ಧುಮ್ಮಿಕ್ಕಿ ಹರಿಯುತ್ತಿದೆ ವರವಿ ಕೊಳ್ಳ.. ಅಪಾಯವಿದ್ರೂ ಪ್ರವಾಸಿಗರು ಫುಲ್ ಎಂಜಾಯ್

ಬೆಳಗಾವಿ: ಸವದತ್ತಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಅವಾಂತರಗಳು ಸಹ ಸಂಭವಿಸುತ್ತಿವೆ. ಈ ನಡುವೆ ವರವಿಕೊಳ್ಳ ಜಲಪಾತದಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ವೈಭವ ಸೃಷ್ಟಿಯಾಗಿದೆ. ಮಳೆ ಅವಾಂತರಕ್ಕೆ ಬೇಸತ್ತ ಜನರಿಗೆ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಬಳಿಯಿರೋ ವರವಿಕೊಳ್ಳ ಜಲಪಾತದಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯ ರೋಮಾಂಚನವನ್ನು ತಂದಿದೆ. ಮಳೆ, ಪ್ರವಾಹದ ನಡುವೆ ಈ ಸುಂದರ ತಾಣ ಬೇರೆಯ ಲೋಕವನ್ನೇ ಸೃಷ್ಟಿಸಿದೆ. ಭಾರಿ ಪ್ರಮಾಣದ ಮಳೆ ನೀರಿನಿಂದಾಗಿ ಸುತ್ತಮುತ್ತ ರಸ್ತೆಗಳೇ ಕಾಣಿಸುತ್ತಿಲ್ಲ. ಜೋರಾದ […]

ಧುಮ್ಮಿಕ್ಕಿ ಹರಿಯುತ್ತಿದೆ ವರವಿ ಕೊಳ್ಳ.. ಅಪಾಯವಿದ್ರೂ ಪ್ರವಾಸಿಗರು ಫುಲ್ ಎಂಜಾಯ್
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 12, 2020 | 1:01 PM

ಬೆಳಗಾವಿ: ಸವದತ್ತಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಅವಾಂತರಗಳು ಸಹ ಸಂಭವಿಸುತ್ತಿವೆ. ಈ ನಡುವೆ ವರವಿಕೊಳ್ಳ ಜಲಪಾತದಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ವೈಭವ ಸೃಷ್ಟಿಯಾಗಿದೆ.

ಮಳೆ ಅವಾಂತರಕ್ಕೆ ಬೇಸತ್ತ ಜನರಿಗೆ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಬಳಿಯಿರೋ ವರವಿಕೊಳ್ಳ ಜಲಪಾತದಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯ ರೋಮಾಂಚನವನ್ನು ತಂದಿದೆ. ಮಳೆ, ಪ್ರವಾಹದ ನಡುವೆ ಈ ಸುಂದರ ತಾಣ ಬೇರೆಯ ಲೋಕವನ್ನೇ ಸೃಷ್ಟಿಸಿದೆ.

ಭಾರಿ ಪ್ರಮಾಣದ ಮಳೆ ನೀರಿನಿಂದಾಗಿ ಸುತ್ತಮುತ್ತ ರಸ್ತೆಗಳೇ ಕಾಣಿಸುತ್ತಿಲ್ಲ. ಜೋರಾದ ಗಾಳಿಗೆ ಜಲಪಾತದ ನೀರು ಚಿಮ್ಮುತ್ತಿದೆ. ಅಪಾಯದ ಮಧ್ಯೆಯೇ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಮಳೆ ಸಂದರ್ಭದಲ್ಲಿ ಈ ಜಲಪಾತ ನೋಡುವುದೇ ನಯನ ಮನೋಹರ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us