AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭ ಸುದ್ದಿ! ಮೇ 17ರ ಬಳಿಕ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತದಾ?

ತಿರುಪತಿ: ಮಾರ್ಚ್ 19ರಿಂದ ಕೊರೊನಾ ಕಾರಣಕ್ಕೆ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲದಂತಾಗಿದೆ. ಟಿಟಿಡಿ ತಾತ್ಕಾಲಿಕವಾಗಿ ಭಕ್ತರಿಗೆ ಪ್ರವೇಶ ನಿಲ್ಲಿಸಿದೆ. ಸತತ 52 ದಿನಗಳ ಬಳಿಕ ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸುತ್ತಿರೋ ಒಂದೊಂದು ಸುಳಿವು ಭಕ್ತರಿಗೆ ಶುಭ ಸುದ್ದಿ ನೀಡುವ ಸಂಕೇತಗಳಾಗಿವೆ. ಮೇ 17ರ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗುತ್ತದೆಯೇ? ಇಂಥದ್ದೊಂದು ಚರ್ಚೆ ಹುಟ್ಟು ಹಾಕಿರೋದಕ್ಕೆ ಕಾರಣ ದೇವಾಲಯದಲ್ಲಿ ಹಾಕಿರುವ ಸಾಮಾಜಿಕ ಅಂತರದ ಗುರುತುಗಳು. ತಿಮ್ಮಪ್ಪನ ದರ್ಶನಕ್ಕೆ ಕ್ಯೂನಲ್ಲಿ ಬರುವ ಭಕ್ತರು ಸಾಮಾಜಿಕ ಅಂತರ […]

ಶುಭ ಸುದ್ದಿ! ಮೇ 17ರ ಬಳಿಕ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತದಾ?
ಸಾಧು ಶ್ರೀನಾಥ್​
|

Updated on: May 13, 2020 | 2:48 PM

Share

ತಿರುಪತಿ: ಮಾರ್ಚ್ 19ರಿಂದ ಕೊರೊನಾ ಕಾರಣಕ್ಕೆ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲದಂತಾಗಿದೆ. ಟಿಟಿಡಿ ತಾತ್ಕಾಲಿಕವಾಗಿ ಭಕ್ತರಿಗೆ ಪ್ರವೇಶ ನಿಲ್ಲಿಸಿದೆ. ಸತತ 52 ದಿನಗಳ ಬಳಿಕ ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸುತ್ತಿರೋ ಒಂದೊಂದು ಸುಳಿವು ಭಕ್ತರಿಗೆ ಶುಭ ಸುದ್ದಿ ನೀಡುವ ಸಂಕೇತಗಳಾಗಿವೆ. ಮೇ 17ರ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗುತ್ತದೆಯೇ? ಇಂಥದ್ದೊಂದು ಚರ್ಚೆ ಹುಟ್ಟು ಹಾಕಿರೋದಕ್ಕೆ ಕಾರಣ ದೇವಾಲಯದಲ್ಲಿ ಹಾಕಿರುವ ಸಾಮಾಜಿಕ ಅಂತರದ ಗುರುತುಗಳು.

ತಿಮ್ಮಪ್ಪನ ದರ್ಶನಕ್ಕೆ ಕ್ಯೂನಲ್ಲಿ ಬರುವ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಿಳಿ ಬಣ್ಣದ ಗುರುತುಗಳನ್ನು ಮಾಡಲಾಗಿದೆ. ಇಂಥದ್ದೊಂದು ಗುರುತುಗಳು ಟಿಟಿಡಿಯ ಸಿದ್ಧತೆಯ ಸೂಚನೆಗಳನ್ನು ನೀಡುತ್ತಿವೆ. ಸತತ 52 ದಿನಗಳ ಕಾಲ ಆದಾಯವೇ ಇಲ್ಲದೇ ನಡೆಯುತ್ತಿರೋ ತಿಮ್ಮಪ್ಪನ ದೇವಾಲಯವನ್ನು ತೆಗೆಯೋದಕ್ಕೆ ಟಿಟಿಡಿ ನಿರ್ಧರಿಸಿದೆ ಅನ್ನೋ ಅನುಮಾನ ಮೂಡಿಸುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಆದೇಶ ನೋಡಿಕೊಂಡೇ ಟಿಟಿಡಿ ತೀರ್ಮಾನಕ್ಕೆ ಬರಲು ಮುಂದಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಲೇ ಭಕ್ತರಿಗೆ ದರ್ಶನ ನೀಡುವ ವ್ಯವಸ್ಥೆ ಕಲ್ಪಿಸೋದಕ್ಕೆ ಟಿಟಿಡಿ ಮುಂದಾಗಿದೆ ಅನ್ನೋ ಚರ್ಚೆ ನಡೀತಿದೆ. ವಿಶ್ವದ ಶ್ರೀಮಂತ ದೇವರ ದೇಗುಲ ತೆರೆಯೋದು ಅದೆಷ್ಟು ಮುಖ್ಯ ಗೊತ್ತಾ? ಪ್ರತೀ ನಿಮಿಷಗಳ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿಗಳ ಲೆಕ್ಕದಲ್ಲಿ ದೇವಾಲಯ ದುಡಿಯುತ್ತಿದೆ. ಅದು ಹೇಗೆ ಅಂತೀರಾ? ಇಲ್ಲಿ ಓದಿ..

ತಿಮ್ಮಪ್ಪನ ಹುಂಡಿಗೆ ಪ್ರತೀ ವರ್ಷ ಕಡಿಮೆ ಅಂದ್ರೂ ಸಾವಿರ ಕೋಟಿ ರೂಪಾಯಿ ಬಂದು ಬೀಳುತ್ತದೆ. ಇದುವೇ ದೇವಾಲಯದ ಬಹುದೊಡ್ಡ ಆದಾಯ ಮೂಲ. ಇದನ್ನು ಬಿಟ್ರೆ ಈ ತನಕ ರಾಷ್ಟ್ರೀಯ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿರೋ 9 ಟನ್ ಚಿನ್ನಕ್ಕೆ ಬಡ್ಡಿ ರೂಪದಲ್ಲಿ ಪ್ರತೀ ವರ್ಷ 100 ಕೆಜಿ ಚಿನ್ನ ನೀಡಲಾಗುತ್ತದೆ. ಇನ್ನು, ಗೋವಿಂದನ ಹೆಸರಿನಲ್ಲಿ ಸ್ಥಿರ ಠೇವಣಿ ಇಟ್ಟಿರೋ 14 ಸಾವಿರ ಕೋಟಿ ರೂಪಾಯಿಗೆ ಪ್ರತೀ ವರ್ಷ 845 ಕೋಟಿ ರೂಪಾಯಿ ಬಡ್ಡಿ ಸಿಗುತ್ತದೆ.

ವಿಐಪಿ, ವಿವಿಐಪಿ ಟಿಕೆಟ್ ಮಾರಾಟದಿಂದಾಗಿ ಟಿಟಿಡಿಗೆ ಕನಿಷ್ಠ 250 ಕೋಟಿ ರೂಪಾಯಿ ವಾರ್ಷಿಕ ಆದಾಯ ಸಲ್ಲುತ್ತದೆ. ಇನ್ನು, ತಿಮ್ಮಪ್ಪನ ಮಹಾಪ್ರಸಾದ ಲಡ್ಡು ಮಾರಾಟದಿಂದಲೂ ಟಿಟಿಡಿಗೆ ಪ್ರತೀ ವರ್ಷ ಕನಿಷ್ಠ 200 ಕೋಟಿ ರೂಪಾಯಿ ಲಾಭ ದೊರೆಯುತ್ತದೆ. ಇದೆಲ್ಲಕ್ಕಿಂತಲೂ ವಿಶೇಷ ಅನಿಸೋ ಆದಾಯದ ಮೂಲ ತಿಮ್ಮಪ್ಪನಿಗೆ ಭಕ್ತರು ಸಮರ್ಪಿಸೋ ಮುಡಿ ಕೂದಲು!

ಹೌದು, ಮುಡಿ ಕೂದಲನ್ನು ಟಿಟಿಡಿ ಪ್ರತೀ ವರ್ಷ ಹರಾಜು ಹಾಕುತ್ತದೆ. ಈ ಹರಾಜು ಪ್ರಕ್ರಿಯೆಯಲ್ಲಿ ಮುಡಿಯಿಂದಾಗಿಯೇ ಟಿಟಿಡಿ ಖಜಾನೆಗೆ ಪ್ರತೀ ವರ್ಷ ಕನಿಷ್ಠ ನೂರು ಕೋಟಿ ಸೇರುತ್ತದೆ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?