
ಹಾಸನ: ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲ.. ಪಟ್ಟಣದ ಜೋಳದ ಹೊಲದಲ್ಲಿಯೇ ಆ ಗಜಪಡೆ ಬೀಡುಬಿಟ್ಟಿದೆ.
ಕೆಲ ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಆನೆ ಹಿಂಡು ಓಡಾಡುತ್ತಿದೆ. ಕೂಡಲೇ ಆನೆಗಳನ್ನ ಕಾಡಿಗೆ ಓಡಿಸಬೇಕು ಎಂದು ಜನ ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ಆನೆಗಳನ್ನ ಕಾಡಿಗೆ ಓಡಿಸೊ ಬಗ್ಗೆ ಸಮಾಲೋಚನೆ ನಡೆಸುತ್ತಿದೆ.