ಅಧಿಕಾರಿಗಳ ಬೇಜವಾಬ್ದಾರಿ, ಖಜಾನೆಯಲ್ಲೇ ಕೊಳೀತಿದೆ ಪರಿಹಾರ ಕಾಮಗಾರಿ ಹಣ

ರಾಯಚೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನೆರೆ ಪರಿಹಾರ ಕಾಮಗಾರಿಗೆ ಎಂದು ಬಿಡುಗಡೆ ಆದ ಹಣ ಖಜಾನೆಯಲ್ಲೇ ಉಳಿದುಕೊಂಡಿದೆ. ಪ್ರವಾಹದಿಂದ ಇಡೀ ಉತ್ತರ ಕರ್ನಾಟಕ ಜಿಲ್ಲೆಗಳು ಮುಳುಗಿ ಹೋಗಿದ್ದವು. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ನೀಡಿದ್ದ ಹಣ ಬಳಕೆಯಾಗದೆ ಖಜಾನೆಯಲ್ಲೇ ಕೊಳಿತಿದೆ. ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ 447 ಕೋಟಿ ಹಣ ಬಿಡುಗಡೆ ಮಾಡಿತ್ತು. ಆದ್ರೆ ಅಧಿಕಾರಿಗಳು ಯಾವುದೇ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳದೆ ಕುಳಿತಿದ್ದಾರೆ. ನೆರೆಪಿಡೀತ ಗ್ರಾಮಸ್ಥರು ಮೂಲ ಸೌಕರ್ಯದಿಂದ ವಂಚಿತರಾಗೆ ಬದುಕುತ್ತಿದ್ದಾರೆ. […]

ಅಧಿಕಾರಿಗಳ ಬೇಜವಾಬ್ದಾರಿ, ಖಜಾನೆಯಲ್ಲೇ ಕೊಳೀತಿದೆ ಪರಿಹಾರ ಕಾಮಗಾರಿ ಹಣ
ಸಾಧು ಶ್ರೀನಾಥ್​

Updated on: Mar 02, 2020 | 10:13 AM

ರಾಯಚೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನೆರೆ ಪರಿಹಾರ ಕಾಮಗಾರಿಗೆ ಎಂದು ಬಿಡುಗಡೆ ಆದ ಹಣ ಖಜಾನೆಯಲ್ಲೇ ಉಳಿದುಕೊಂಡಿದೆ. ಪ್ರವಾಹದಿಂದ ಇಡೀ ಉತ್ತರ ಕರ್ನಾಟಕ ಜಿಲ್ಲೆಗಳು ಮುಳುಗಿ ಹೋಗಿದ್ದವು.

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ನೀಡಿದ್ದ ಹಣ ಬಳಕೆಯಾಗದೆ ಖಜಾನೆಯಲ್ಲೇ ಕೊಳಿತಿದೆ. ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ 447 ಕೋಟಿ ಹಣ ಬಿಡುಗಡೆ ಮಾಡಿತ್ತು. ಆದ್ರೆ ಅಧಿಕಾರಿಗಳು ಯಾವುದೇ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳದೆ ಕುಳಿತಿದ್ದಾರೆ. ನೆರೆಪಿಡೀತ ಗ್ರಾಮಸ್ಥರು ಮೂಲ ಸೌಕರ್ಯದಿಂದ ವಂಚಿತರಾಗೆ ಬದುಕುತ್ತಿದ್ದಾರೆ.

ಖಜಾನೆಯಲ್ಲಿ ಒಟ್ಟು 447 ಕೋಟಿ ರೂ ನೆರೆ ಪರಿಹಾರವಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲೂ ಈ ಹಣ ಬಳಕೆಯಾಗಿಲ್ಲ. ರಾಯಚೂರು ಜಿಲ್ಲೆಗೆ 9.55 ಕೋಟಿ ರೂಪಾಯಿ ಪರಿಹಾರ, ಯಾದಗಿರಿ ಜಿಲ್ಲೆಗೆ 9.39 ಕೋಟಿ ರೂಪಾಯಿ ಪರಿಹಾರ, ಕೊಪ್ಪಳ ಜಿಲ್ಲೆಗೆ 11.72 ಕೋಟಿ ರೂಪಾಯಿ ಪರಿಹಾರ, ಕಲಬುರಗಿ ಜಿಲ್ಲೆಗೆ 13.36 ಕೋಟಿ ರೂಪಾಯಿ ಪರಿಹಾರ, ಬಳ್ಳಾರಿ ಜಿಲ್ಲೆಗೆ 5.10 ಕೋಟಿ ರೂ. ಪರಿಹಾರ ನೀಡಲಾಗಿದೆ.

ಆದ್ರೆ ಆಯಾ ಜಿಲ್ಲಾ ಪಂಚಾಯತ ಖಜಾನೆಗಳಲ್ಲಿಯೇ ಹಣ ಉಳಿದುಕೊಂಡಿದೆ. ಹೀಗಾಗಿ ನೆರೆಸಂತ್ರಸ್ತರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ಹಣ ಕೊಟ್ರು ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸಲು ಹಣವನ್ನು ಬಳಕೆ ಮಾಡದೇ ಇರೋದಕ್ಕೆ ಸಂತ್ರಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.‌

Published On - 10:12 am, Mon, 2 March 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us