AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭ ಸುದ್ದಿ! ಮೇ 17ರ ಬಳಿಕ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತದಾ?

ತಿರುಪತಿ: ಮಾರ್ಚ್ 19ರಿಂದ ಕೊರೊನಾ ಕಾರಣಕ್ಕೆ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲದಂತಾಗಿದೆ. ಟಿಟಿಡಿ ತಾತ್ಕಾಲಿಕವಾಗಿ ಭಕ್ತರಿಗೆ ಪ್ರವೇಶ ನಿಲ್ಲಿಸಿದೆ. ಸತತ 52 ದಿನಗಳ ಬಳಿಕ ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸುತ್ತಿರೋ ಒಂದೊಂದು ಸುಳಿವು ಭಕ್ತರಿಗೆ ಶುಭ ಸುದ್ದಿ ನೀಡುವ ಸಂಕೇತಗಳಾಗಿವೆ. ಮೇ 17ರ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗುತ್ತದೆಯೇ? ಇಂಥದ್ದೊಂದು ಚರ್ಚೆ ಹುಟ್ಟು ಹಾಕಿರೋದಕ್ಕೆ ಕಾರಣ ದೇವಾಲಯದಲ್ಲಿ ಹಾಕಿರುವ ಸಾಮಾಜಿಕ ಅಂತರದ ಗುರುತುಗಳು. ತಿಮ್ಮಪ್ಪನ ದರ್ಶನಕ್ಕೆ ಕ್ಯೂನಲ್ಲಿ ಬರುವ ಭಕ್ತರು ಸಾಮಾಜಿಕ ಅಂತರ […]

ಶುಭ ಸುದ್ದಿ! ಮೇ 17ರ ಬಳಿಕ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತದಾ?
ಸಾಧು ಶ್ರೀನಾಥ್​
|

Updated on: May 13, 2020 | 2:48 PM

Share

ತಿರುಪತಿ: ಮಾರ್ಚ್ 19ರಿಂದ ಕೊರೊನಾ ಕಾರಣಕ್ಕೆ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲದಂತಾಗಿದೆ. ಟಿಟಿಡಿ ತಾತ್ಕಾಲಿಕವಾಗಿ ಭಕ್ತರಿಗೆ ಪ್ರವೇಶ ನಿಲ್ಲಿಸಿದೆ. ಸತತ 52 ದಿನಗಳ ಬಳಿಕ ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸುತ್ತಿರೋ ಒಂದೊಂದು ಸುಳಿವು ಭಕ್ತರಿಗೆ ಶುಭ ಸುದ್ದಿ ನೀಡುವ ಸಂಕೇತಗಳಾಗಿವೆ. ಮೇ 17ರ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗುತ್ತದೆಯೇ? ಇಂಥದ್ದೊಂದು ಚರ್ಚೆ ಹುಟ್ಟು ಹಾಕಿರೋದಕ್ಕೆ ಕಾರಣ ದೇವಾಲಯದಲ್ಲಿ ಹಾಕಿರುವ ಸಾಮಾಜಿಕ ಅಂತರದ ಗುರುತುಗಳು.

ತಿಮ್ಮಪ್ಪನ ದರ್ಶನಕ್ಕೆ ಕ್ಯೂನಲ್ಲಿ ಬರುವ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಿಳಿ ಬಣ್ಣದ ಗುರುತುಗಳನ್ನು ಮಾಡಲಾಗಿದೆ. ಇಂಥದ್ದೊಂದು ಗುರುತುಗಳು ಟಿಟಿಡಿಯ ಸಿದ್ಧತೆಯ ಸೂಚನೆಗಳನ್ನು ನೀಡುತ್ತಿವೆ. ಸತತ 52 ದಿನಗಳ ಕಾಲ ಆದಾಯವೇ ಇಲ್ಲದೇ ನಡೆಯುತ್ತಿರೋ ತಿಮ್ಮಪ್ಪನ ದೇವಾಲಯವನ್ನು ತೆಗೆಯೋದಕ್ಕೆ ಟಿಟಿಡಿ ನಿರ್ಧರಿಸಿದೆ ಅನ್ನೋ ಅನುಮಾನ ಮೂಡಿಸುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಆದೇಶ ನೋಡಿಕೊಂಡೇ ಟಿಟಿಡಿ ತೀರ್ಮಾನಕ್ಕೆ ಬರಲು ಮುಂದಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಲೇ ಭಕ್ತರಿಗೆ ದರ್ಶನ ನೀಡುವ ವ್ಯವಸ್ಥೆ ಕಲ್ಪಿಸೋದಕ್ಕೆ ಟಿಟಿಡಿ ಮುಂದಾಗಿದೆ ಅನ್ನೋ ಚರ್ಚೆ ನಡೀತಿದೆ. ವಿಶ್ವದ ಶ್ರೀಮಂತ ದೇವರ ದೇಗುಲ ತೆರೆಯೋದು ಅದೆಷ್ಟು ಮುಖ್ಯ ಗೊತ್ತಾ? ಪ್ರತೀ ನಿಮಿಷಗಳ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿಗಳ ಲೆಕ್ಕದಲ್ಲಿ ದೇವಾಲಯ ದುಡಿಯುತ್ತಿದೆ. ಅದು ಹೇಗೆ ಅಂತೀರಾ? ಇಲ್ಲಿ ಓದಿ..

ತಿಮ್ಮಪ್ಪನ ಹುಂಡಿಗೆ ಪ್ರತೀ ವರ್ಷ ಕಡಿಮೆ ಅಂದ್ರೂ ಸಾವಿರ ಕೋಟಿ ರೂಪಾಯಿ ಬಂದು ಬೀಳುತ್ತದೆ. ಇದುವೇ ದೇವಾಲಯದ ಬಹುದೊಡ್ಡ ಆದಾಯ ಮೂಲ. ಇದನ್ನು ಬಿಟ್ರೆ ಈ ತನಕ ರಾಷ್ಟ್ರೀಯ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿರೋ 9 ಟನ್ ಚಿನ್ನಕ್ಕೆ ಬಡ್ಡಿ ರೂಪದಲ್ಲಿ ಪ್ರತೀ ವರ್ಷ 100 ಕೆಜಿ ಚಿನ್ನ ನೀಡಲಾಗುತ್ತದೆ. ಇನ್ನು, ಗೋವಿಂದನ ಹೆಸರಿನಲ್ಲಿ ಸ್ಥಿರ ಠೇವಣಿ ಇಟ್ಟಿರೋ 14 ಸಾವಿರ ಕೋಟಿ ರೂಪಾಯಿಗೆ ಪ್ರತೀ ವರ್ಷ 845 ಕೋಟಿ ರೂಪಾಯಿ ಬಡ್ಡಿ ಸಿಗುತ್ತದೆ.

ವಿಐಪಿ, ವಿವಿಐಪಿ ಟಿಕೆಟ್ ಮಾರಾಟದಿಂದಾಗಿ ಟಿಟಿಡಿಗೆ ಕನಿಷ್ಠ 250 ಕೋಟಿ ರೂಪಾಯಿ ವಾರ್ಷಿಕ ಆದಾಯ ಸಲ್ಲುತ್ತದೆ. ಇನ್ನು, ತಿಮ್ಮಪ್ಪನ ಮಹಾಪ್ರಸಾದ ಲಡ್ಡು ಮಾರಾಟದಿಂದಲೂ ಟಿಟಿಡಿಗೆ ಪ್ರತೀ ವರ್ಷ ಕನಿಷ್ಠ 200 ಕೋಟಿ ರೂಪಾಯಿ ಲಾಭ ದೊರೆಯುತ್ತದೆ. ಇದೆಲ್ಲಕ್ಕಿಂತಲೂ ವಿಶೇಷ ಅನಿಸೋ ಆದಾಯದ ಮೂಲ ತಿಮ್ಮಪ್ಪನಿಗೆ ಭಕ್ತರು ಸಮರ್ಪಿಸೋ ಮುಡಿ ಕೂದಲು!

ಹೌದು, ಮುಡಿ ಕೂದಲನ್ನು ಟಿಟಿಡಿ ಪ್ರತೀ ವರ್ಷ ಹರಾಜು ಹಾಕುತ್ತದೆ. ಈ ಹರಾಜು ಪ್ರಕ್ರಿಯೆಯಲ್ಲಿ ಮುಡಿಯಿಂದಾಗಿಯೇ ಟಿಟಿಡಿ ಖಜಾನೆಗೆ ಪ್ರತೀ ವರ್ಷ ಕನಿಷ್ಠ ನೂರು ಕೋಟಿ ಸೇರುತ್ತದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ