Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿಯಲ್ಲಿ ಟಗರು ಫೈಟ್​: ಡಿಚ್ಚಿ ಸದ್ದಿಗೆ ರಂಗೇರಿದ ಅಖಾಡ

ಹಾವೇರಿ: ಸುತ್ತಲು ಜನ.. ಶಿಳ್ಳೆ, ಕೇಕೆಯ ಸದ್ದು. ನಡುವಲ್ಲಿ ಹುಚ್ಚೆದ್ದು ಗುದ್ದಾಡ್ತಿರೋ ಟಗರುಗಳು. ಇಷ್ಟೆಲ್ಲಾ ಇದ್ಮೇಲೆ ಇಲ್ಲಿ ಮನರಂಜನೆಗೆ ಕೊರತೆಯೇ ಇರಲ್ಲ. ಇಂತಹ ಟಗರು ಫೈಟ್​ಗೆ ಅಖಾಡ ಸಿದ್ಧವಾಗಿದ್ದು ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ವಿನಾಯಕನಗರದಲ್ಲಿ. ವಿನಾಯಕ ಸ್ನೇಹ ಬಳಗದವರು ರಾಜ್ಯಮಟ್ಟದ ಟಗರಿನ ಕಾಳಗ ನಡೆಸಿದ್ರು. ಹಾಲು ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು ಹೀಗೆ ವಿವಿಧ ಹಂತಗಳಲ್ಲಿ ಕಾಳಗ ನಡೀತು. ಶಿಳ್ಳೆ, ಕೇಕೆಗಳ ನಡುವೆ ಹೈವೋಲ್ಟೇಜ್ ಕಾಳಗ:  ಪ್ರಥಮ, ದ್ವಿತೀಯ ಮತ್ತು […]

ಹಾವೇರಿಯಲ್ಲಿ ಟಗರು ಫೈಟ್​: ಡಿಚ್ಚಿ ಸದ್ದಿಗೆ ರಂಗೇರಿದ ಅಖಾಡ
Follow us
ಸಾಧು ಶ್ರೀನಾಥ್​
|

Updated on: Jan 19, 2020 | 7:58 PM

ಹಾವೇರಿ: ಸುತ್ತಲು ಜನ.. ಶಿಳ್ಳೆ, ಕೇಕೆಯ ಸದ್ದು. ನಡುವಲ್ಲಿ ಹುಚ್ಚೆದ್ದು ಗುದ್ದಾಡ್ತಿರೋ ಟಗರುಗಳು. ಇಷ್ಟೆಲ್ಲಾ ಇದ್ಮೇಲೆ ಇಲ್ಲಿ ಮನರಂಜನೆಗೆ ಕೊರತೆಯೇ ಇರಲ್ಲ. ಇಂತಹ ಟಗರು ಫೈಟ್​ಗೆ ಅಖಾಡ ಸಿದ್ಧವಾಗಿದ್ದು ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ವಿನಾಯಕನಗರದಲ್ಲಿ. ವಿನಾಯಕ ಸ್ನೇಹ ಬಳಗದವರು ರಾಜ್ಯಮಟ್ಟದ ಟಗರಿನ ಕಾಳಗ ನಡೆಸಿದ್ರು. ಹಾಲು ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು ಹೀಗೆ ವಿವಿಧ ಹಂತಗಳಲ್ಲಿ ಕಾಳಗ ನಡೀತು.

ಶಿಳ್ಳೆ, ಕೇಕೆಗಳ ನಡುವೆ ಹೈವೋಲ್ಟೇಜ್ ಕಾಳಗ:  ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಟಗರುಗಳಿಗೆ ಬೆಳ್ಳಿ ಚೈನ್, ಬೆಳ್ಳಿ ಉಂಗುರ, ಬೆಳ್ಳಿ ಖಡ್ಗ ಹೀಗೆ ಬಹುಮಾನಗಳನ್ನ ಇಡಲಾಗಿತ್ತು. ಹೀಗಾಗಿ ಹಾವೇರಿ, ಧಾರವಾಡ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಟಗರುಗಳು ಕಾಳಗದಲ್ಲಿ ಭಾಗವಹಿಸಿದ್ದವು. ಇನ್ನು, ಟಗರಿನ ಕಾಳಗಕ್ಕೆ ಅಂತ್ಲೇ ಮಾಲೀಕರು ಟಗರುಗಳನ್ನ ತಯಾರು ಮಾಡಿರ್ತಾರೆ. ಟಗರುಗಳಿಗೆ ಪೌಷ್ಠಿಕಾಂಶಭರಿತ ಪದಾರ್ಥಗಳನ್ನ ತಿನ್ನಿಸಿ ಬೆಳಸ್ತಾರೆ. ಅಷ್ಟೇ ಅಲ್ಲ, ಕೆಲವರು ಟಗರುಗಳಿಗೆ ಚಲನಚಿತ್ರದ ಹೆಸರುಗಳನ್ನ ಇಟ್ಟಿದ್ರೆ, ಕೆಲವರು ತಮ್ಮ ನೆಚ್ಚಿನ ನಟರ ಹೆಸರುಗಳನ್ನ ಇಟ್ಟಿದ್ರು. ಅದ್ರಂತೆ ಸಂಘಟಕರು ಟಗರಿನ ಹೆಸರು ಕೂಗಿ ಕತೀತಿದ್ದಂತೆ ಟಗರಿನ ಮಾಲೀಕರು ಟಗರುಗಳನ್ನ ಅಖಾಡಕ್ಕೆ ಕರೆತರುತ್ತಾರೆ.

ಕೆಲವು ಟಗರುಗಳು ಎದುರಾಳಿ ಟಗರಿನ ಹೆದರಿ ಅಖಾಡದಿಂದ ಓಡಿ ಹೋದ್ರೆ, ಕೆಲವು ಟಗರುಗಳು ಸಖತ್ ಆಗಿ ಡಿಚ್ಚಿ ಹೊಡಿತಿದ್ವು. ಕೆಲವಂತೂ ನಾನಾ.. ನೀನಾ ನೋಡೇ ಬಿಡೋಣ ಅಂತಾ ಡಿಚ್ಚಿ ಹೊಡೆದದ್ದೇ ಹೊಡೆದಿದ್ದು. ಅದೇನೆ ಇರಲಿ, ಟಗರು ಕಾಳಗ ನೋಡಿದ ಜನರಂತೂ ಫುಲ್ ಎಂಜಾಯ್ ಮಾಡಿದ್ರು. ಶಿಳ್ಳೆ ಹಾಗೂ ಚಪ್ಪಾಳೆ ಹೊಡೆದು ಖುಷಿಪಟ್ರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ