
ನೆಲಮಂಗಲ: ಹಣದ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾದ ಹಿನ್ನೆಲೆಯಲ್ಲಿ ಗಲಾಟೆ ನೋಡಲು ಜನ ಮುಗಿಬಿದ್ದು ಟ್ರಾಫಿಕ್ ಜಾಮ್ ಉಂಟಾದ ಸ್ವಾರಸ್ಯಕರ ಪ್ರಸಂಗ ಜಿಲ್ಲೆಯ ನೆಲಮಂಗಲ ಟೌನ್ನ ಟಿ.ಬಿ. ಸ್ಟಾಪ್ ಬಳಿ ನಡೆದಿದೆ.
ರವಿ ಹಾಗೂ ನಾಗೇಂದ್ರ ಎಂಬ ಸುಭಾಷ್ ನಗರದ ನಿವಾಸಿಗಳು ಹಣದ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇಬ್ಬರೂ ಬ್ಯಾಗ್ ಹೊಲಿಯುವ ವೃತ್ತಿಯಲ್ಲಿದ್ದು ರವಿಗೆ ಕೊಡಬೇಕಿದ್ದ ಹಣವನ್ನು ಕೊಡದೆ ನಾಗೇಂದ್ರ ಸತಾಯಿಸುತ್ತಿದ್ದನಂತೆ.
ಹಾಗಾಗಿ, ಇಂದು ಬೈಕ್ನಲ್ಲಿ ಬರುತ್ತಿದ್ದ ನಾಗೇಂದ್ರನನ್ನ ಅಡ್ಡಗಟ್ಟಿದ ರವಿ ಆತನ ಕೊರಳ ಪಟ್ಟಿ ಹಿಡಿದು ಕೈ ಕೈಮಿಲಾಯಿಸಲು ಯತ್ನಿಸಿದ್ದಾನೆ. ಇಬ್ಬರ ಜಗಳ ನೋಡಲು ಸೇರಿದ್ದ ಮಂದಿಯಿಂದ ಟ್ರಾಫಿಕ್ ಜಾಮ್ ಉಂಟಾಯಿತು.
Published On - 12:40 pm, Wed, 21 October 20