ಮತಾಂಧರಷ್ಟೆ ಅಲ್ಲ, ಇವರು ದೇಶದ್ರೋಹಿಗಳೂ ಕೂಡ: KS ಈಶ್ವರಪ್ಪ

ಬೆಂಗಳೂರು:ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವಂತಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎಂದಿದ್ದಾರೆ. ಇದು ಮಾನವ ಕುಲಕ್ಕೆ ನಡೆದ ಅಪಮಾನಕರ ಘಟನೆ ಎಂದಿರುವ ಈಶ್ವರಪ್ಪ, ಇಂಥವರ ಸೊಕ್ಕು ಮುರಿಯಲು ಎಲ್ಲ ಪಕ್ಷಗಳು ಸಹಕರಿಸಬೇಕು. ಇವರು ಕೇವಲ ಮತಾಂಧರಷ್ಟೆ ಅಲ್ಲದೆ ದೇಶದ್ರೋಹಿಗಳು ಕೂಡ ಎಂದಿದ್ದಾರೆ. ಜೊತೆಗೆ ಈ ಕೃತ್ಯ ಯಾವುದೋ ಶಕ್ತಿ ಅಥವಾ ವ್ಯಕ್ತಿಗಳ ಕುಮ್ಮಕ್ಕಿನಿಂದ ನಡೆದಿದೆ. ಇಂಥವರನ್ನು ಮಟ್ಟಹಾಕುವುದು ರಾಜ್ಯ ಸರ್ಕಾರಕ್ಕೆ […]

ಮತಾಂಧರಷ್ಟೆ ಅಲ್ಲ, ಇವರು ದೇಶದ್ರೋಹಿಗಳೂ ಕೂಡ: KS ಈಶ್ವರಪ್ಪ
ಕೆ.ಎಸ್ .ಈಶ್ವರಪ್ಪ
ಸಾಧು ಶ್ರೀನಾಥ್​

Updated on: Aug 12, 2020 | 12:33 PM

ಬೆಂಗಳೂರು:ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವಂತಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎಂದಿದ್ದಾರೆ.

ಇದು ಮಾನವ ಕುಲಕ್ಕೆ ನಡೆದ ಅಪಮಾನಕರ ಘಟನೆ ಎಂದಿರುವ ಈಶ್ವರಪ್ಪ, ಇಂಥವರ ಸೊಕ್ಕು ಮುರಿಯಲು ಎಲ್ಲ ಪಕ್ಷಗಳು ಸಹಕರಿಸಬೇಕು. ಇವರು ಕೇವಲ ಮತಾಂಧರಷ್ಟೆ ಅಲ್ಲದೆ ದೇಶದ್ರೋಹಿಗಳು ಕೂಡ ಎಂದಿದ್ದಾರೆ. ಜೊತೆಗೆ ಈ ಕೃತ್ಯ ಯಾವುದೋ ಶಕ್ತಿ ಅಥವಾ ವ್ಯಕ್ತಿಗಳ ಕುಮ್ಮಕ್ಕಿನಿಂದ ನಡೆದಿದೆ. ಇಂಥವರನ್ನು ಮಟ್ಟಹಾಕುವುದು ರಾಜ್ಯ ಸರ್ಕಾರಕ್ಕೆ ಗೊತ್ತಿದೆ ಎಂದು ಕೆ.ಎಸ್ ಈಶ್ವರಪ್ಪ ಕೃತ್ಯ ನಡೆಸಿದ ಕಿಡಿಗೇಡಿಗಳ ವಿರುದ್ಧ ಕೆಂಡಕಾರಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us