ತಾಯಿಯ ಹಿಂಬಾಲಿಸಿದ ಪುತ್ರ.. ತಾಯಿ ಅಂತ್ಯ ಸಂಸ್ಕಾರ ಆಗುತ್ತಿದ್ದಂತೆ ಪುತ್ರನೂ ಸಾವಿಗೀಡಾದ

Son Died After Mothers Last Rites in Hassan.. ಗ್ರಾ.ಪಂ ಮಾಜಿ ಸದಸ್ಯ, ಗಂಗಾಮತಸ್ಥ ಜನಾಂಗದ ಮುಖಂಡ ಗಣೇಶ್ (57) ತನ್ನ ತಾಯಿ ಗೌರಮ್ಮ(75) ರ ಅಂತ್ಯ ಸಂಸ್ಕಾರ ನಡೆಸಿ ಮನೆಗೆ ಬಂದ 2 ಗಂಟೆಗೊಳಗೆ ಮೃತಪಟ್ಟಿದ್ದಾರೆ.

ತಾಯಿಯ ಹಿಂಬಾಲಿಸಿದ ಪುತ್ರ.. ತಾಯಿ ಅಂತ್ಯ ಸಂಸ್ಕಾರ ಆಗುತ್ತಿದ್ದಂತೆ ಪುತ್ರನೂ ಸಾವಿಗೀಡಾದ
ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Feb 06, 2021 | 2:30 PM

ಹಾಸನ: ತಾಯಿ ಅಂತ್ಯ ಸಂಸ್ಕಾರದ ಬಳಿಕ ಪುತ್ರ ಕೂಡ ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾ.ಪಂ ಮಾಜಿ ಸದಸ್ಯ, ಗಂಗಾಮತಸ್ಥ ಜನಾಂಗದ ಮುಖಂಡ ಗಣೇಶ್ (57) ತನ್ನ ತಾಯಿ ಗೌರಮ್ಮ(75) ರ ಅಂತ್ಯ ಸಂಸ್ಕಾರ ನಡೆಸಿ ಮನೆಗೆ ಬಂದ 2 ಗಂಟೆಗೊಳಗೆ ಮೃತಪಟ್ಟಿದ್ದು ತಾಯಿಯನ್ನೇ ಹಿಂಬಾಲಿಸಿದ್ದಾರೆ.

ಗಣೇಶ್ ಈ ಹಿಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಹಾಸನದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ತಾಯಿ ಗೌರಮ್ಮ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಕರೆದುಕೊಂಡು ಬರಲಾಗಿತ್ತು.

ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ ಕೆಲವೇ ಘಂಟೆಗಳಲ್ಲಿ ಗಣೇಶ್​ಗೆ ಹೃದಯಾಘಾತವಾಗಿದೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಗಣೇಶ್ ಮೃತಪಟ್ಟಿದ್ದಾರೆ. ಮೃತ ಗಣೇಶ್​ಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಅಂತ್ಯಕ್ರಿಯೆ ಕೊಣನೂರಿನ ರುದ್ರಭೂಮಿಯಲ್ಲಿ ನೆರವೇರಿದೆ.

ಇದು ಜೀವನ | ಬದುಕಿನ ಬಂಡಿ ಎಳೆಯೋಕೆ ತಾಯಿ ಮಗನ ಹರ ಸಾಹಸ: ವಿಜಯಪುರದಲ್ಲೊಂದು ಮನಕಲಕುವ ಕತೆ

Published On - 10:11 am, Sat, 6 February 21

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us