ಭೂಪಟದಲ್ಲಿ ಪ್ರಮಾದ, ಭಾರತದ ಕ್ಷಮೆ ಯಾಚಿಸಿದ ಟ್ವಿಟ್ಟರ್ | Twitter apologises for showing part of Ladakh in China

ಭಾರತದ ಲಡಾಖ್ ಪ್ರಾಂತ್ಯದ ಲೇಹ್ ಭಾಗವನ್ನು ಚೀನಾ ಭೂಪಟದಲ್ಲಿ ತೋರಿಸಿ ಭಾರಿ ಪ್ರಮಾದವೆಸಗಿದ್ದಕ್ಕೆ ಟ್ವಿಟ್ಟರ್ ಸಂಸ್ಥೆಯು ಲಿಖಿತರೂಪದಲ್ಲಿ ಕ್ಷಮಾಪಣೆ ಕೋರಿದೆ ಎಂದು, ಸಂಸದೀಯ ಸಮಿತಿಯ ಅಧ್ಯಕ್ಷೆಯಾಗಿರುವ ಮೀನಾಕ್ಷಿ ಲೇಖಿ ಹೇಳಿದ್ದಾರೆ. ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಿಂದ ಟ್ವೀಟ್ ಮಾಡಿರುವ ಲೇಖಿ, ‘‘ಟ್ವಿಟ್ಟರ್ ಸಂಸ್ಥೆಯು ಕಳಿಸಿರುವ ಅಫಿಡವಿಟ್ ಇಂದು ನಮಗೆ ತಲುಪಿದೆ. ಲಡಾಕ್ ಪ್ರಾಂತ್ಯದ ಒಂದು ಪ್ರದೇಶವನ್ನು ಚೀನಾದ ಭಾಗವೆಂದು ತಪ್ಪಾಗಿ ತೋರಿಸಿರುವ ಪ್ರಮಾದವನ್ನು ಅವರು ಅಂಗೀಕರಿಸಿದ್ದಾರೆ. ನವೆಂಬರ್ 30, 2020ರೊಳಗಾಗಿ ಆಗಿರುವ ತಪ್ಪನ್ನು ಸರಿಪಡಿಸುವುದಾಗಿ ಆ ಸಂಸ್ಥೆಯ ಆಧಿಕಾರಿಗಳು […]

ಭೂಪಟದಲ್ಲಿ ಪ್ರಮಾದ, ಭಾರತದ ಕ್ಷಮೆ ಯಾಚಿಸಿದ ಟ್ವಿಟ್ಟರ್ | Twitter apologises for showing part of Ladakh in China
ಅರುಣ್​ ಕುಮಾರ್​ ಬೆಳ್ಳಿ

Updated on: Nov 18, 2020 | 6:54 PM

ಭಾರತದ ಲಡಾಖ್ ಪ್ರಾಂತ್ಯದ ಲೇಹ್ ಭಾಗವನ್ನು ಚೀನಾ ಭೂಪಟದಲ್ಲಿ ತೋರಿಸಿ ಭಾರಿ ಪ್ರಮಾದವೆಸಗಿದ್ದಕ್ಕೆ ಟ್ವಿಟ್ಟರ್ ಸಂಸ್ಥೆಯು ಲಿಖಿತರೂಪದಲ್ಲಿ ಕ್ಷಮಾಪಣೆ ಕೋರಿದೆ ಎಂದು, ಸಂಸದೀಯ ಸಮಿತಿಯ ಅಧ್ಯಕ್ಷೆಯಾಗಿರುವ ಮೀನಾಕ್ಷಿ ಲೇಖಿ ಹೇಳಿದ್ದಾರೆ.

ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಿಂದ ಟ್ವೀಟ್ ಮಾಡಿರುವ ಲೇಖಿ, ‘‘ಟ್ವಿಟ್ಟರ್ ಸಂಸ್ಥೆಯು ಕಳಿಸಿರುವ ಅಫಿಡವಿಟ್ ಇಂದು ನಮಗೆ ತಲುಪಿದೆ. ಲಡಾಕ್ ಪ್ರಾಂತ್ಯದ ಒಂದು ಪ್ರದೇಶವನ್ನು ಚೀನಾದ ಭಾಗವೆಂದು ತಪ್ಪಾಗಿ ತೋರಿಸಿರುವ ಪ್ರಮಾದವನ್ನು ಅವರು ಅಂಗೀಕರಿಸಿದ್ದಾರೆ. ನವೆಂಬರ್ 30, 2020ರೊಳಗಾಗಿ ಆಗಿರುವ ತಪ್ಪನ್ನು ಸರಿಪಡಿಸುವುದಾಗಿ ಆ ಸಂಸ್ಥೆಯ ಆಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ,’’ ಎಂದಿದ್ದಾರೆ.

ಟ್ವಿಟ್ಟರ್ ಎಸಗಿದ ಪ್ರಮಾದದ ಬಗ್ಗೆ ಭಾರತ ಸರ್ಕಾರ ದಿಗ್ಭ್ರಮೆ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಸಬಹುದಾಗಿದೆ. ಐಟಿ ಕಾರ್ಯದರ್ಶಿ ಅಜಯ ಸಾಹ್ನಿ, ಟ್ವಿಟ್ಟರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಾಕ್ ಡೊರ್ಸಿ ಅವರಿಗೆ ಪತ್ರವೊಂದನ್ನು ಬರೆದು ಸ್ಪಷ್ಟೀಕರಣವನ್ನು ಕೇಳಿದ್ದರಲ್ಲದೆ ಅಗಿರುವ ಪ್ರಮಾದವನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದ್ದರು.

ಭಾರತೀಯರ ಸೂಕ್ಷ್ಮ ಸಂವೇದನೆಗಳನ್ನು ಗೌರವಿಸುವಂತೆ ಟ್ವಿಟ್ಟರ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದ ಭಾರತ ಸರ್ಕಾರ, ದೇಶದ ಅಖಂಡತೆ ಮತ್ತು ಸಮಗ್ರತೆಯನ್ನು ಅಗೌರವಿಸುವ ಯಾವುದೇ ಪ್ರಯತ್ನವನ್ನು ಸ್ವೀಕರಿಸಲಾಗದು ಮತ್ತು ಅದನ್ನು ಕಾನೂನುಬಾಹಿರ ಅಂತ ಪರಿಗಣಿಸಲಾಗುವುದೆಂದು ಎಚ್ಚರಿಸಿತ್ತು.

ಪ್ರಮಾದವಾಗಿರುವುದು ತಾಂತ್ರಿಕ ದೋಷವೆಂದು ಹೇಳಿರುವ ಸಂಸ್ಥೆಯ ಅಧಿಕಾರಿಗಳು ಅದನ್ನು ಆದಷ್ಟು ಬೇಗ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us