
ದೇವನಹಳ್ಳಿ: ಕೊರೊನಾ ಸೋಂಕಿತನನ್ನು ಶಿಫ್ಟ್ ಮಾಡದೆ ನಿರ್ಲಕ್ಷ್ಯವಹಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರಿನಲ್ಲಿ ನಡೆದಿದೆ.
ವ್ಯಕ್ತಿಗೆ ಕೊರೊನಾ ದೃಢಪಟ್ಟರೂ ಆರೋಗ್ಯ ಅಧಿಕಾರಿಗಳು ಆತನನ್ನು ಆಸ್ಪತ್ರೆಗೆ ಶಿಫ್ಟ್ ಮಾಡದೇ 24 ಗಂಟೆಗಳ ಕಾಲ ಮನೆಯಲ್ಲೇ ಇರಿಸಿದ್ದಾರೆ. ಸೋಂಕಿತನನ್ನ ಶಿಫ್ಟ್ ಮಾಡದಿದ್ದಕ್ಕೆ ತಹಶೀಲ್ದಾರ್ ರಘುಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದು
ಸೋಂಕಿತನ ಮನೆ ಬಳಿಯೇ ಸ್ಥಳೀಯ ಪಿಡಿಒ ಮತ್ತು ವೈದ್ಯಾಧಿಕಾರಿಗಳಿಗೆ ಕರೆಸಿ ಸ್ಥಳೀಯರ ಮುಂದೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ಸೋಂಕಿತನನ್ನ ಶಿಫ್ಟ್ ಮಾಡಿಲ್ಲ. ತಕ್ಷಣ ಆತನನ್ನು ಆಸ್ವತ್ರೆಗೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿದ್ದಾರೆ.
Published On - 1:33 pm, Tue, 14 July 20