AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸಾಪ್ ಪುರಾವೆ: NDPS ನ್ಯಾಯಾಲಯವೇ ರಾಗಿಣಿ-ಸಂಜನಾ ಗ್ಯಾಂಗ್​ಗೆ ಸಿಹಿ ಸುದ್ದಿ ನೀಡಿತು! ಏನದು?

ಮುಂಬೈ: ಮಾದಕ ವಸ್ತುಗಳು ಜಪ್ತಿಯಾಗಿದ್ದರೆ, ಸಹ ಆರೋಪಿಗಳೊಂದಿಗೆ ನಡೆಸಿರುವ ವಾಟ್ಸಾಪ್ ಮೆಸೇಜ್​ಗಳನ್ನು ಪುರಾವೆಯಾಗಿ ಪರಿಗಣಿಸಿ, ಆರೋಪಿಯನ್ನು ಸೆರೆಮನೆಗೆ ಕಳಿಸಲು ಆಗುವುದಿಲ್ಲ ಎಂದು ಖುದ್ದು ಎನ್​ಡಿಪಿಎಸ್ (NDPS-Narcotic Drugs and Psychotropic Substances Court) ನ್ಯಾಯಾಲಯವೇ ಹೇಳಿದೆ. ಈ ಸಂಬಂಧ ಗುರುವಾರ ತೀರ್ಪು ನೀಡಿರುವ NDPS Court ನ್ಯಾಯಾಧೀಶ ಎಸ್.ಎಚ್.ಸತ್ಭಾಯ್, ಕಳೆದ ವಾರ ಪೊಲೀಸರು ಬಂಧಿಸಿದ್ದ ಆಸ್ಟ್ರೇಲಿಯಾದ ಆರ್ಕಿಟೆಕ್ಟ್ ಪೌಲ್ ಗೆರಾರ್ಡ್ ಬಾರ್ಟಲ್ಸ್​ಗೆ Paul Bartels ಜಾಮೀನು ಮಂಜೂರು ಮಾಡಿದರು. ಕೋರ್ಟ್ ಆದೇಶ ಕೇಳಿ ಕಿರುನಗೆ ಚೆಲ್ಲಿದೆ ರಾಗಿಣಿ-ಸಂಜನಾ […]

ವಾಟ್ಸಾಪ್ ಪುರಾವೆ: NDPS ನ್ಯಾಯಾಲಯವೇ ರಾಗಿಣಿ-ಸಂಜನಾ ಗ್ಯಾಂಗ್​ಗೆ ಸಿಹಿ ಸುದ್ದಿ ನೀಡಿತು! ಏನದು?
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
|

Updated on: Nov 20, 2020 | 4:47 PM

Share

ಮುಂಬೈ: ಮಾದಕ ವಸ್ತುಗಳು ಜಪ್ತಿಯಾಗಿದ್ದರೆ, ಸಹ ಆರೋಪಿಗಳೊಂದಿಗೆ ನಡೆಸಿರುವ ವಾಟ್ಸಾಪ್ ಮೆಸೇಜ್​ಗಳನ್ನು ಪುರಾವೆಯಾಗಿ ಪರಿಗಣಿಸಿ, ಆರೋಪಿಯನ್ನು ಸೆರೆಮನೆಗೆ ಕಳಿಸಲು ಆಗುವುದಿಲ್ಲ ಎಂದು ಖುದ್ದು ಎನ್​ಡಿಪಿಎಸ್ (NDPS-Narcotic Drugs and Psychotropic Substances Court) ನ್ಯಾಯಾಲಯವೇ ಹೇಳಿದೆ.

ಈ ಸಂಬಂಧ ಗುರುವಾರ ತೀರ್ಪು ನೀಡಿರುವ NDPS Court ನ್ಯಾಯಾಧೀಶ ಎಸ್.ಎಚ್.ಸತ್ಭಾಯ್, ಕಳೆದ ವಾರ ಪೊಲೀಸರು ಬಂಧಿಸಿದ್ದ ಆಸ್ಟ್ರೇಲಿಯಾದ ಆರ್ಕಿಟೆಕ್ಟ್ ಪೌಲ್ ಗೆರಾರ್ಡ್ ಬಾರ್ಟಲ್ಸ್​ಗೆ Paul Bartels ಜಾಮೀನು ಮಂಜೂರು ಮಾಡಿದರು.

ಕೋರ್ಟ್ ಆದೇಶ ಕೇಳಿ ಕಿರುನಗೆ ಚೆಲ್ಲಿದೆ ರಾಗಿಣಿ-ಸಂಜನಾ ಗ್ಯಾಂಗ್​ ಇದನ್ನು ಕೇಳಿ, ಪರಪ್ಪನ ಅಗ್ರಹಾರದಲ್ಲಿರುವ ನಟಿಮಣಿಯರಾದ ರಾಗಿಣಿ-ಸಂಜನಾ ಗ್ಯಾಂಗ್​ಗೆ ಕಿರುನಗೆ ಚೆಲ್ಲಿದೆ. ಯಾವ ಸಿಸಿಬಿಯವರು ತಮ್ಮನ್ನು ಬರೀ ವಾಟ್ಸಾಪ್​ ಮೆಸೇಜ್​ಗಳನ್ನೇ ಆಧರಿಸಿ ತಮ್ಮನ್ನು ಪರಪ್ಪನ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೋ ಅವರಿಗೆ ಈ ಕೋರ್ಟ್​ ಆರ್ಡರ್​​ ತೋರಿಸಿ, ಅದೇ NDPS ನ್ಯಾಯಾಲಯದಲ್ಲಿ ಜಾಮೀನು ಪಡೆಯಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ. ಆದ್ರೆ ಇದರಾಚೆ.. ಬರೀ ವಾಟ್ಸಾಪ್​ ಮೆಸೇಜ್​ಗಳಷ್ಟೇ ಅಲ್ಲ; ಇನ್ನೂ ಇದೆ ನಿಮ್ಮ ‘ಸರಕು’ ಎಂದು ನ್ಯಾಯಾಲಯದೆದುರು ಸಿಸಿಬಿ ಸಾಬೀತುಪಡಿಸಿದರೆ ಅಂತಿಮ ನಗೆ ಸಿಸಿಬಿಯದ್ದೇ ಆಗುತ್ತದೆ.

ಏನಿದು.. ಪೌಲ್ ಗೆರಾರ್ಡ್ ಪ್ರಕರಣ? ಕಳೆದ 8 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಬಾರ್ಟಲ್ಸ್ ಅವರನ್ನು ಮಾದಕ ವಸ್ತುಗಳ ದಾಸ್ತಾನು ಮತ್ತು ಬಳಕೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುಗಳನ್ನು ಜಪ್ತಿ ಮಾಡಲು ಎನ್​ಸಿಬಿ (NCB-Narcotics Control Bureau) ಅಧಿಕಾರಿಗಳು ವಿಫಲರಾಗಿದ್ದರು. ಆದರೆ ವಾಟ್ಸಾಪ್ ಚಾಟ್ನಲ್ಲಿ ಆರೋಪಿಯು ಮತ್ತೊಬ್ಬ ವ್ಯಕ್ತಿಯೊಂದಿಗೆ ಡ್ರಗ್ಸ್ ಬಗ್ಗೆ ಚರ್ಚಿಸಿದ್ದು ಪತ್ತೆಯಾಗಿದೆ ಎಂದು ಹೇಳಿದ್ದರು.

‘ಆರೋಪಿಯು ಡ್ರಗ್ಸ್ ಪೆಡ್ಲರ್/ಸರಬರಾಜುದಾರನ ರೀತಿಯಲ್ಲಿ ಕೆಲವರೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಎಂದು ನೀವು ಈ ಮೆಸೇಜ್ಗಳನ್ನು ಆಧರಿಸಿ ಹೇಳುತ್ತಿದ್ದೀರಿ. ಆದರೆ ಈ ಹಂತದಲ್ಲಿ ಕೇವಲ ಮೆಸೇಜ್ಗಳನ್ನು ಆಧರಿಸಿ, ಆರೋಪಿಯನ್ನು ಡ್ರಗ್ಸ್ ಪೆಡ್ಲರ್/ಸರಬರಾಜುದಾರ ಎನ್ನಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿಯಾದರೂ ಎನ್ಸಿಬಿ ತನ್ನ ವಾದಕ್ಕೆ ಪೂರಕವಾದ ವಸ್ತುಗಳನ್ನು ಜಪ್ತಿ ಮಾಡಲು ಸಾಧ್ಯವಾದರೆ ಪ್ರಕರಣ ಮತ್ತೊಂದು ತಿರುವು ಪಡೆಯುತ್ತದೆ‘ ಎಂದು ನ್ಯಾಯಾಧೀಶರು ಹೇಳಿದರು.

‘ಆರೋಪ ದೃಢಪಡಿಸುವ ಗಟ್ಟಿಯಾದ ಪುರಾವೆಗಳು ಇಲ್ಲದಿದ್ದಾಗ, ಆರೋಪಿಯಿಂದ ಯಾವುದೇ ಆಕ್ಷೇಪಾರ್ಹ ವಸ್ತುವನ್ನು ಜಪ್ತಿ ಮಾಡಿಲ್ಲ ಅಥವಾ ಆರೋಪಿಯ ಬಳಿ ಯಾವುದೇ ಆಕ್ಷೇಪಾರ್ಹ ವಸ್ತು ಇರಲಿಲ್ಲ ಎಂಬ ಸಂದರ್ಭದಲ್ಲಿ, ಸಹ ಆರೋಪಿಯ ಹೇಳಿಕೆಗಳು ಮತ್ತು ವಾಟ್ಸಾಪ್ ಮೆಸೇಜ್ಗಳನ್ನು ಆಧಾರವಾಗಿ ಪರಿಗಣಿಸಿ ಯಾರೊಬ್ಬರನ್ನೂ ಡ್ರಗ್ಸ್ ಪೆಡ್ಲರ್/ಸರಬರಾಜುದಾರ ಎಂದು ಪರಿಗಣಿಸಲು ಆಗುವುದಿಲ್ಲ. ವಾಟ್ಸಾಪ್ ಮೆಸೇಜ್ಗಳನ್ನು ಆಧಾರವಾಗಿಟ್ಟುಕೊಂಡು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಜಾಮೀನು ಪಡೆಯಲು ಬಾರ್ಟಲ್ಸ್ ₹ 1 ಲಕ್ಷ ವೈಯಕ್ತಿಕ ಬಾಂಡ್ ನೀಡಬೇಕು, ಪಾಸ್ಪೋರ್ಟ್ ಮರಳಿಸಬೇಕು ಮತ್ತು ಮುಂಬೈ ಬಿಟ್ಟು ತೆರಳಬಾರದು ಎಂಬ ಇದೇ ವೇಳೆ ನ್ಯಾಯಾಲಯವು ಷರತ್ತುಗಳನ್ನು ವಿಧಿಸಿದೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್