AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ. ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ. ಸಿಸಿಟಿವಿ […]

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು
KUSHAL V
|

Updated on: Aug 16, 2020 | 12:51 PM

Share

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ.

ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯೊಂದರಲ್ಲಿ ಕಿಡಿಗೇಡಿಗಳು ಕುಕೃತ್ಯದ ವಿಡಿಯೋ ಮಾಡ್ತಿರುವುದು ಪೊಲೀಸರಿಗೆ ಕಂಡು ಬಂತು. ಹಾಗಾಗಿ, ಮೊದಲು ಅರೇಸ್ಟ್ ಆದ ಆರೋಪಿಗಳ‌ ಮೊಬೈಲ್​ನಲ್ಲಿದ್ದ ವಿಡಿಯೋಗಳ ಆಧಾರದ ಮೇಲೆ ಮತ್ತಷ್ಟು ಆರೋಪಿಗಳು ಪತ್ತೆಯಾಗಿದ್ದಾರೆ. ಬಂಧಿಸಿದ ಆರೋಪಿಗಳನ್ನ ಅವರ ವಿಡಿಯೋ ತೋರಿಸಿ ಅವನ್ಯಾರು? ಇವನ್ಯಾರು? ಅಂತಾ ಪ್ರಶ್ನಿಸಿ ಇತರರನ್ನ ಖಾಕಿ ಅರೆಸ್ಟ್​ ಮಾಡಿದ್ದಾರೆ. ಮತ್ತೊಂದೆಡೆ ಮೊಬೈಲ್ ಟವರ್ ಡಂಪ್ ಕೂಡ ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.

ಪೊಲೀಸರಿಗೆ ಸಾಕ್ಷ್ಯ ಸಿಗಬಾರದೆಂದು ಸಿಸಿಟಿವಿಗಳ ನಾಶ ಮಾಡಿ ಕೃತ್ಯ ಎಸಗಿದ್ದ ಪುಂಡರು ಏರಿಯಾದ ಸ್ಟ್ರೀಟ್ ಲೈಟ್ ಗಳನ್ನು ಸಹ ಬಿಡದೆ ಪುಡಿಗಟ್ಟಿದ್ದರು. ಆದರೆ, ತಮ್ಮ ಪುಂಡಾಟಿಕೆಯನ್ನ ಮೊಬೈಲ್​ನಲ್ಲಿ ತಾವೇ ಸೆರೆ ಹಿಡಿದು ಇದೀಗ ಲಾಕ್​ ಆಗಿದ್ದಾರೆ.

ಗೃಹ ಇಲಾಖೆ, ಪೊಲೀಸರಿಗೆ ಮತ್ತೊಂದು ತಲೆನೋವು ಶುರು ಈ ನಡುವೆ ಗಲಭೆಯ ದಳ್ಳುರಿ ಕಡಿಮೆಯಾಗಿದ್ರೂ ಅದರ ಕಿಚ್ಚು ಬೂದಿ ಮುಚ್ಚಿದ ಕೆಂಡದಂತೆ ಪ್ರಚಲಿತವಾಗಿದೆ. ಇದರಿಂದ ಗೃಹ ಇಲಾಖೆ ಹಾಗೂ ಪೊಲೀಸರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಗಲಭೆ ಬಳಿಕವೂ ಆರೋಪಿ ನವೀನನ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಎಂದು ತಿಳಿದುಬಂದಿದೆ. ನವೀನ್​ನ ಪೋಸ್ಟ್ ಆಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಮರ ಪ್ರಾರಂಭವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟ್​ಗಳು ಈಗಲೂ ಹರಿದಾಡ್ತಿವೆ. ಈ ಕಾರಣಕ್ಕೆ ಗೃಹ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು