AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡಿಕೆ ಮಾರಾಟಗಾರರಿಂದ 26 ಲಕ್ಷ ರೂ. ದರೋಡೆ ಪ್ರಕರಣ: ಇನ್​ಸ್ಪೆಕ್ಟರ್​ ಅಮಾನತು

ಬೆಂಗಳೂರು: ಅಡಿಕೆ ಮಾರಾಟಗಾರರ ಬಳಿ 26 ಲಕ್ಷ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ SJ ಪಾರ್ಕ್ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್ ಯೋಗೇಶ್‌ ಕುಮಾರ್​ರನ್ನ ಸಸ್ಪೆಂಡ್ ಮಾಡಲಾಗಿದೆ. ಇನ್​ಸ್ಪೆಕ್ಟರ್ ಯೋಗೇಶ್‌ನ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಅಡಿಕೆ ಮಾರಾಟಗಾರರ ಬಳಿ SJ ಪಾರ್ಕ್ ಠಾಣೆಯ SI ಜೀವನ್‌ಕುಮಾರ್ ಹಾಗೂ ಆತನ ಟೀಂ 26 ಲಕ್ಷ ರೂಪಾಯಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದೇ ವೇಳೆ ಆತನಿಂದ […]

ಅಡಿಕೆ ಮಾರಾಟಗಾರರಿಂದ 26 ಲಕ್ಷ ರೂ. ದರೋಡೆ ಪ್ರಕರಣ: ಇನ್​ಸ್ಪೆಕ್ಟರ್​ ಅಮಾನತು
KUSHAL V
|

Updated on: Sep 13, 2020 | 10:47 AM

Share

ಬೆಂಗಳೂರು: ಅಡಿಕೆ ಮಾರಾಟಗಾರರ ಬಳಿ 26 ಲಕ್ಷ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ SJ ಪಾರ್ಕ್ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್ ಯೋಗೇಶ್‌ ಕುಮಾರ್​ರನ್ನ ಸಸ್ಪೆಂಡ್ ಮಾಡಲಾಗಿದೆ. ಇನ್​ಸ್ಪೆಕ್ಟರ್ ಯೋಗೇಶ್‌ನ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಅಡಿಕೆ ಮಾರಾಟಗಾರರ ಬಳಿ SJ ಪಾರ್ಕ್ ಠಾಣೆಯ SI ಜೀವನ್‌ಕುಮಾರ್ ಹಾಗೂ ಆತನ ಟೀಂ 26 ಲಕ್ಷ ರೂಪಾಯಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದೇ ವೇಳೆ ಆತನಿಂದ ಇನ್​ಸ್ಪೆಕ್ಟರ್ ಯೋಗೇಶ್‌ ಕುಮಾರ್ 6 ಲಕ್ಷ ರೂಪಾಯಿ ಪಡೆದಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬಯಲಿಗೆ ಬಂದಿತ್ತು. ಸಿಟಿ ಮಾರುಕಟ್ಟೆ ಇನ್​ಸ್ಪೆಕ್ಟರ್ ಕುಮಾರಸ್ವಾಮಿ ಪ್ರಾಥಮಿಕ ತನಿಖೆ ನಡೆಸಿದ್ದರು ಹಾಗೂ SI ಜೀವನ್‌ಕುಮಾರ್​ನ ವಿಚಾರಣೆ ಸಹ ಮಾಡಿದ್ದರು.

ಸದ್ಯ ನಿರೀಕ್ಷಣಾ ಜಾಮೀನು ಪಡೆದಿರುವ ಯೋಗೇಶ್‌ ಕುಮಾರ್ ನಾಳೆ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಲಿರುವ ಮಾಹಿತಿ ಸಿಕ್ಕಿದೆ.