
ಬೆಂಗಳೂರು:ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವಂತಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎಂದಿದ್ದಾರೆ.
ಇದು ಮಾನವ ಕುಲಕ್ಕೆ ನಡೆದ ಅಪಮಾನಕರ ಘಟನೆ ಎಂದಿರುವ ಈಶ್ವರಪ್ಪ, ಇಂಥವರ ಸೊಕ್ಕು ಮುರಿಯಲು ಎಲ್ಲ ಪಕ್ಷಗಳು ಸಹಕರಿಸಬೇಕು. ಇವರು ಕೇವಲ ಮತಾಂಧರಷ್ಟೆ ಅಲ್ಲದೆ ದೇಶದ್ರೋಹಿಗಳು ಕೂಡ ಎಂದಿದ್ದಾರೆ. ಜೊತೆಗೆ ಈ ಕೃತ್ಯ ಯಾವುದೋ ಶಕ್ತಿ ಅಥವಾ ವ್ಯಕ್ತಿಗಳ ಕುಮ್ಮಕ್ಕಿನಿಂದ ನಡೆದಿದೆ. ಇಂಥವರನ್ನು ಮಟ್ಟಹಾಕುವುದು ರಾಜ್ಯ ಸರ್ಕಾರಕ್ಕೆ ಗೊತ್ತಿದೆ ಎಂದು ಕೆ.ಎಸ್ ಈಶ್ವರಪ್ಪ ಕೃತ್ಯ ನಡೆಸಿದ ಕಿಡಿಗೇಡಿಗಳ ವಿರುದ್ಧ ಕೆಂಡಕಾರಿದ್ದಾರೆ.