗಾಂಧಿ ಕಾಲೋನಿಗೂ ಬ್ಯಾರಿಕೇಡ್ ಹಾಕಲಾಗಿದೆ. ಸೊಂಕು ಹರಡದಂತೆ ಎಚ್ಚರ ವಹಿಸಿ, ಕ್ಲೋಸ್ ಮಾಡಲಾಗಿದೆ.

Published On - 11:09 am, Wed, 13 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us