AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ. ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ. ಸಿಸಿಟಿವಿ […]

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು
KUSHAL V
|

Updated on: Aug 16, 2020 | 12:51 PM

Share

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ.

ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯೊಂದರಲ್ಲಿ ಕಿಡಿಗೇಡಿಗಳು ಕುಕೃತ್ಯದ ವಿಡಿಯೋ ಮಾಡ್ತಿರುವುದು ಪೊಲೀಸರಿಗೆ ಕಂಡು ಬಂತು. ಹಾಗಾಗಿ, ಮೊದಲು ಅರೇಸ್ಟ್ ಆದ ಆರೋಪಿಗಳ‌ ಮೊಬೈಲ್​ನಲ್ಲಿದ್ದ ವಿಡಿಯೋಗಳ ಆಧಾರದ ಮೇಲೆ ಮತ್ತಷ್ಟು ಆರೋಪಿಗಳು ಪತ್ತೆಯಾಗಿದ್ದಾರೆ. ಬಂಧಿಸಿದ ಆರೋಪಿಗಳನ್ನ ಅವರ ವಿಡಿಯೋ ತೋರಿಸಿ ಅವನ್ಯಾರು? ಇವನ್ಯಾರು? ಅಂತಾ ಪ್ರಶ್ನಿಸಿ ಇತರರನ್ನ ಖಾಕಿ ಅರೆಸ್ಟ್​ ಮಾಡಿದ್ದಾರೆ. ಮತ್ತೊಂದೆಡೆ ಮೊಬೈಲ್ ಟವರ್ ಡಂಪ್ ಕೂಡ ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.

ಪೊಲೀಸರಿಗೆ ಸಾಕ್ಷ್ಯ ಸಿಗಬಾರದೆಂದು ಸಿಸಿಟಿವಿಗಳ ನಾಶ ಮಾಡಿ ಕೃತ್ಯ ಎಸಗಿದ್ದ ಪುಂಡರು ಏರಿಯಾದ ಸ್ಟ್ರೀಟ್ ಲೈಟ್ ಗಳನ್ನು ಸಹ ಬಿಡದೆ ಪುಡಿಗಟ್ಟಿದ್ದರು. ಆದರೆ, ತಮ್ಮ ಪುಂಡಾಟಿಕೆಯನ್ನ ಮೊಬೈಲ್​ನಲ್ಲಿ ತಾವೇ ಸೆರೆ ಹಿಡಿದು ಇದೀಗ ಲಾಕ್​ ಆಗಿದ್ದಾರೆ.

ಗೃಹ ಇಲಾಖೆ, ಪೊಲೀಸರಿಗೆ ಮತ್ತೊಂದು ತಲೆನೋವು ಶುರು ಈ ನಡುವೆ ಗಲಭೆಯ ದಳ್ಳುರಿ ಕಡಿಮೆಯಾಗಿದ್ರೂ ಅದರ ಕಿಚ್ಚು ಬೂದಿ ಮುಚ್ಚಿದ ಕೆಂಡದಂತೆ ಪ್ರಚಲಿತವಾಗಿದೆ. ಇದರಿಂದ ಗೃಹ ಇಲಾಖೆ ಹಾಗೂ ಪೊಲೀಸರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಗಲಭೆ ಬಳಿಕವೂ ಆರೋಪಿ ನವೀನನ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಎಂದು ತಿಳಿದುಬಂದಿದೆ. ನವೀನ್​ನ ಪೋಸ್ಟ್ ಆಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಮರ ಪ್ರಾರಂಭವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟ್​ಗಳು ಈಗಲೂ ಹರಿದಾಡ್ತಿವೆ. ಈ ಕಾರಣಕ್ಕೆ ಗೃಹ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ