AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿ ಬೆಳಗೆರೆ ನಿಧನಕ್ಕೂ ಹತ್ತು ನಿಮಿಷಗಳ ಮುಂಚೆ ಆಗಿದ್ದೇನು? ಆಪ್ತ ವಾದಿರಾಜ್​ ಗಮನಿಸಿದ್ದೇನು?

ಬೆಂಗಳೂರು: ಖ್ಯಾತ ಬರಹಗಾರ ಹಾಗೂ ನಟ ನಿರೂಪಕ ರವಿ ಬೆಳಗೆರೆ ಅವರ ನಿಧನ ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿದ್ದು, ರವಿ ಬೆಳಗೆರೆ ಅವರ ನಿಧನಕ್ಕೂ ಮುಂಚಿನ ಹತ್ತು ನಿಮಿಷಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಕಳೆದ ಕೆಲವು ತಿಂಗಳುಗಳಿಂದ ಬೆಳಗೆರೆ ಅವರು ತಮ್ಮ ಕಚೇರಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಎಂದಿನಂತೆ ಕಚೇರಿಯಲ್ಲೇ ಉಳಿದುಕೊಂಡಿದ್ದ ರವಿ ಬೆಳಗೆರೆ ನೆನ್ನೆ ರಾತ್ರಿ ಕಚೇರಿಯಲ್ಲೇ ನಿದ್ರೆಗೆ ಜಾರಿದ್ದಾರೆ. ರವಿಬೆಳೆಗೆರೆ ಜೊತೆ ಅವರ ಆಪ್ತ ವಾದಿರಾಜ್ ಯಾವಗಲೂ ಜೊತೆಯಲ್ಲಿರುತಿದ್ದರು. ಅದರಂತೆ ನೆನ್ನೆ ರಾತ್ರಿ […]

ರವಿ ಬೆಳಗೆರೆ ನಿಧನಕ್ಕೂ ಹತ್ತು ನಿಮಿಷಗಳ ಮುಂಚೆ ಆಗಿದ್ದೇನು? ಆಪ್ತ ವಾದಿರಾಜ್​ ಗಮನಿಸಿದ್ದೇನು?
ಪೃಥ್ವಿಶಂಕರ
|

Updated on: Nov 13, 2020 | 9:46 AM

Share

ಬೆಂಗಳೂರು: ಖ್ಯಾತ ಬರಹಗಾರ ಹಾಗೂ ನಟ ನಿರೂಪಕ ರವಿ ಬೆಳಗೆರೆ ಅವರ ನಿಧನ ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿದ್ದು, ರವಿ ಬೆಳಗೆರೆ ಅವರ ನಿಧನಕ್ಕೂ ಮುಂಚಿನ ಹತ್ತು ನಿಮಿಷಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ಕೆಲವು ತಿಂಗಳುಗಳಿಂದ ಬೆಳಗೆರೆ ಅವರು ತಮ್ಮ ಕಚೇರಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಎಂದಿನಂತೆ ಕಚೇರಿಯಲ್ಲೇ ಉಳಿದುಕೊಂಡಿದ್ದ ರವಿ ಬೆಳಗೆರೆ ನೆನ್ನೆ ರಾತ್ರಿ ಕಚೇರಿಯಲ್ಲೇ ನಿದ್ರೆಗೆ ಜಾರಿದ್ದಾರೆ. ರವಿಬೆಳೆಗೆರೆ ಜೊತೆ ಅವರ ಆಪ್ತ ವಾದಿರಾಜ್ ಯಾವಗಲೂ ಜೊತೆಯಲ್ಲಿರುತಿದ್ದರು. ಅದರಂತೆ ನೆನ್ನೆ ರಾತ್ರಿ ಕೂಡ ವಾದಿರಾಜ್​ ಬೆಳಗೆರೆ ಜೊತೆಯಲ್ಲೇ ಉಳಿದುಕೊಂಡಿದ್ದರು.

ಮಧ್ಯರಾತ್ರಿ 12.15ರ ಸುಮಾರಿಗೆ ಎಚ್ಚರವಾಗಿ ನೀರು ಕೇಳಿದ ಬೆಳಗೆರೆ.. ನಿದ್ರೆಯಲ್ಲಿದ್ದ ರವಿ ಬೆಳಗೆರೆಗೆ ಮಧ್ಯರಾತ್ರಿ 12.15ರ ಸುಮಾರಿಗೆ ಎಚ್ಚರವಾಗಿದೆ. ಬಳಿಕ ಆಪ್ತ ವಾದಿರಾಜ್​ಗೆ ಬೆಳಗೆರೆ ನೀರು ಕೊಡಲು ಹೇಳಿದ್ದಾರೆ. ನೀರು ಕುಡಿದ ನಂತರ ಬೆಳಗೆರೆ ವಾದಿರಾಜ್​ನನ್ನು ಸಮಯ ಎಷ್ಟು ಎಂದು ಕೇಳಿದ್ದಾರೆ. ಆಗ ವಾದಿರಾಜ್ ರೆಸ್ಟರೂಂಗೆ ಹೊಗ್ತಿರಾ ಸರ್ ಅಂತ ರವಿ ಬೆಳಗೆರೆ ಅವರನ್ನು ಕೇಳಿದ್ದಾರೆ. ಈ ವೇಳೆ ರವಿ ಬೆಳಗೆರೆ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ.

ಕೂಡಲೇ ಆಂಬ್ಯುಲೆನ್ಸ್​ಗೆ ವಾದಿರಾಜ್ ಕಾಲ್ ಮಾಡಿದ್ದಾರೆ. ಜೊತೆಗೆ ಕುಟುಂಬಸ್ಥರಿಗೂ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಘಟನೆ ನಡೆದ 10 ನಿಮಿಷದಲ್ಲೇ ಕಚೇರಿ ಬಳಿ ಮಗ ಕರ್ಣ, ಮಗಳು ಚೇತನ ಹಾಗೂ ಕುಟುಂಬಸ್ಥರು ಆಗಮಿಸಿದ್ದಾರೆ. ಅಷ್ಟೊತ್ತಿಗಾಗಲೇ ಕಚೇರಿ ಮುಂದೆ ಆಂಬ್ಯುಲೆನ್ಸ್ ಬಂದು ನಿಂತಿತ್ತು. ರವಿ ಬೆಳಗೆರೆ ಹೃದಯ ಬಡಿತ ಚೆಕ್ ಮಾಡಿದ ಆಂಬ್ಯಲೆನ್ಸ್​ನಲ್ಲಿದ್ದ ವೈದ್ಯರು ಮೃತ ಪಟ್ಟಿರೋದಾಗಿ ತಿಳಿಸಿದ್ದಾರೆ.

ಈ ಬಳಿಕ ಕುಟುಂಬಸ್ಥರು ಮತ್ತೆ ಕುಮಾರಸ್ವಾಮಿ ಲೇಔಟ್​ನ ಸಾಗರ್ ಅಪೋಲೊ ಆಸ್ಪತ್ರೆಗೆ ರವಿ ಬೆಳಗೆರೆ ಕರೆದೊಯ್ದಿದ್ದಾರೆ. ಈ ವೇಳೆ ಆಸ್ಪತ್ರೆ ವೈದ್ಯರು ಸಹ ರವಿ ಬೆಳಗೆರೆ ಅವರು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ಬಳಿಕ ರವಿ ಬೆಳಗೆರೆ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಮನೆಗೆ ತಂದಿದ್ದಾರೆ.

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ