AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಂಗೊ ಮ್ಯಾಡ್ ಌಂಗಲ್ ಌಡ್ ಬ್ಯಾನ್ ಮಾಡಿ ಎಂದರು ಸುಶಾಂತ್ ಅಭಿಮಾನಿಗಳು | Sushant Singh Rajput’s fans want Bingo Mad Angle ad to be banned

ಭಾರಿ ಪ್ರತಿಭಾವಂತ ನಟನಾಗಿದ್ದ ಸುಶಾಂತ್ ಸಿಂಗ್ ರಜಪೂತ ಮರಣಹೊಂದಿ 5 ತಿಂಗಳು ಕಳೆದರೂ ಅವರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ನಿಮಗೆ ಪ್ರತಿದಿನ, ಟಿವಿಗಳಲ್ಲಿ, ರೇಡಿಯೋಗಳಲ್ಲಿ ಪ್ರಸಾರವಾಗುವ ಮತ್ತು ಕೇಳಿಸಿಕೊಳ್ಳುವ ನೂರಾರು ಬ್ರ್ಯಾಂಡ್​ಗಳ ಜಾಹಿರಾತುಗಳು ಗೊತ್ತಲ್ಲ? ಇತ್ತೀಚಿನ ದಿನಗಳಲ್ಲಿ ಜಾಹೀರಾತುಗಳ ಶೈಲಿ ಬದಲಾಗಿದೆ. ಫನ್, ವಿಡಂಬನೆ, ಸೆಲಿಬ್ರಿಟಿಗಳ ಕಾಲೆಳೆಯುವ ಅಂಶಗಳೇ ಈಗಿನ ಜಾಹಿರಾತುಗಳ ಪ್ರಮುಖ ಅಂಶ ಮತ್ತು  ಸೊಬಗು ಕೂಡ ಆಗಿದೆ. ಆದರೆ, ಸೆಲಿಬ್ರಿಟಿ ನಟ-ನಟಿಯರು ಅಥವಾ ಮಾಡೆಲ್​ಗಳನ್ನು ಬಳಸಿ ತಯಾರಾಗುವ ಈ ಜಾಹೀರಾತುಗಳು ಕೆಲವು ಬಾರಿ ವಿವಾದಗಳನ್ನೂ […]

ಬಿಂಗೊ ಮ್ಯಾಡ್ ಌಂಗಲ್ ಌಡ್ ಬ್ಯಾನ್ ಮಾಡಿ ಎಂದರು ಸುಶಾಂತ್ ಅಭಿಮಾನಿಗಳು | Sushant Singh Rajput's fans want Bingo Mad Angle ad to be banned
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 20, 2020 | 5:12 PM

Share

ಭಾರಿ ಪ್ರತಿಭಾವಂತ ನಟನಾಗಿದ್ದ ಸುಶಾಂತ್ ಸಿಂಗ್ ರಜಪೂತ ಮರಣಹೊಂದಿ 5 ತಿಂಗಳು ಕಳೆದರೂ ಅವರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ನಿಮಗೆ ಪ್ರತಿದಿನ, ಟಿವಿಗಳಲ್ಲಿ, ರೇಡಿಯೋಗಳಲ್ಲಿ ಪ್ರಸಾರವಾಗುವ ಮತ್ತು ಕೇಳಿಸಿಕೊಳ್ಳುವ ನೂರಾರು ಬ್ರ್ಯಾಂಡ್​ಗಳ ಜಾಹಿರಾತುಗಳು ಗೊತ್ತಲ್ಲ? ಇತ್ತೀಚಿನ ದಿನಗಳಲ್ಲಿ ಜಾಹೀರಾತುಗಳ ಶೈಲಿ ಬದಲಾಗಿದೆ. ಫನ್, ವಿಡಂಬನೆ, ಸೆಲಿಬ್ರಿಟಿಗಳ ಕಾಲೆಳೆಯುವ ಅಂಶಗಳೇ ಈಗಿನ ಜಾಹಿರಾತುಗಳ ಪ್ರಮುಖ ಅಂಶ ಮತ್ತು  ಸೊಬಗು ಕೂಡ ಆಗಿದೆ. ಆದರೆ, ಸೆಲಿಬ್ರಿಟಿ ನಟ-ನಟಿಯರು ಅಥವಾ ಮಾಡೆಲ್​ಗಳನ್ನು ಬಳಸಿ ತಯಾರಾಗುವ ಈ ಜಾಹೀರಾತುಗಳು ಕೆಲವು ಬಾರಿ ವಿವಾದಗಳನ್ನೂ ಹುಟ್ಟಿಹಾಕುತ್ತವೆ. ಕೆಲವು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪಕ್ಕೆ ಗುರಿಯಾದರೆ ಮತ್ತೆ ಕೆಲವು ಯಾವುದೋ ಒಬ್ಬ ಸೆಲಿಬ್ರಿಟಿಯನ್ನು ಅಪಹಾಸ್ಯ ಮಾಡಿರುವ ಕಾರಣಕ್ಕೆ ಬೆಂಬಲಿಗರಿಂದ ಆಕ್ರೋಶಕ್ಕೊಳಗಾಗುತ್ತವೆ.

ಇತ್ತೀಚಿನ ಬಿಂಗೊ ಮ್ಯಾಡ್ ಌಂಗಲ್ ಚಿಪ್ಸ್​ನ ಜಾಹೀರಾತು ನೀವು ನೋಡಿರಬಹುದು. ಇದರಲ್ಲಿ ಕೆಲವು ಹಿರಿಯರು ಒಂದು ಮನೆಯಲ್ಲಿ ಜೊತೆಯಾಗಿ ಹರಟುತ್ತಿರುವ ಅಥವಾ ಅವರೆಲ್ಲ ಭಾಗಿಯಾಗಿರುವ ಪಾರ್ಟಿಯಲ್ಲಿ ಪ್ರಸಿದ್ಧ ಬಾಲಿವುಡ್ ನಟ ರಣವೀರ್ ಸಿಂಗ್ ಪ್ರತ್ಯಕ್ಷರಾಗುತ್ತಾರೆ. ಅವರನ್ನು ಸುತ್ತುವರಿಯುವ ಕೆಲವು ಅಂಕಲ್ ಮತ್ತು ಆಂಟಿಗಳು, ‘ಬೇಟಾ, ಭವಿಷ್ಯದ ಬಗ್ಗೆ ಏನು ಯೋಚನೆ ಮಾಡಿರುವೆ,’ ಎಂದು ಕೇಳುತ್ತಾರೆ. ಆಗ ರಣವೀರ್ ಒಂದು ಬಿಂಗೋ ಚಿಪ್ಸ್ ಬಾಯಲ್ಲಿ ಹಾಕಿಕೊಂಡು, ಭೌತಶಾಸ್ರಕ್ಕೆ ಸಂಬಂಧಿಸಿದ ಫೊಟಾನ್, ಅಲ್ಗೊರಿದಮ್, ವೈ ಈಸ್ ಈಕ್ವಲ್ ಟು ಎಮ್ಸಿ ಸ್ಕೇರ್, ಪ್ಯಾರಾಡಾಕ್ಸ್ ಮೊದಲಾದ ಹತ್ತಾರು ಪದಗಳನ್ನು ಒಂದೇ ಉಸುರಿನಲ್ಲಿ ಹೇಳಿಬಿಡುತ್ತಾರೆ. ಅದನ್ನು ಕೇಳಿದವರಿಗೆ ಏನೊಂದೂ ಆರ್ಥವಾಗದೆ ಪೆಕುರು ಮುಖ ಮಾಡಿಕೊಂಡು ಅಲ್ಲಿಂದ ನಿರ್ಗಮಿಸುತ್ತಾರೆ.

ಆದರೆ, ರಣವೀರ್ ಅವರ ಈ ಜಾಹೀರಾತು ದಿವಂಗತ ಸುಶಾಂತ್ ಬೆಂಬಲಿಗರನ್ನು ಕೆರಳಿಸಿದೆ. ಫಿಸಿಕ್ಸ್ ಸುಶಾಂತ್ ಅವರ ನೆಚ್ಚಿನ ವಿಷಯವಾಗಿತ್ತು, ಅವರನ್ನು ಅಣಕಿಸಲೆಂದೇ ಈ ಜಾಹೀರಾತನ್ನು ತಯಾರಿಸಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದರಿ ಜಾಹೀರಾತು ಟಿವಿಗಳಲ್ಲಿ ಕಾಣಿಸಿಕೊಳ್ಳದಂತೆ ತಡೆಯಬೇಕು ಅಂತ ಸಂಬಂಧಪಟ್ಟವರನ್ನು ಅವರು ಆಗ್ರಹಿಸಿದ್ದಾರೆ.

Published On - 5:10 pm, Fri, 20 November 20

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?