AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗತಕಾಲದ ಇತಿಹಾಸದ ವಿಜಯನಗರ ಸಾಮ್ರಾಜ್ಯದಲ್ಲಿ ಹಂಪಿ ಉತ್ಸವ, ತುಂಗಭದ್ರೆಗೆ ದೀಪಾರತಿ

ಬಳ್ಳಾರಿ: ಹಂಪಿ ಉತ್ಸವ ಅಂದ್ರೆನೆ ಹಾಗೇ. ಅಲ್ಲಿ ಗತಕಾಲದ ವೈಭವವಿರುತ್ತೆ. ಇತಿಹಾಸ ಮರುಕಳಿಸುತ್ತೆ. ಕಲಾತಂಡಗಳ ಕಲರವ ಮೇಳೈಸುತ್ತೆ. ಸದ್ಯ ಹಂಪಿಯಲ್ಲಿ ತುಂಗಭದ್ರೆಗೆ ನಡೆದ ದೀಪಾರತಿ ಪೂಜೆ ಎಲ್ಲರ ಕಣ್ಮನ ಸೆಳೆದಿತ್ತು. ಕತ್ತಲಲ್ಲೂ ದೀಪಾರತಿಯ ಮಂದ ಬೆಳಕು. ಪ್ರಶಾಂತವಾಗಿ ಹರಿಯೋ ನೀರು. ಗಂಟೆ ನಾದದ ಸದ್ದು. ಭಕ್ತಿಯ ಜೊತೆ ಸಂಭ್ರಮದ ಹೊನಲು. ವಿಶ್ವವಿಖ್ಯಾತ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ನಡೆದ ತುಂಗಭದ್ರಾ ಆರತಿ ಮಹೋತ್ಸವ ಎಲ್ಲರ ಮೈ ರೋಮಾಂಚನ ಮಾಡಿದೆ. ಬಳ್ಳಾರಿ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯ ತುಂಗಭದ್ರಾ […]

ಗತಕಾಲದ ಇತಿಹಾಸದ ವಿಜಯನಗರ ಸಾಮ್ರಾಜ್ಯದಲ್ಲಿ ಹಂಪಿ ಉತ್ಸವ, ತುಂಗಭದ್ರೆಗೆ ದೀಪಾರತಿ
ಸಾಧು ಶ್ರೀನಾಥ್​
|

Updated on: Jan 05, 2020 | 8:09 AM

Share

ಬಳ್ಳಾರಿ: ಹಂಪಿ ಉತ್ಸವ ಅಂದ್ರೆನೆ ಹಾಗೇ. ಅಲ್ಲಿ ಗತಕಾಲದ ವೈಭವವಿರುತ್ತೆ. ಇತಿಹಾಸ ಮರುಕಳಿಸುತ್ತೆ. ಕಲಾತಂಡಗಳ ಕಲರವ ಮೇಳೈಸುತ್ತೆ. ಸದ್ಯ ಹಂಪಿಯಲ್ಲಿ ತುಂಗಭದ್ರೆಗೆ ನಡೆದ ದೀಪಾರತಿ ಪೂಜೆ ಎಲ್ಲರ ಕಣ್ಮನ ಸೆಳೆದಿತ್ತು.

ಕತ್ತಲಲ್ಲೂ ದೀಪಾರತಿಯ ಮಂದ ಬೆಳಕು. ಪ್ರಶಾಂತವಾಗಿ ಹರಿಯೋ ನೀರು. ಗಂಟೆ ನಾದದ ಸದ್ದು. ಭಕ್ತಿಯ ಜೊತೆ ಸಂಭ್ರಮದ ಹೊನಲು. ವಿಶ್ವವಿಖ್ಯಾತ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ನಡೆದ ತುಂಗಭದ್ರಾ ಆರತಿ ಮಹೋತ್ಸವ ಎಲ್ಲರ ಮೈ ರೋಮಾಂಚನ ಮಾಡಿದೆ.

ಬಳ್ಳಾರಿ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯ ತುಂಗಭದ್ರಾ ನದಿಯಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಲಾಯ್ತು. ಮಂಗಳ ವಾದ್ಯಗಳ ಮಧ್ಯೆ ನದಿಗೆ ಬಾಗಿನ ಅರ್ಪಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಸಂಸದ ವೈ. ದೇವೇಂದ್ರಪ್ಪ, ಶಾಸಕ ಆನಂದ್ ಸಿಂಗ್, ಡಿಸಿ ಎಸ್.ಎಸ್ ನಕುಲ್, ಎಸ್​ಪಿ ಸಿಕೆ ಬಾಬಾ ಸೇರಿದಂತೆ ಹಲವು ಅಧಿಕಾರಿಗಳು ಸಹ ಭಾಗವಹಿಸಿದ್ರು.

ತುಂಗಭದ್ರಾ ಆರತಿ ಮಹೋತ್ಸವ ನಡೆಸಿದ ಬಳಿಕ ಪ್ರತಿ ವರ್ಷ ಜಲಾಶಯ ಭರ್ತಿಯಾಗ್ತಿದೆ ಅನ್ನೋ ನಂಬಿಕೆ ಇಲ್ಲಿನ ರೈತರದ್ದು.. ಇನ್ನು ಇದೇ ವೇಳೆ ಮಾತ್ನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತುಂಗಭದ್ರಾ ಆರತಿ ಮಹೋತ್ಸವವನ್ನ ವೈಭವದಿಂದ ಆಚರಿಸಲಾಗಿದೆ ಅಂದ್ರು.

ಇನ್ನು ನದಿ, ಕೆರೆ, ಜಲಾಶಯಗಳು ತುಂಬಿದಾಗ ಗಂಗಾಮಾತೆಗೆ ಪೂಜಿಸುವುದು ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಕ್ಷೇತ್ರವಾದ ಹಂಪಿಯಲ್ಲಿ ಆರತಿ ಬೆಳಗಿ, ನದಿಗೆ ಬಾಗಿನ ಅರ್ಪಿಸಲಾಯ್ತು.. ಹಾಗೇ ನದಿಯಲ್ಲಿ ದೀಪ ಹಚ್ಚಿ ಬಿಡೋದ್ರ ಜತೆಗೆ ನದಿಯ ಸುತ್ತಲೂ ದೀಪಗಳನ್ನ ಹಚ್ಚಲಾಗಿತ್ತು. ತುಂಗಭದ್ರಾ ಆರತಿ ಮಹೋತ್ಸವದ ಬಳಿಕ ಬಾನಾಂಗಣದಲ್ಲಿ ಪಟಾಕಿಗಳ ಸದ್ದಿನ ಜೊತೆ ಚಿತ್ತಾರ ಮೂಡಿತ್ತು.

ಗತಕಾಲದ ಇತಿಹಾಸ ಹೊಂದಿರೋ ವಿಜಯನಗರ ಸಾಮ್ರಾಜ್ಯದ ಹಂಪಿ ಉತ್ಸವ ಆಚರಣೆಗೂ ಮುನ್ನ ಈ ಆರತಿ ಮಹೋತ್ಸವ ನಡೆಸಲಾಗುತ್ತೆ. ಸದ್ಯ ಈ ವರ್ಷದ ಆರಂಭದಲ್ಲೇ ದೀಪಾರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ