AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ. ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ. ಸಿಸಿಟಿವಿ […]

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು
KUSHAL V
|

Updated on: Aug 16, 2020 | 12:51 PM

Share

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ.

ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯೊಂದರಲ್ಲಿ ಕಿಡಿಗೇಡಿಗಳು ಕುಕೃತ್ಯದ ವಿಡಿಯೋ ಮಾಡ್ತಿರುವುದು ಪೊಲೀಸರಿಗೆ ಕಂಡು ಬಂತು. ಹಾಗಾಗಿ, ಮೊದಲು ಅರೇಸ್ಟ್ ಆದ ಆರೋಪಿಗಳ‌ ಮೊಬೈಲ್​ನಲ್ಲಿದ್ದ ವಿಡಿಯೋಗಳ ಆಧಾರದ ಮೇಲೆ ಮತ್ತಷ್ಟು ಆರೋಪಿಗಳು ಪತ್ತೆಯಾಗಿದ್ದಾರೆ. ಬಂಧಿಸಿದ ಆರೋಪಿಗಳನ್ನ ಅವರ ವಿಡಿಯೋ ತೋರಿಸಿ ಅವನ್ಯಾರು? ಇವನ್ಯಾರು? ಅಂತಾ ಪ್ರಶ್ನಿಸಿ ಇತರರನ್ನ ಖಾಕಿ ಅರೆಸ್ಟ್​ ಮಾಡಿದ್ದಾರೆ. ಮತ್ತೊಂದೆಡೆ ಮೊಬೈಲ್ ಟವರ್ ಡಂಪ್ ಕೂಡ ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.

ಪೊಲೀಸರಿಗೆ ಸಾಕ್ಷ್ಯ ಸಿಗಬಾರದೆಂದು ಸಿಸಿಟಿವಿಗಳ ನಾಶ ಮಾಡಿ ಕೃತ್ಯ ಎಸಗಿದ್ದ ಪುಂಡರು ಏರಿಯಾದ ಸ್ಟ್ರೀಟ್ ಲೈಟ್ ಗಳನ್ನು ಸಹ ಬಿಡದೆ ಪುಡಿಗಟ್ಟಿದ್ದರು. ಆದರೆ, ತಮ್ಮ ಪುಂಡಾಟಿಕೆಯನ್ನ ಮೊಬೈಲ್​ನಲ್ಲಿ ತಾವೇ ಸೆರೆ ಹಿಡಿದು ಇದೀಗ ಲಾಕ್​ ಆಗಿದ್ದಾರೆ.

ಗೃಹ ಇಲಾಖೆ, ಪೊಲೀಸರಿಗೆ ಮತ್ತೊಂದು ತಲೆನೋವು ಶುರು ಈ ನಡುವೆ ಗಲಭೆಯ ದಳ್ಳುರಿ ಕಡಿಮೆಯಾಗಿದ್ರೂ ಅದರ ಕಿಚ್ಚು ಬೂದಿ ಮುಚ್ಚಿದ ಕೆಂಡದಂತೆ ಪ್ರಚಲಿತವಾಗಿದೆ. ಇದರಿಂದ ಗೃಹ ಇಲಾಖೆ ಹಾಗೂ ಪೊಲೀಸರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಗಲಭೆ ಬಳಿಕವೂ ಆರೋಪಿ ನವೀನನ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಎಂದು ತಿಳಿದುಬಂದಿದೆ. ನವೀನ್​ನ ಪೋಸ್ಟ್ ಆಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಮರ ಪ್ರಾರಂಭವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟ್​ಗಳು ಈಗಲೂ ಹರಿದಾಡ್ತಿವೆ. ಈ ಕಾರಣಕ್ಕೆ ಗೃಹ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್