ಏನೋ ಮಾಡೋಕೆ ಹೋಗಿ ಇನ್ನೇನೋ ಆಯ್ತು! ಹಸುಗಳ ಕದ್ದ ಕಳ್ಳರು ಆಸ್ಪತ್ರೆ ಸೇರಿದ್ರು, ಆದ್ರೆ ಹಸುಗಳು

ಶಿವಮೊಗ್ಗ: 2 ಹಸುಗಳನ್ನು ಕದ್ದು ಪರಾರಿಯಾಗುತ್ತಿದ್ದಾಗ ಕಾರು ಪಲ್ಟಿಯಾಗಿರುವ ಘಟನೆ ಉಂಬ್ಳೆಬೈಲು ಸಮೀಪದ ಮರಾಠಾ ಕ್ಯಾಂಪ್ ಬಳಿ ನಡೆದಿದೆ. ಖದೀಮರು ಬೆಳಗಿನ ಜಾವ ಎರಡು ಹಸುಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಈ ವೇಳೆ ಭಯಕ್ಕೂ, ನಿಯಂತ್ರಣ ತಪ್ಪಿಯೂ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಪಲ್ಟಿಯಾದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ 2 ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಕಳ್ಳರು ಗೋಮಾತೆಯನ್ನು ಕದ್ದು ಭಾರಿ ಅನಾಹುತಕ್ಕೆ ಕಾರಣರಾಗಿದ್ದಾರೆ. ಇನ್ನು ಕಾರಿನಲ್ಲಿ ಮಚ್ಚು, […]

ಏನೋ ಮಾಡೋಕೆ ಹೋಗಿ ಇನ್ನೇನೋ ಆಯ್ತು! ಹಸುಗಳ ಕದ್ದ ಕಳ್ಳರು ಆಸ್ಪತ್ರೆ ಸೇರಿದ್ರು, ಆದ್ರೆ ಹಸುಗಳು
ಆಯೇಷಾ ಬಾನು

Updated on: Jun 17, 2020 | 1:39 PM

ಶಿವಮೊಗ್ಗ: 2 ಹಸುಗಳನ್ನು ಕದ್ದು ಪರಾರಿಯಾಗುತ್ತಿದ್ದಾಗ ಕಾರು ಪಲ್ಟಿಯಾಗಿರುವ ಘಟನೆ ಉಂಬ್ಳೆಬೈಲು ಸಮೀಪದ ಮರಾಠಾ ಕ್ಯಾಂಪ್ ಬಳಿ ನಡೆದಿದೆ. ಖದೀಮರು ಬೆಳಗಿನ ಜಾವ ಎರಡು ಹಸುಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಈ ವೇಳೆ ಭಯಕ್ಕೂ, ನಿಯಂತ್ರಣ ತಪ್ಪಿಯೂ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಪಲ್ಟಿಯಾದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ 2 ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಕಳ್ಳರು ಗೋಮಾತೆಯನ್ನು ಕದ್ದು ಭಾರಿ ಅನಾಹುತಕ್ಕೆ ಕಾರಣರಾಗಿದ್ದಾರೆ. ಇನ್ನು ಕಾರಿನಲ್ಲಿ ಮಚ್ಚು, ಲಾಂಗ್ ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಕಾರ್ ಪಲ್ಟಿಯಾದ ವೇಳೆ ಮೂವರು ಹಸು ಕಳ್ಳರು ಕಾರ್​ನಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರೇ ಕಾರಿನಿಂದ ಅವರನ್ನು ಹೊರಗೆ ತೆಗೆದು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ್ರು. ಗ್ರಾಮಸ್ಥರ ಮಾನವೀಯತೆಯಿಂದ ಮೂವರ ಜೀವ ಉಳಿಸಿದಿದೆ. ಆದರೆ ಏನೂ ತಿಳಿಯದ ಮೂಕ ಪ್ರಾಣಿಗಳು ಜೀವ ಕಳೆದುಕೊಂಡಿವೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

 

Published On - 9:10 am, Tue, 16 June 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us