ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್..

ರಾಮನಗರ: ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್! ಗ್ರಾಮೀಣ ಭಾಗದಲ್ಲಿ ಕೆರೆ, ಕಲ್ಯಾಣಿ, ಕಾಲುದಾರಿ ವೀಕ್ಷಣೆ, ಸಿಬ್ಬಂದಿಗಳ ಕಾರ್ಯವೈಖರಿ. ಹೀಗೆ ಹತ್ತಾರು ಕಾಮಗಾರಿಗಳನ್ನು ಕುಳಿತ್ತಲ್ಲಿಯೇ ವೀಕ್ಷಿಸಲೂ ಸಹ ಈ ಡ್ರೋನ್ ಎಂಬ ಪಕ್ಷಿನೋಟ ಬಳಕೆಯಾಗುತ್ತಿದೆ. ಡ್ರೋನ್ ಹದ್ದಿನಕಣ್ಣು! ಹೌದು ಇಂತಹ ಆಧುನಿಕ ತಂತ್ರಜ್ಞಾನವನ್ನು ರಾಮನಗರ ಜಿಲ್ಲಾ ಪಂಚಾಯತಿ ಅಳವಡಿಸಿಕೊಂಡಿದೆ. ಮೊದಲ ಬಾರಿಗೆ ಸುಮಾರು 1.90 ಲಕ್ಷ ಮೌಲ್ಯದ ಡ್ರೋನ್ ಅನ್ನು ಜಿಲ್ಲಾ ಪಂಚಾಯತಿ ಖರೀದಿ ಮಾಡಿದೆ. ಈ ಮೂಲಕ ತಮ್ಮ ಇಲಾಖೆಗಳ ಮೇಲೆ ಡ್ರೋನ್ […]

ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್..
Follow us
|

Updated on:May 30, 2020 | 4:43 PM

ರಾಮನಗರ: ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್! ಗ್ರಾಮೀಣ ಭಾಗದಲ್ಲಿ ಕೆರೆ, ಕಲ್ಯಾಣಿ, ಕಾಲುದಾರಿ ವೀಕ್ಷಣೆ, ಸಿಬ್ಬಂದಿಗಳ ಕಾರ್ಯವೈಖರಿ. ಹೀಗೆ ಹತ್ತಾರು ಕಾಮಗಾರಿಗಳನ್ನು ಕುಳಿತ್ತಲ್ಲಿಯೇ ವೀಕ್ಷಿಸಲೂ ಸಹ ಈ ಡ್ರೋನ್ ಎಂಬ ಪಕ್ಷಿನೋಟ ಬಳಕೆಯಾಗುತ್ತಿದೆ.

ಡ್ರೋನ್ ಹದ್ದಿನಕಣ್ಣು! ಹೌದು ಇಂತಹ ಆಧುನಿಕ ತಂತ್ರಜ್ಞಾನವನ್ನು ರಾಮನಗರ ಜಿಲ್ಲಾ ಪಂಚಾಯತಿ ಅಳವಡಿಸಿಕೊಂಡಿದೆ. ಮೊದಲ ಬಾರಿಗೆ ಸುಮಾರು 1.90 ಲಕ್ಷ ಮೌಲ್ಯದ ಡ್ರೋನ್ ಅನ್ನು ಜಿಲ್ಲಾ ಪಂಚಾಯತಿ ಖರೀದಿ ಮಾಡಿದೆ. ಈ ಮೂಲಕ ತಮ್ಮ ಇಲಾಖೆಗಳ ಮೇಲೆ ಡ್ರೋನ್ ಕಣ್ಣಿಡಲು ಜಿಪಂ ಸಿಇಓ ಯೋಜನೆ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಒಂದರಂತೆ ಇನ್ನೂ ಮೂರು ಡ್ರೋನ್ ಖರೀದಿ ಮಾಡಲು ಮುಂದಾಗಿದೆ. ಅಂದಹಾಗೆ ಕುಳಿತಲ್ಲಿಯೇ ಡ್ರೋನ್ ಮೂಲಕ ನರೇಗಾ ಕಾಮಗಾರಿಗಳ ವೀಕ್ಷಿಸುವುದು, ರಸ್ತೆ ಬದಿ ಕಾಮಗಾರಿ, ಕಲ್ಯಾಣಿ, ಕೆರೆ-ಕುಂಟೆಗಳ ವೀಕ್ಷಣೆ ಮೂಲಕ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಡ್ರೋನ್ ಬಳಕೆ ಮಾಡಲಾಗುವುದು.

ಇದರೊಂದಿಗೆ ಏಕಾಏಕಿ ಗ್ರಾಪಂಗಳ ಮೇಲೆ ಡ್ರೋನ್ ಹಾರಿಸುವ ಮೂಲಕ ಗ್ರಾಪಂ ಸಿಬ್ಬಂದಿಯ ಕಾರ್ಯವೈಖರಿಯ ಪರಿಶೀಲನೆಗೂ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಡ್ರೋನ್ ನೀಡುವ ಮೂಲಕ ಆಯಾ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಯನ್ನು ಜಿಪಂ ಇಸಿಓ ಇಕ್ರಮ್ ಅವರು ಕುಳಿತಲ್ಲಿಯೇ ಪರಿಶೀಲನೆ ನಡೆಸಲಿದ್ದಾರೆ.

ಡ್ರೋನ್ ವಿಶೇಷ 1.90 ಲಕ್ಷ ಮೌಲ್ಯದ ಡ್ರೋನ್ ಇದಾಗಿದ್ದು, 120 ಡಿಗ್ರಿ ವರೆಗು ಕ್ಯಾಮಾರಾ ತಿರುಗಲಿದೆ. ಸುಮಾರು ಒಂದು ಸಾವಿರ ಅಡಿ ಎತ್ತರ ಹಾರಲಿರುವ ಡ್ರೋನ್ ಇದಾಗಿದ್ದು, 8 ಕಿ.ಮಿ ದೂರ ಸಂಚರಿಸಲಿದೆ.

ಆದರೆ, ಇದರ ಬ್ಯಾಟರಿ ಕೇವಲ 15 ನಿಮಿಷವಷ್ಟೆ ಬರಲಿದೆ. ಹೀಗಾಗಿ 5 ಬ್ಯಾಟರಿಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ 1 ಗಂಟೆಗಳ ಕಾಲ ಡ್ರೋನ್ ಹಾರಾಟ ನಡೆಸಲು ಸಿದ್ದಂತೆ ನಡೆಸಲಾಗಿದೆ.

Published On - 4:39 pm, Sat, 30 May 20

‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?