ನೆಗೆಟಿವ್ ಎನರ್ಜಿಯಿಂದ ಪಾರಾಗಲು ಡ್ರೆಸ್ ಕೋಡ್ ಮೊರೆ ಹೋದ್ರಾ ಆನಂದ್ ಸಿಂಗ್?

ಬಳ್ಳಾರಿ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಜ್ಯೋತಿಷಿ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್ 16ರಿಂದ ಒಂದೇ ರೀತಿಯ ಕಲರ್ ಶರ್ಟ್ ಧರಿಸುತ್ತಿರುವುದು ಇದಕ್ಕೆ  ಪುಷ್ಟಿ ನೀಡುತ್ತಿದೆ. ನೆಗೆಟಿವ್ ಎನರ್ಜಿಯಿಂದ ಪಾರಾಗಲು ಡ್ರೆಸ್ ಕೋಡ್? ಪ್ರತಿದಿನ ತಿಳಿ ಕೇಸರಿ ಬಣ್ಣದ ಶರ್ಟ್ ಹಾಗೂ ಬಿಳಿ ಪ್ಯಾಂಟ್ ಧರಿಸುತ್ತಿದ್ದಾರೆ. ಆನಂದ್ ಸಿಂಗ್ ಡ್ರೆಸ್ ಕೋಡ್​ಗೆ ಕಾರ್ಯಕರ್ತರೇ ಅಚ್ಚರಿಗೊಂಡಿದ್ದಾರೆ. ಜ್ಯೋತಿಷಿ ಸಲಹೆ ಮೇರೆಗೆ ನೆಗೆಟಿವ್ ಎನರ್ಜಿಯಿಂದ ಪಾರಾಗಲು ಒಂದೇ ರೀತಿಯ ಡ್ರೆಸ್ ಕೋಡ್​ನಲ್ಲಿ ಆನಂದ್ ಸಿಂಗ್ […]

ನೆಗೆಟಿವ್ ಎನರ್ಜಿಯಿಂದ ಪಾರಾಗಲು ಡ್ರೆಸ್ ಕೋಡ್ ಮೊರೆ ಹೋದ್ರಾ ಆನಂದ್ ಸಿಂಗ್?
ಸಾಧು ಶ್ರೀನಾಥ್​

Updated on: Nov 29, 2019 | 4:29 PM

ಬಳ್ಳಾರಿ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಜ್ಯೋತಿಷಿ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್ 16ರಿಂದ ಒಂದೇ ರೀತಿಯ ಕಲರ್ ಶರ್ಟ್ ಧರಿಸುತ್ತಿರುವುದು ಇದಕ್ಕೆ  ಪುಷ್ಟಿ ನೀಡುತ್ತಿದೆ.

ನೆಗೆಟಿವ್ ಎನರ್ಜಿಯಿಂದ ಪಾರಾಗಲು ಡ್ರೆಸ್ ಕೋಡ್?
ಪ್ರತಿದಿನ ತಿಳಿ ಕೇಸರಿ ಬಣ್ಣದ ಶರ್ಟ್ ಹಾಗೂ ಬಿಳಿ ಪ್ಯಾಂಟ್ ಧರಿಸುತ್ತಿದ್ದಾರೆ. ಆನಂದ್ ಸಿಂಗ್ ಡ್ರೆಸ್ ಕೋಡ್​ಗೆ ಕಾರ್ಯಕರ್ತರೇ ಅಚ್ಚರಿಗೊಂಡಿದ್ದಾರೆ. ಜ್ಯೋತಿಷಿ ಸಲಹೆ ಮೇರೆಗೆ ನೆಗೆಟಿವ್ ಎನರ್ಜಿಯಿಂದ ಪಾರಾಗಲು ಒಂದೇ ರೀತಿಯ ಡ್ರೆಸ್ ಕೋಡ್​ನಲ್ಲಿ ಆನಂದ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಒಂದೇ ರೀತಿಯ 20ಕ್ಕೂ ಹೆಚ್ಚು ಶರ್ಟ್​ ಖರೀದಿ:
ಡ್ರೆಸ್ ಕೋಡ್ ಬಗ್ಗೆ ಹೆಚ್ಚು ಗಮನಕೊಡುವ ಆನಂದ್ ಸಿಂಗ್, ಉಪ ಚುನಾವಣೆ ವೇಳೆ ಒಂದೇ ಡ್ರೆಸ್ ಧರಿಸುತ್ತಿರುವುದು ಗಮನಾರ್ಹವಾಗಿದೆ. ಅಲ್ಲದೆ, ಆನಂದ್ ಸಿಂಗ್ ಒಂದೇ ರೀತಿಯ 20ಕ್ಕೂ ಹೆಚ್ಚು ಶರ್ಟ್​ ಖರೀದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆನಂದ್ ಸಿಂಗ್, ನನಗೆ ಬಹಳ ಡ್ರೆಸ್ ಸೆನ್ಸ್ ಇದೆ. ಈ ಕಲರ್​ ಶರ್ಟ್ ಇಷ್ಟ ಆಯ್ತು. ಅದಕ್ಕೆ ಅಂಗಡಿಯಲ್ಲಿ ಖರೀದಿಸಿ ಹಾಕಿಕೊಳ್ಳುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.

Published On - 4:12 pm, Fri, 29 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us