ದೇಗುಲದಲ್ಲಿ ಕಳ್ಳತನ: ಶಬ್ದ ಕೇಳಿ ಅರ್ಚಕರು ಕೂಗಿಕೊಂಡ್ರೂ ನಡೆದೇ ಹೋಯ್ತು ದುಷ್ಕೃತ್ಯ, ಎಲ್ಲಿ?

ಉತ್ತರ ಕನ್ನಡ: ದೇವಸ್ಥಾನದ ಬೀಗ ಮುರಿದು, ಕಳ್ಳತನ ಮಾಡಿರುವ ಘಟನೆ  ಜಿಲ್ಲೆಯ ಮೂರೂರಿನ ಕೋಣಾರೆ ವಿಷ್ಣು ಮೂರ್ತಿ ದೇವಾಲಯದಲ್ಲಿ ನಡೆದಿದೆ. ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನ ಕೋಣಾರೆ ವಿಷ್ಣು ಮೂರ್ತಿ ದೇಗುಲದ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಹತ್ತು ಲಕ್ಷ  ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ದೇವರ ಕವಚವನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಶಬ್ದ ಕೇಳಿದ ಕೂಡಲೆ ದೇವಸ್ಥಾನದ ಅರ್ಚಕರು ಕೂಗಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, […]

ದೇಗುಲದಲ್ಲಿ ಕಳ್ಳತನ: ಶಬ್ದ ಕೇಳಿ ಅರ್ಚಕರು ಕೂಗಿಕೊಂಡ್ರೂ ನಡೆದೇ ಹೋಯ್ತು ದುಷ್ಕೃತ್ಯ, ಎಲ್ಲಿ?

Updated on: Aug 16, 2020 | 12:28 PM

ಉತ್ತರ ಕನ್ನಡ: ದೇವಸ್ಥಾನದ ಬೀಗ ಮುರಿದು, ಕಳ್ಳತನ ಮಾಡಿರುವ ಘಟನೆ  ಜಿಲ್ಲೆಯ ಮೂರೂರಿನ ಕೋಣಾರೆ ವಿಷ್ಣು ಮೂರ್ತಿ ದೇವಾಲಯದಲ್ಲಿ ನಡೆದಿದೆ.

ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನ ಕೋಣಾರೆ ವಿಷ್ಣು ಮೂರ್ತಿ ದೇಗುಲದ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಹತ್ತು ಲಕ್ಷ  ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ದೇವರ ಕವಚವನ್ನು ಕದ್ದು ಪರಾರಿಯಾಗಿದ್ದಾರೆ.

ಕಳ್ಳರ ಶಬ್ದ ಕೇಳಿದ ಕೂಡಲೆ ದೇವಸ್ಥಾನದ ಅರ್ಚಕರು ಕೂಗಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ, ತನಿಖೆ ಚುರುಕುಗೊಳಿಸಿದ್ದಾರೆ.

Published On - 12:26 pm, Sun, 16 August 20