AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭ ಸುದ್ದಿ! ಮೇ 17ರ ಬಳಿಕ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತದಾ?

ತಿರುಪತಿ: ಮಾರ್ಚ್ 19ರಿಂದ ಕೊರೊನಾ ಕಾರಣಕ್ಕೆ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲದಂತಾಗಿದೆ. ಟಿಟಿಡಿ ತಾತ್ಕಾಲಿಕವಾಗಿ ಭಕ್ತರಿಗೆ ಪ್ರವೇಶ ನಿಲ್ಲಿಸಿದೆ. ಸತತ 52 ದಿನಗಳ ಬಳಿಕ ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸುತ್ತಿರೋ ಒಂದೊಂದು ಸುಳಿವು ಭಕ್ತರಿಗೆ ಶುಭ ಸುದ್ದಿ ನೀಡುವ ಸಂಕೇತಗಳಾಗಿವೆ. ಮೇ 17ರ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗುತ್ತದೆಯೇ? ಇಂಥದ್ದೊಂದು ಚರ್ಚೆ ಹುಟ್ಟು ಹಾಕಿರೋದಕ್ಕೆ ಕಾರಣ ದೇವಾಲಯದಲ್ಲಿ ಹಾಕಿರುವ ಸಾಮಾಜಿಕ ಅಂತರದ ಗುರುತುಗಳು. ತಿಮ್ಮಪ್ಪನ ದರ್ಶನಕ್ಕೆ ಕ್ಯೂನಲ್ಲಿ ಬರುವ ಭಕ್ತರು ಸಾಮಾಜಿಕ ಅಂತರ […]

ಶುಭ ಸುದ್ದಿ! ಮೇ 17ರ ಬಳಿಕ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತದಾ?
ಸಾಧು ಶ್ರೀನಾಥ್​
|

Updated on: May 13, 2020 | 2:48 PM

Share

ತಿರುಪತಿ: ಮಾರ್ಚ್ 19ರಿಂದ ಕೊರೊನಾ ಕಾರಣಕ್ಕೆ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲದಂತಾಗಿದೆ. ಟಿಟಿಡಿ ತಾತ್ಕಾಲಿಕವಾಗಿ ಭಕ್ತರಿಗೆ ಪ್ರವೇಶ ನಿಲ್ಲಿಸಿದೆ. ಸತತ 52 ದಿನಗಳ ಬಳಿಕ ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸುತ್ತಿರೋ ಒಂದೊಂದು ಸುಳಿವು ಭಕ್ತರಿಗೆ ಶುಭ ಸುದ್ದಿ ನೀಡುವ ಸಂಕೇತಗಳಾಗಿವೆ. ಮೇ 17ರ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗುತ್ತದೆಯೇ? ಇಂಥದ್ದೊಂದು ಚರ್ಚೆ ಹುಟ್ಟು ಹಾಕಿರೋದಕ್ಕೆ ಕಾರಣ ದೇವಾಲಯದಲ್ಲಿ ಹಾಕಿರುವ ಸಾಮಾಜಿಕ ಅಂತರದ ಗುರುತುಗಳು.

ತಿಮ್ಮಪ್ಪನ ದರ್ಶನಕ್ಕೆ ಕ್ಯೂನಲ್ಲಿ ಬರುವ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಿಳಿ ಬಣ್ಣದ ಗುರುತುಗಳನ್ನು ಮಾಡಲಾಗಿದೆ. ಇಂಥದ್ದೊಂದು ಗುರುತುಗಳು ಟಿಟಿಡಿಯ ಸಿದ್ಧತೆಯ ಸೂಚನೆಗಳನ್ನು ನೀಡುತ್ತಿವೆ. ಸತತ 52 ದಿನಗಳ ಕಾಲ ಆದಾಯವೇ ಇಲ್ಲದೇ ನಡೆಯುತ್ತಿರೋ ತಿಮ್ಮಪ್ಪನ ದೇವಾಲಯವನ್ನು ತೆಗೆಯೋದಕ್ಕೆ ಟಿಟಿಡಿ ನಿರ್ಧರಿಸಿದೆ ಅನ್ನೋ ಅನುಮಾನ ಮೂಡಿಸುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಆದೇಶ ನೋಡಿಕೊಂಡೇ ಟಿಟಿಡಿ ತೀರ್ಮಾನಕ್ಕೆ ಬರಲು ಮುಂದಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಲೇ ಭಕ್ತರಿಗೆ ದರ್ಶನ ನೀಡುವ ವ್ಯವಸ್ಥೆ ಕಲ್ಪಿಸೋದಕ್ಕೆ ಟಿಟಿಡಿ ಮುಂದಾಗಿದೆ ಅನ್ನೋ ಚರ್ಚೆ ನಡೀತಿದೆ. ವಿಶ್ವದ ಶ್ರೀಮಂತ ದೇವರ ದೇಗುಲ ತೆರೆಯೋದು ಅದೆಷ್ಟು ಮುಖ್ಯ ಗೊತ್ತಾ? ಪ್ರತೀ ನಿಮಿಷಗಳ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿಗಳ ಲೆಕ್ಕದಲ್ಲಿ ದೇವಾಲಯ ದುಡಿಯುತ್ತಿದೆ. ಅದು ಹೇಗೆ ಅಂತೀರಾ? ಇಲ್ಲಿ ಓದಿ..

ತಿಮ್ಮಪ್ಪನ ಹುಂಡಿಗೆ ಪ್ರತೀ ವರ್ಷ ಕಡಿಮೆ ಅಂದ್ರೂ ಸಾವಿರ ಕೋಟಿ ರೂಪಾಯಿ ಬಂದು ಬೀಳುತ್ತದೆ. ಇದುವೇ ದೇವಾಲಯದ ಬಹುದೊಡ್ಡ ಆದಾಯ ಮೂಲ. ಇದನ್ನು ಬಿಟ್ರೆ ಈ ತನಕ ರಾಷ್ಟ್ರೀಯ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿರೋ 9 ಟನ್ ಚಿನ್ನಕ್ಕೆ ಬಡ್ಡಿ ರೂಪದಲ್ಲಿ ಪ್ರತೀ ವರ್ಷ 100 ಕೆಜಿ ಚಿನ್ನ ನೀಡಲಾಗುತ್ತದೆ. ಇನ್ನು, ಗೋವಿಂದನ ಹೆಸರಿನಲ್ಲಿ ಸ್ಥಿರ ಠೇವಣಿ ಇಟ್ಟಿರೋ 14 ಸಾವಿರ ಕೋಟಿ ರೂಪಾಯಿಗೆ ಪ್ರತೀ ವರ್ಷ 845 ಕೋಟಿ ರೂಪಾಯಿ ಬಡ್ಡಿ ಸಿಗುತ್ತದೆ.

ವಿಐಪಿ, ವಿವಿಐಪಿ ಟಿಕೆಟ್ ಮಾರಾಟದಿಂದಾಗಿ ಟಿಟಿಡಿಗೆ ಕನಿಷ್ಠ 250 ಕೋಟಿ ರೂಪಾಯಿ ವಾರ್ಷಿಕ ಆದಾಯ ಸಲ್ಲುತ್ತದೆ. ಇನ್ನು, ತಿಮ್ಮಪ್ಪನ ಮಹಾಪ್ರಸಾದ ಲಡ್ಡು ಮಾರಾಟದಿಂದಲೂ ಟಿಟಿಡಿಗೆ ಪ್ರತೀ ವರ್ಷ ಕನಿಷ್ಠ 200 ಕೋಟಿ ರೂಪಾಯಿ ಲಾಭ ದೊರೆಯುತ್ತದೆ. ಇದೆಲ್ಲಕ್ಕಿಂತಲೂ ವಿಶೇಷ ಅನಿಸೋ ಆದಾಯದ ಮೂಲ ತಿಮ್ಮಪ್ಪನಿಗೆ ಭಕ್ತರು ಸಮರ್ಪಿಸೋ ಮುಡಿ ಕೂದಲು!

ಹೌದು, ಮುಡಿ ಕೂದಲನ್ನು ಟಿಟಿಡಿ ಪ್ರತೀ ವರ್ಷ ಹರಾಜು ಹಾಕುತ್ತದೆ. ಈ ಹರಾಜು ಪ್ರಕ್ರಿಯೆಯಲ್ಲಿ ಮುಡಿಯಿಂದಾಗಿಯೇ ಟಿಟಿಡಿ ಖಜಾನೆಗೆ ಪ್ರತೀ ವರ್ಷ ಕನಿಷ್ಠ ನೂರು ಕೋಟಿ ಸೇರುತ್ತದೆ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ