AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿಯ ಲೌಡ್​ಸ್ಪೀಕರ್​ಗಳಲ್ಲಿ ಕೂಗುವ ಅಜಾನ್ ನಿಲ್ಲಿಸಬೇಕು- ಜಾವೇದ್ ಅಕ್ತರ್

ಹಿರಿಯ ಗೀತರಚನೆಕಾರ ಹಾಗೂ ಬರಹಗಾರರಾಗಿರುವ ಜಾವೇದ್ ಅಕ್ತರ್ ಇತ್ತೀಚೆಗೆ ಟ್ವೀಟ್ ಮಾಡುವ ಮೂಲಕ ಹೊಸ ಕಾಂಟ್ರೋವರ್ಸಿಯನ್ನು ಹುಟ್ಟುಹಾಕಿದ್ದಾರೆ. ಅದೇನಂದ್ರೆ ಮಸೀದಿಗಳ ಲೌಡ್​ಸ್ಪೀಕರ್​ಗಳ ಮೂಲಕ ಜನರನ್ನು ಪ್ರಾರ್ಥನೆಗೆ ಆಹ್ವಾನಿಸುವ ಅಜಾನ್ ನಿಲ್ಲಿಸಬೇಕು. ಇದರಿಂದ ಅನ್ಯ ಜನರಿಗೆ ತೊಂದರೆ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. 50 ವರ್ಷಗಳಿಂದ ಲೌಡ್​ಸ್ಪೀಕರ್​ಗಳಲ್ಲಿ ಅಜಾನ್ ಕೂಗುವುದನ್ನು ನಿಷೇಧ ಮಾಡಲಾಗಿತ್ತು. ಈಗ ಅದಕ್ಕೆ ಸಮ್ಮತಿ ನೀಡಲಾಗಿದೆ.  ಆದ್ರೆ ಈಗ ಅದಕ್ಕೆ ಅಂತ್ಯ ಹಾಡಲೇ ಬೇಕು. ಅಜಾನ್ ಕೂಗುವುದರಲ್ಲಿ ತಪ್ಪಿಲ್ಲ. ಆದ್ರೆ ಅದನ್ನು ಲೌಡ್​ಸ್ಪೀಕರ್​ ಮೂಲಕ […]

ಮಸೀದಿಯ ಲೌಡ್​ಸ್ಪೀಕರ್​ಗಳಲ್ಲಿ ಕೂಗುವ ಅಜಾನ್ ನಿಲ್ಲಿಸಬೇಕು- ಜಾವೇದ್ ಅಕ್ತರ್
ಸಾಧು ಶ್ರೀನಾಥ್​
|

Updated on:May 13, 2020 | 2:14 PM

Share

ಹಿರಿಯ ಗೀತರಚನೆಕಾರ ಹಾಗೂ ಬರಹಗಾರರಾಗಿರುವ ಜಾವೇದ್ ಅಕ್ತರ್ ಇತ್ತೀಚೆಗೆ ಟ್ವೀಟ್ ಮಾಡುವ ಮೂಲಕ ಹೊಸ ಕಾಂಟ್ರೋವರ್ಸಿಯನ್ನು ಹುಟ್ಟುಹಾಕಿದ್ದಾರೆ. ಅದೇನಂದ್ರೆ ಮಸೀದಿಗಳ ಲೌಡ್​ಸ್ಪೀಕರ್​ಗಳ ಮೂಲಕ ಜನರನ್ನು ಪ್ರಾರ್ಥನೆಗೆ ಆಹ್ವಾನಿಸುವ ಅಜಾನ್ ನಿಲ್ಲಿಸಬೇಕು. ಇದರಿಂದ ಅನ್ಯ ಜನರಿಗೆ ತೊಂದರೆ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

50 ವರ್ಷಗಳಿಂದ ಲೌಡ್​ಸ್ಪೀಕರ್​ಗಳಲ್ಲಿ ಅಜಾನ್ ಕೂಗುವುದನ್ನು ನಿಷೇಧ ಮಾಡಲಾಗಿತ್ತು. ಈಗ ಅದಕ್ಕೆ ಸಮ್ಮತಿ ನೀಡಲಾಗಿದೆ.  ಆದ್ರೆ ಈಗ ಅದಕ್ಕೆ ಅಂತ್ಯ ಹಾಡಲೇ ಬೇಕು. ಅಜಾನ್ ಕೂಗುವುದರಲ್ಲಿ ತಪ್ಪಿಲ್ಲ. ಆದ್ರೆ ಅದನ್ನು ಲೌಡ್​ಸ್ಪೀಕರ್​ ಮೂಲಕ ಕೂಗಬಾರದು. ಇದರಿಂದ ಅನ್ಯರಿಗೆ ತೊಂದರೆ ಉಂಟಾಗುತ್ತೆ. ಈಗಲಾದ್ರು ಇದನ್ನು ಸರಿ ಮಾಡ್ಕೊಳ್ತಾರಾ ಕಾದು ನೋಡಬೇಕು ಎಂದು ಅಕ್ತರ್ ಟ್ವೀಟ್ ಮೂಲಕ ತಮ್ಮ ಆಶಯ ಹೇಳಿದ್ದಾರೆ.

ಹರಾಮ್ ಆಂದ್ರೆ ಇಸ್ಲಾಂ ಧರ್ಮದ ಪ್ರಕಾರ ನಿಷೇಧ ಎಂದರ್ಥ. ಜಾವೇದ್ ಅಕ್ತರ್ ನೀಡಿರುವ ಹೇಳಿಕೆಗೆ ಸಂಬಂಧಿಸಿ ದೇವಾಲಯಗಳಲ್ಲಿಯೂ ಲೌಡ್​ಸ್ಪೀಕರ್​ಗಳನ್ನು ಬಳಸುತ್ತಾರಲ್ಲಾ? ಎಂದು ಪ್ರಶ್ನಿಸಿ ತಮ್ಮ ಅಭಿಪ್ರಾಯವನ್ನು ಕೇಳಿದಾಗ, ಜಾವೇದ್ ಅಕ್ತರ್ ಉತ್ತರಿಸಿದ್ದು ಹೀಗೆ.. ಹಬ್ಬದ ಸಮಯದಲ್ಲಿ ದೇವಾಲಯ ಅಥವಾ ಮಸೀದಿಗಳಲ್ಲಿ ಸ್ಪೀಕರ್‌ಗಳನ್ನು ಬಳಸಲಿ. ಆದರೆ ದೈನಂದಿನ ಬಳಕೆಗೆ ಅಪಾಯ ಉಂಟುಮಾಡುತ್ತೆ ಎಂದು ಉತ್ತರಿಸಿದ್ದಾರೆ.

ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ ಸಂದರ್ಭದಲ್ಲಿ ಜಾವೇದ್ ಅಕ್ತರ್ ಅವರ ಈ ವಿವಾದಾತ್ಮಕ ಹೇಳಿಕೆ  ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪವಿತ್ರ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ ಮತ್ತು ಪ್ರಾರ್ಥನೆ ಸಲ್ಲಿಸುತ್ತಾರೆ.

ಇದೇ ರೀತಿ 2017 ರಲ್ಲಿ ಗಾಯಕ ಸೋನು ನಿಗಮ್ ಕೂಡ ಈ ವಿಷಯಕ್ಕೆ ಸಂಬಂಧಿಸಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ರು. ಈಗ ಜಾವೇದ್ ಅಕ್ತರ್ ಹೇಳಿಕೆಗೆ ಅನೇಕ ಕಡೆ ವಿರೋಧ ವ್ಯಕ್ತವಾಗುತ್ತಿದೆ.

Published On - 1:17 pm, Wed, 13 May 20

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?