AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ. ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ. ಸಿಸಿಟಿವಿ […]

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು
KUSHAL V
|

Updated on: Aug 16, 2020 | 12:51 PM

Share

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ.

ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯೊಂದರಲ್ಲಿ ಕಿಡಿಗೇಡಿಗಳು ಕುಕೃತ್ಯದ ವಿಡಿಯೋ ಮಾಡ್ತಿರುವುದು ಪೊಲೀಸರಿಗೆ ಕಂಡು ಬಂತು. ಹಾಗಾಗಿ, ಮೊದಲು ಅರೇಸ್ಟ್ ಆದ ಆರೋಪಿಗಳ‌ ಮೊಬೈಲ್​ನಲ್ಲಿದ್ದ ವಿಡಿಯೋಗಳ ಆಧಾರದ ಮೇಲೆ ಮತ್ತಷ್ಟು ಆರೋಪಿಗಳು ಪತ್ತೆಯಾಗಿದ್ದಾರೆ. ಬಂಧಿಸಿದ ಆರೋಪಿಗಳನ್ನ ಅವರ ವಿಡಿಯೋ ತೋರಿಸಿ ಅವನ್ಯಾರು? ಇವನ್ಯಾರು? ಅಂತಾ ಪ್ರಶ್ನಿಸಿ ಇತರರನ್ನ ಖಾಕಿ ಅರೆಸ್ಟ್​ ಮಾಡಿದ್ದಾರೆ. ಮತ್ತೊಂದೆಡೆ ಮೊಬೈಲ್ ಟವರ್ ಡಂಪ್ ಕೂಡ ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.

ಪೊಲೀಸರಿಗೆ ಸಾಕ್ಷ್ಯ ಸಿಗಬಾರದೆಂದು ಸಿಸಿಟಿವಿಗಳ ನಾಶ ಮಾಡಿ ಕೃತ್ಯ ಎಸಗಿದ್ದ ಪುಂಡರು ಏರಿಯಾದ ಸ್ಟ್ರೀಟ್ ಲೈಟ್ ಗಳನ್ನು ಸಹ ಬಿಡದೆ ಪುಡಿಗಟ್ಟಿದ್ದರು. ಆದರೆ, ತಮ್ಮ ಪುಂಡಾಟಿಕೆಯನ್ನ ಮೊಬೈಲ್​ನಲ್ಲಿ ತಾವೇ ಸೆರೆ ಹಿಡಿದು ಇದೀಗ ಲಾಕ್​ ಆಗಿದ್ದಾರೆ.

ಗೃಹ ಇಲಾಖೆ, ಪೊಲೀಸರಿಗೆ ಮತ್ತೊಂದು ತಲೆನೋವು ಶುರು ಈ ನಡುವೆ ಗಲಭೆಯ ದಳ್ಳುರಿ ಕಡಿಮೆಯಾಗಿದ್ರೂ ಅದರ ಕಿಚ್ಚು ಬೂದಿ ಮುಚ್ಚಿದ ಕೆಂಡದಂತೆ ಪ್ರಚಲಿತವಾಗಿದೆ. ಇದರಿಂದ ಗೃಹ ಇಲಾಖೆ ಹಾಗೂ ಪೊಲೀಸರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಗಲಭೆ ಬಳಿಕವೂ ಆರೋಪಿ ನವೀನನ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಎಂದು ತಿಳಿದುಬಂದಿದೆ. ನವೀನ್​ನ ಪೋಸ್ಟ್ ಆಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಮರ ಪ್ರಾರಂಭವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟ್​ಗಳು ಈಗಲೂ ಹರಿದಾಡ್ತಿವೆ. ಈ ಕಾರಣಕ್ಕೆ ಗೃಹ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ