AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ಇಲ್ಲಾ ಅಂದ್ರೆ BJP ಹೊರಟು ಹೋಗುತ್ತೆ: ಹೀಗೆ ಹೇಳಿದ್ದು ಯಾರು?

ತುಮಕೂರು: ಯಡಿಯೂರಪ್ಪ ಇಲ್ಲಾ ಅಂದ್ರೆ ಬಿಜೆಪಿ ಪಾರ್ಟಿ ಹೊರಟು ಹೋಗುತ್ತೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಅದೇ ಧಾಟಿಯಲ್ಲಿ ಜೆಡಿಎಸ್​ಗೆ ದೇವೇಗೌಡ, ಕಾಂಗ್ರೆಸ್​ಗೆ ಸಿದ್ದರಾಮಯ್ಯ ಇಲ್ಲಾ ಅಂದ್ರೆ ಆ ಪಾರ್ಟಿಗಳೂ ಇರೋಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಯಡಿಯೂರಪ್ಪ ಅವರನ್ನ ಒಂದು ವರ್ಷ ಅವಧಿಗೆ ಮುಖ್ಯಮಂತ್ರಿ ಮಾಡಿರೋದು ಅಂತಾ ಆ ಪಾರ್ಟಿ ಹಿರಿಯ ಮುಖಂಡರು ಹೇಳ್ತಾರೆ. ಆದ್ರೆ ಯಡಿಯೂರಪ್ಪರನ್ನ ಬದಲಾವಣೆ ಮಾಡಿದ್ರೆ ಆ ಪಾರ್ಟಿ ಹೊರಟು ಹೋಗುತ್ತೆ ಎಂದು ರಾಜಣ್ಣ ಹೇಳಿದ್ದಾರೆ. ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್ […]

ಯಡಿಯೂರಪ್ಪ ಇಲ್ಲಾ ಅಂದ್ರೆ BJP ಹೊರಟು ಹೋಗುತ್ತೆ: ಹೀಗೆ ಹೇಳಿದ್ದು ಯಾರು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 15, 2020 | 4:09 PM

Share

ತುಮಕೂರು: ಯಡಿಯೂರಪ್ಪ ಇಲ್ಲಾ ಅಂದ್ರೆ ಬಿಜೆಪಿ ಪಾರ್ಟಿ ಹೊರಟು ಹೋಗುತ್ತೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಅದೇ ಧಾಟಿಯಲ್ಲಿ ಜೆಡಿಎಸ್​ಗೆ ದೇವೇಗೌಡ, ಕಾಂಗ್ರೆಸ್​ಗೆ ಸಿದ್ದರಾಮಯ್ಯ ಇಲ್ಲಾ ಅಂದ್ರೆ ಆ ಪಾರ್ಟಿಗಳೂ ಇರೋಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನ ಒಂದು ವರ್ಷ ಅವಧಿಗೆ ಮುಖ್ಯಮಂತ್ರಿ ಮಾಡಿರೋದು ಅಂತಾ ಆ ಪಾರ್ಟಿ ಹಿರಿಯ ಮುಖಂಡರು ಹೇಳ್ತಾರೆ. ಆದ್ರೆ ಯಡಿಯೂರಪ್ಪರನ್ನ ಬದಲಾವಣೆ ಮಾಡಿದ್ರೆ ಆ ಪಾರ್ಟಿ ಹೊರಟು ಹೋಗುತ್ತೆ ಎಂದು ರಾಜಣ್ಣ ಹೇಳಿದ್ದಾರೆ.

ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್ ದೇವೇಗೌಡ, ಕಾಂಗ್ರೆಸ್ ಸಿದ್ದರಾಮಯ್ಯ ಮೂರು ಜನ ಇಲ್ಲಾ ಅಂದ್ರೆ ಪಾರ್ಟಿಗಳೇ ಇರೋಲ್ಲ. ಈ ಮೂರೇ ಜನಕ್ಕೆ ಓಟ್ ಟ್ರಾನ್ಸಫರ್ ಮಾಡಿಸೋ ಶಕ್ತಿ ಇರೋದು. ವಾಸ್ತವ ಇದು ಎಂದು ಮಾಜಿ ಶಾಸಕ ರಾಜಣ್ಣ ಹೇಳಿದ್ದಾರೆ.

Published On - 4:06 pm, Tue, 15 September 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು