AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗತಕಾಲದ ಇತಿಹಾಸದ ವಿಜಯನಗರ ಸಾಮ್ರಾಜ್ಯದಲ್ಲಿ ಹಂಪಿ ಉತ್ಸವ, ತುಂಗಭದ್ರೆಗೆ ದೀಪಾರತಿ

ಬಳ್ಳಾರಿ: ಹಂಪಿ ಉತ್ಸವ ಅಂದ್ರೆನೆ ಹಾಗೇ. ಅಲ್ಲಿ ಗತಕಾಲದ ವೈಭವವಿರುತ್ತೆ. ಇತಿಹಾಸ ಮರುಕಳಿಸುತ್ತೆ. ಕಲಾತಂಡಗಳ ಕಲರವ ಮೇಳೈಸುತ್ತೆ. ಸದ್ಯ ಹಂಪಿಯಲ್ಲಿ ತುಂಗಭದ್ರೆಗೆ ನಡೆದ ದೀಪಾರತಿ ಪೂಜೆ ಎಲ್ಲರ ಕಣ್ಮನ ಸೆಳೆದಿತ್ತು. ಕತ್ತಲಲ್ಲೂ ದೀಪಾರತಿಯ ಮಂದ ಬೆಳಕು. ಪ್ರಶಾಂತವಾಗಿ ಹರಿಯೋ ನೀರು. ಗಂಟೆ ನಾದದ ಸದ್ದು. ಭಕ್ತಿಯ ಜೊತೆ ಸಂಭ್ರಮದ ಹೊನಲು. ವಿಶ್ವವಿಖ್ಯಾತ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ನಡೆದ ತುಂಗಭದ್ರಾ ಆರತಿ ಮಹೋತ್ಸವ ಎಲ್ಲರ ಮೈ ರೋಮಾಂಚನ ಮಾಡಿದೆ. ಬಳ್ಳಾರಿ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯ ತುಂಗಭದ್ರಾ […]

ಗತಕಾಲದ ಇತಿಹಾಸದ ವಿಜಯನಗರ ಸಾಮ್ರಾಜ್ಯದಲ್ಲಿ ಹಂಪಿ ಉತ್ಸವ, ತುಂಗಭದ್ರೆಗೆ ದೀಪಾರತಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jan 05, 2020 | 8:09 AM

Share

ಬಳ್ಳಾರಿ: ಹಂಪಿ ಉತ್ಸವ ಅಂದ್ರೆನೆ ಹಾಗೇ. ಅಲ್ಲಿ ಗತಕಾಲದ ವೈಭವವಿರುತ್ತೆ. ಇತಿಹಾಸ ಮರುಕಳಿಸುತ್ತೆ. ಕಲಾತಂಡಗಳ ಕಲರವ ಮೇಳೈಸುತ್ತೆ. ಸದ್ಯ ಹಂಪಿಯಲ್ಲಿ ತುಂಗಭದ್ರೆಗೆ ನಡೆದ ದೀಪಾರತಿ ಪೂಜೆ ಎಲ್ಲರ ಕಣ್ಮನ ಸೆಳೆದಿತ್ತು.

ಕತ್ತಲಲ್ಲೂ ದೀಪಾರತಿಯ ಮಂದ ಬೆಳಕು. ಪ್ರಶಾಂತವಾಗಿ ಹರಿಯೋ ನೀರು. ಗಂಟೆ ನಾದದ ಸದ್ದು. ಭಕ್ತಿಯ ಜೊತೆ ಸಂಭ್ರಮದ ಹೊನಲು. ವಿಶ್ವವಿಖ್ಯಾತ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ನಡೆದ ತುಂಗಭದ್ರಾ ಆರತಿ ಮಹೋತ್ಸವ ಎಲ್ಲರ ಮೈ ರೋಮಾಂಚನ ಮಾಡಿದೆ.

ಬಳ್ಳಾರಿ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯ ತುಂಗಭದ್ರಾ ನದಿಯಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಲಾಯ್ತು. ಮಂಗಳ ವಾದ್ಯಗಳ ಮಧ್ಯೆ ನದಿಗೆ ಬಾಗಿನ ಅರ್ಪಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಸಂಸದ ವೈ. ದೇವೇಂದ್ರಪ್ಪ, ಶಾಸಕ ಆನಂದ್ ಸಿಂಗ್, ಡಿಸಿ ಎಸ್.ಎಸ್ ನಕುಲ್, ಎಸ್​ಪಿ ಸಿಕೆ ಬಾಬಾ ಸೇರಿದಂತೆ ಹಲವು ಅಧಿಕಾರಿಗಳು ಸಹ ಭಾಗವಹಿಸಿದ್ರು.

ತುಂಗಭದ್ರಾ ಆರತಿ ಮಹೋತ್ಸವ ನಡೆಸಿದ ಬಳಿಕ ಪ್ರತಿ ವರ್ಷ ಜಲಾಶಯ ಭರ್ತಿಯಾಗ್ತಿದೆ ಅನ್ನೋ ನಂಬಿಕೆ ಇಲ್ಲಿನ ರೈತರದ್ದು.. ಇನ್ನು ಇದೇ ವೇಳೆ ಮಾತ್ನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತುಂಗಭದ್ರಾ ಆರತಿ ಮಹೋತ್ಸವವನ್ನ ವೈಭವದಿಂದ ಆಚರಿಸಲಾಗಿದೆ ಅಂದ್ರು.

ಇನ್ನು ನದಿ, ಕೆರೆ, ಜಲಾಶಯಗಳು ತುಂಬಿದಾಗ ಗಂಗಾಮಾತೆಗೆ ಪೂಜಿಸುವುದು ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಕ್ಷೇತ್ರವಾದ ಹಂಪಿಯಲ್ಲಿ ಆರತಿ ಬೆಳಗಿ, ನದಿಗೆ ಬಾಗಿನ ಅರ್ಪಿಸಲಾಯ್ತು.. ಹಾಗೇ ನದಿಯಲ್ಲಿ ದೀಪ ಹಚ್ಚಿ ಬಿಡೋದ್ರ ಜತೆಗೆ ನದಿಯ ಸುತ್ತಲೂ ದೀಪಗಳನ್ನ ಹಚ್ಚಲಾಗಿತ್ತು. ತುಂಗಭದ್ರಾ ಆರತಿ ಮಹೋತ್ಸವದ ಬಳಿಕ ಬಾನಾಂಗಣದಲ್ಲಿ ಪಟಾಕಿಗಳ ಸದ್ದಿನ ಜೊತೆ ಚಿತ್ತಾರ ಮೂಡಿತ್ತು.

ಗತಕಾಲದ ಇತಿಹಾಸ ಹೊಂದಿರೋ ವಿಜಯನಗರ ಸಾಮ್ರಾಜ್ಯದ ಹಂಪಿ ಉತ್ಸವ ಆಚರಣೆಗೂ ಮುನ್ನ ಈ ಆರತಿ ಮಹೋತ್ಸವ ನಡೆಸಲಾಗುತ್ತೆ. ಸದ್ಯ ಈ ವರ್ಷದ ಆರಂಭದಲ್ಲೇ ದೀಪಾರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ.

Follow Us
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!