AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ಜಮೀನಿನಲ್ಲಿ ದೀಢಿರನೆ ಪ್ರತ್ಯಕ್ಷವಾದ ಅಪರೂಪದ ನಕ್ಷತ್ರ ಆಮೆ

ನಕ್ಷತ್ರ ಆಮೆ ಒಂದು ಅಪರೂಪದ ಆಮೆ ಆಗಿದ್ದು, ರಚನೆ ಮತ್ತು ಆಕಾರ ನಕ್ಷತ್ರದಂತೆ ಇರುತ್ತದೆ. ಇದು ಆಮೆ ಸಂತತಿಯ ಮೊದಲ ಮೂಲ ಪೀಳಿಗೆಯಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳಿತಾಗುತ್ತದೆ ಎನ್ನುವ ಕಲ್ಪನೆಯೂ ಕೂಡ ಇದೆ.

ಬಾಗಲಕೋಟೆ ಜಮೀನಿನಲ್ಲಿ ದೀಢಿರನೆ ಪ್ರತ್ಯಕ್ಷವಾದ ಅಪರೂಪದ ನಕ್ಷತ್ರ ಆಮೆ
ನಕ್ಷತ್ರ ಆಮೆ
preethi shettigar
|

Updated on:Dec 14, 2020 | 10:15 AM

Share

ಬಾಗಲಕೋಟೆ: ಅವಸಾನದ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯೊಂದು ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಜಮೀನೊಂದರಲ್ಲಿ ಪತ್ತೆ ಆಗಿದೆ. ಬಯಲು ಸೀಮೆಯಲ್ಲಿ ಈ ಆಮೆ ಕಂಡು ಬರುತ್ತದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಇದು ಅಳಿವಿನಂಚಿನಲ್ಲಿದೆ ಎಂದು ಹೇಳಲಾಗುತ್ತಿದೆ.

ಕೆರೂರ ಪಟ್ಟಣದ ಬಳಿ ಸಹಾಯಕ ಕೃಷಿ ಅಧಿಕಾರಿ ಶಂಕರ ನಾಯಕ್ ಅವರ ಜಮೀನಿನಲ್ಲಿ ಈ ಅಪರೂಪದ ಆಮೆ ಕಂಡುಬಂದಿದ್ದು, ಶಂಕರ ನಾಯಕ್‌ ಅವರು ನಕ್ಷತ್ರ ಆಮೆಯನ್ನು ಬಾದಾಮಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಬಾದಾಮಿ ವಲಯ ಅರಣ್ಯ ಅಧಿಕಾರಿ ಪಿ.ಎಸ್. ಖೇಡಗಿ ಹಾಗೂ ಸಿಬ್ಬಂದಿ ಆಮೆಯ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಈ ಆಮೆಯನ್ನು ಕಾಡಿಗೆ ಹೋಗಿ ಬಿಟ್ಟು ಬಂದಿದ್ದಾರೆ.

ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ

ಇಂಡಿಯನ್ ಸ್ಟಾರ್ ಟಾರ್ಟೈಸ್ ಅಳಿವಿನಂಚಿನಲ್ಲಿದ್ದು, ಇದು ನೋಡಲು ಕಲ್ಲಿನಂತೆ ಕಾಣುತ್ತದೆ. ಕಲ್ಲುಗಳ ಮಧ್ಯದಲ್ಲಿ ಈ ನಕ್ಷತ್ರದ ಆಮೆ ಇದ್ದರೆ ಇದನ್ನು ಗುರುತಿಸುವುದು ಬಹಳ ಕಷ್ಟ. ಕೆರೂರ ಭಾಗದಲ್ಲಿ ಇದೀಗ ಆಮೆ ಪತ್ತೆಯಾಗಿದ್ದರಿಂದ ಈ ಭಾಗದ ಅರಣ್ಯ ಪ್ರದೇಶದಲ್ಲಿ ಇದರ ಸಂತತಿ ಇರಬಹುದು ಎಂದು ಊಹಿಸಲಾಗಿದೆ.

ನಕ್ಷತ್ರ ಆಮೆ ಒಂದು ಅಪರೂಪದ ಆಮೆ ಆಗಿದ್ದು, ರಚನೆ ಮತ್ತು ಆಕಾರ ನಕ್ಷತ್ರದಂತೆ ಇರುತ್ತದೆ. ಇದು ಆಮೆ ಸಂತತಿಯ ಮೊದಲ ಮೂಲ ಪೀಳಿಗೆಯಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳಿತಾಗುತ್ತದೆ ಎನ್ನುವ ಕಲ್ಪನೆಯೂ ಕೂಡ ಇದ್ದು, ಇದು ಅದೃಷ್ಟದ ಸಂಕೇತ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದ ಇದಕ್ಕೆ  ಲಕ್ಷಗಟ್ಟಲೆ ಹಣ ಕೊಟ್ಟು ಖರೀಧಿಸಲು ಜನ ಮುಂದಾಗುತ್ತಾರೆ ಎಂದು ತಿಳಿದು ಬಂದಿದೆ.

ಈ ಆಮೆ ಸೇವಿಸುವುದರಿಂದ, ತೈಲ ತೆಗೆದು ಕುಡಿಯುವುದರಿಂದ ಬಾರಿ ಪ್ರಮಾಣದ ಪೌಷ್ಟಿಕಾಂಶ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ನಿಶಕ್ತಿ ಇದ್ದವರು ಇದನ್ನು ಸೇವಿಸಿದರೆ ಸದೃಢರಾಗುತ್ತಾರೆ ಎಂಬ ನಂಬಿಕೆ  ಇದೆ. ಆ ಕಾರಣಕ್ಕೆ ಒಂದು ನಕ್ಷತ್ರ ಆಮೆಗೆ 2 ಲಕ್ಷದವರೆಗೂ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ. ನಕ್ಷತ್ರ ಆಮೆ ಸಸ್ಯಾಹಾರಿಯಾಗಿದ್ದು ರೇಷ್ಮೆ ತೊಪ್ಪಲು, ದಾಸವಾಳ ಎಲೆ, ತರಕಾರಿ ಪದಾರ್ಥ ಮಾತ್ರ ಸೇವಿಸುತ್ತದೆ. ಒಟ್ಟಿನಲ್ಲಿ ಅಪರೂಪದ ಅವಸಾನದ ಅಂಚಿನಲ್ಲಿರುವ ನಕ್ಷತ್ರ ಆಮೆ ಈಗ ದಿಢೀರ್ ಪತ್ತೆಯಾಗುವ ಮೂಲಕ ತಾನು ಇನ್ನು ಅಸ್ತಿತ್ವದಲ್ಲಿದ್ದೇನೆ ಎಂದು ತೋರಿಸಿಕೊಟ್ಟಿದೆ.

-ರವಿ ಮೂಖಿ

ಕಂದು ಮೀನು ಗೂಬೆ, ನಕ್ಷತ್ರ ಆಮೆ ಮಾರಲು ಯತ್ನಿಸಿದ ಕಿರಾತಕರು ಅಂದರ್​

Published On - 6:21 am, Sun, 13 December 20

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ