ಹನುಮಂತಯ್ಯನವರು ದೂರದೃಷ್ಟಿಯಿಂದ ವಿಧಾನ ಸೌಧಕ್ಕೆ ಒಂದೇ ಬಾಗಿಲು ಇಟ್ಟಿದ್ದಾರೆ: ಸಚಿವ ಅಶೋಕ್ ಈಗ್ಯಾಕೆ ಹೀಗಂದರು!?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತು ಎತ್ತಿದರೆ ವಿಧಾನ ಸೌಧಕ್ಕೆ ಚಪ್ಪಡಿ ಆಗುತ್ತೇನೆ ಅಂತಾರೆ! ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ದೂರದೃಷ್ಟಿಯಿಂದ ಇಂತಹ ವ್ಯಕ್ತಿ ಹುಟ್ಟಬಹುದು ಅಂತಾನೇ ವಿಧಾನ ಸೌಧಕ್ಕೆ ಒಂದು ಬಾಗಿಲು ಇಡುವ ಬದಲು ನಾಲ್ಕು ಬಾಗಿಲು ಇಟ್ಟಿದ್ದಾರೆ. ಒಂದು ಬಾಗಿಲು ಇರಿಸಿದರೆ ಇವರು ಬೇರೆ ಚಪ್ಪಡಿ ತಂದು ಹಾಕಬಹುದು ಅಂತಾ ನಾಲ್ಕು ಬಾಗಿಲು ಮಾಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್​ ನಾಯಕ ಶಿವಕುಮಾರ್ ಗೆ ಈಗ ಯಾವುದೇ ದಿಕ್ಕು ಇಲ್ಲ. ಚುನಾವಣೆ ಮುಗಿದ ಬಳಿಕ ಅವರಿಗೆ […]

ಹನುಮಂತಯ್ಯನವರು ದೂರದೃಷ್ಟಿಯಿಂದ ವಿಧಾನ ಸೌಧಕ್ಕೆ ಒಂದೇ ಬಾಗಿಲು ಇಟ್ಟಿದ್ದಾರೆ: ಸಚಿವ ಅಶೋಕ್ ಈಗ್ಯಾಕೆ ಹೀಗಂದರು!?
ವಿಧಾನಸೌಧ (ಸಾಂದರ್ಭಿಕ ಚಿತ್ರ)
ಸಾಧು ಶ್ರೀನಾಥ್​

Updated on: Oct 28, 2020 | 11:39 AM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತು ಎತ್ತಿದರೆ ವಿಧಾನ ಸೌಧಕ್ಕೆ ಚಪ್ಪಡಿ ಆಗುತ್ತೇನೆ ಅಂತಾರೆ! ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ದೂರದೃಷ್ಟಿಯಿಂದ ಇಂತಹ ವ್ಯಕ್ತಿ ಹುಟ್ಟಬಹುದು ಅಂತಾನೇ ವಿಧಾನ ಸೌಧಕ್ಕೆ ಒಂದು ಬಾಗಿಲು ಇಡುವ ಬದಲು ನಾಲ್ಕು ಬಾಗಿಲು ಇಟ್ಟಿದ್ದಾರೆ. ಒಂದು ಬಾಗಿಲು ಇರಿಸಿದರೆ ಇವರು ಬೇರೆ ಚಪ್ಪಡಿ ತಂದು ಹಾಕಬಹುದು ಅಂತಾ ನಾಲ್ಕು ಬಾಗಿಲು ಮಾಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್​ ನಾಯಕ ಶಿವಕುಮಾರ್ ಗೆ ಈಗ ಯಾವುದೇ ದಿಕ್ಕು ಇಲ್ಲ. ಚುನಾವಣೆ ಮುಗಿದ ಬಳಿಕ ಅವರಿಗೆ ದೇವರೇ ದಿಕ್ಕು ಎಂದು ಸಚಿವ ಆರ್​ ಅಶೋಕ್ ಹೇಳಿದ್ದಾರೆ.

ನಮ್ಮಲ್ಲಿ ಯಡಿಯೂರಪ್ಪ ಒಬ್ಬರೇ ರಾಜಾ ಹುಲಿ
ಉಪಚುನಾವಣೆ ಬಳಿಕ ಬಿಜೆಪಿಯಲ್ಲಿ ಆಂತರಿಕ ಕಲಹ ಜಾಸ್ತಿಯಾಗುತ್ತದೆ ಅಂತಾ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಅಶೋಕ್, ನಮ್ಮಲ್ಲಿ ಯಡಿಯೂರಪ್ಪ ಒಬ್ಬರೇ ರಾಜಾ ಹುಲಿ. ನಮ್ಮಲ್ಲಿ ಬೇರೆ ಯಾವುದೇ‌ ಹುಲಿಗಳು ಇಲ್ಲ. ಕಾಂಗ್ರೆಸ್ ನಲ್ಲಿ ಸುಮಾರು ಜನ‌ ನಾನೇ ಹುಲಿ ಹುಲಿ ಅಂತಾ ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us