ತಂದೆಯ ಸಾವಿನ‌ ಮಧ್ಯೆಯೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ

ಗದಗ: ತಂದೆಯ ಸಾವಿನ ಆಘಾತದ ಮಧ್ಯೆಯೂ ಎದೆಗುಂದದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ಹಾಜರಾಗಬೇಕಾದ ಮನಮಿಡಿಯುವ ಘಟನೆ ಗದಗನಲ್ಲಿ ನಡೆದಿದೆ. ಗದಗ ನಗರದ ಈಶ್ವರ ಬಡಾವಣೆ ನಿವಾಸಿ ಅನೂಷ ಎಂದಿನಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸಿದ್ದಳು. ಆದ್ರೆ ಇಂದು ಬೆಿಳಿಗ್ಗೆ ಆಕೆಯ ತಂದೆ ಸುರೇಶ್‌ ಭಜಂತ್ರಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಒಂದೆಡೆ ವರ್ಷವಿಡಿ ಓದಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತೊಂದೆಡೆ ಬರಸಿಡಿಲಿನಂತೆ ಬಂದೆರಗಿದ ತಂದೆಯ ಸಾವು. ಹೀಗಾಗಿ ಏನೂ ತೋಚದೆ ವಿದ್ಯಾರ್ಥಿ ಕಂಗಟ್ಟಿದ್ದಾಳೆ. ಆಗ ಕುಟುಂಬ ಸದಸ್ಯರು ಪರೀಕ್ಷೆ ಬರೆದು […]

ತಂದೆಯ ಸಾವಿನ‌ ಮಧ್ಯೆಯೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​ Edited By: Guru

Updated on: Jul 03, 2020 | 11:09 AM

ಗದಗ: ತಂದೆಯ ಸಾವಿನ ಆಘಾತದ ಮಧ್ಯೆಯೂ ಎದೆಗುಂದದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ಹಾಜರಾಗಬೇಕಾದ ಮನಮಿಡಿಯುವ ಘಟನೆ ಗದಗನಲ್ಲಿ ನಡೆದಿದೆ.

ಗದಗ ನಗರದ ಈಶ್ವರ ಬಡಾವಣೆ ನಿವಾಸಿ ಅನೂಷ ಎಂದಿನಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸಿದ್ದಳು. ಆದ್ರೆ ಇಂದು ಬೆಿಳಿಗ್ಗೆ ಆಕೆಯ ತಂದೆ ಸುರೇಶ್‌ ಭಜಂತ್ರಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಒಂದೆಡೆ ವರ್ಷವಿಡಿ ಓದಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತೊಂದೆಡೆ ಬರಸಿಡಿಲಿನಂತೆ ಬಂದೆರಗಿದ ತಂದೆಯ ಸಾವು.

ಹೀಗಾಗಿ ಏನೂ ತೋಚದೆ ವಿದ್ಯಾರ್ಥಿ ಕಂಗಟ್ಟಿದ್ದಾಳೆ. ಆಗ ಕುಟುಂಬ ಸದಸ್ಯರು ಪರೀಕ್ಷೆ ಬರೆದು ಬರುವವರೆಗೆ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಮೇಲೆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಹೋಗಿದ್ದಾಳೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us