ಜೋಳದ ಹೊಲದಲ್ಲಿ ಬೀಡುಬಿಟ್ಟ ಗಜಪಡೆ!

ಹಾಸನ: ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲ.. ಪಟ್ಟಣದ ಜೋಳದ ಹೊಲದಲ್ಲಿಯೇ  ಆ ಗಜಪಡೆ ಬೀಡುಬಿಟ್ಟಿದೆ. ಪಟ್ಟಣದೊಳಗೆ ಎಂಟ್ರಿಯಾದ ಕಾಡಾನೆ ಹಿಂಡು ಕಂಡು ಜನರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಬೇಲೂರು ಪಟ್ಟಣದ ಒಳಗೇ ಆರು ಕಾಡಾನೆಗಳು ನುಗ್ಗಿವೆ. ಈ ಮಧ್ಯೆ, ಜನರು ಮನೆಯಿಂದ ಆಚೆ ಬರಬಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೆಲ ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಆನೆ ಹಿಂಡು ಓಡಾಡುತ್ತಿದೆ. ಕೂಡಲೇ ಆನೆಗಳನ್ನ ಕಾಡಿಗೆ ಓಡಿಸಬೇಕು ಎಂದು ಜನ ಒತ್ತಾಯ ಮಾಡಿದ್ದಾರೆ. […]

ಜೋಳದ ಹೊಲದಲ್ಲಿ ಬೀಡುಬಿಟ್ಟ ಗಜಪಡೆ!
ಸಾಧು ಶ್ರೀನಾಥ್​

Updated on: Oct 15, 2020 | 11:07 AM

ಹಾಸನ: ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲ.. ಪಟ್ಟಣದ ಜೋಳದ ಹೊಲದಲ್ಲಿಯೇ  ಆ ಗಜಪಡೆ ಬೀಡುಬಿಟ್ಟಿದೆ.

ಪಟ್ಟಣದೊಳಗೆ ಎಂಟ್ರಿಯಾದ ಕಾಡಾನೆ ಹಿಂಡು ಕಂಡು ಜನರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಬೇಲೂರು ಪಟ್ಟಣದ ಒಳಗೇ ಆರು ಕಾಡಾನೆಗಳು ನುಗ್ಗಿವೆ. ಈ ಮಧ್ಯೆ, ಜನರು ಮನೆಯಿಂದ ಆಚೆ ಬರಬಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೆಲ ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಆನೆ ಹಿಂಡು ಓಡಾಡುತ್ತಿದೆ. ಕೂಡಲೇ ಆನೆಗಳನ್ನ ಕಾಡಿಗೆ ಓಡಿಸಬೇಕು ಎಂದು ಜನ ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ಆನೆಗಳನ್ನ ಕಾಡಿಗೆ ಓಡಿಸೊ ಬಗ್ಗೆ ಸಮಾಲೋಚನೆ ನಡೆಸುತ್ತಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us