ತರಬೇತುದಾರನ ಕಣ್ಣೆದುರೇ ಸ್ವಿಮ್ಮಿಂಗ್ ಪೂಲ್​ನಲ್ಲೇ ಒದ್ದಾಡಿ ಪ್ರಾಣಬಿಟ್ಟ ಯುವಕ

ಹುಬ್ಬಳ್ಳಿ: ಸ್ವಿಮ್ಮಿಂಗ್ ಪೂಲ್​ನಲ್ಲಿ ಈಜಲು ಹೋಗಿ ಯುವಕ ಪ್ರಾಣ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ. ತರಬೇತುದಾರನ ಮುಂದೆಯೇ ನೀರಿನಲ್ಲಿ ಮುಳುಗಿ ಸಿರಾಜ್ ಅಣ್ಣಿಗೇರಿ (24) ಸಾವಿಗೀಡಾಗಿದ್ದಾನೆ. ಪ್ಲ್ಯಾಶ್ ಸ್ವಿಮ್ಮಿಂಗ್ ಪೂಲ್​ನಲ್ಲಿ ಸ್ನೇಹಿತರೊಡನೆ ಈಜಾಡಲು ನಲವಲಗುಂದ ನಿವಾಸಿ ಸಿರಾಜ್ ಅಣ್ಣಿಗೇರಿ ಬಂದಿದ್ದ. ನೀರಿನಲ್ಲಿ ಮುಳುಗುವ ವೇಳೆ ಯುವಕ ಜೋರಾಗಿ ಕೈ ಬಡಿದಿದ್ದಾನೆ. ಯುವಕ‌ ನೀರಿನಲ್ಲಿ ಮುಳುಗುತ್ತಿದ್ರೂ ತರಬೇತುದಾರ ರಕ್ಷಿಸಲು ಹೋಗಲಿಲ್ಲ. ಈ ವೇಳೆ ಸ್ನೇಹಿತರು ಸಹ ಆತನ ಜೊತೆ ಇರಲಿಲ್ಲ. ಹೀಗಾಗಿ ಸಿರಾಜ್ ಸಾವಿನಲ್ಲಿ ಹಲವು ಅನುಮಾನ […]

ತರಬೇತುದಾರನ ಕಣ್ಣೆದುರೇ ಸ್ವಿಮ್ಮಿಂಗ್ ಪೂಲ್​ನಲ್ಲೇ ಒದ್ದಾಡಿ ಪ್ರಾಣಬಿಟ್ಟ ಯುವಕ
ಸಾಧು ಶ್ರೀನಾಥ್​

Updated on: Mar 12, 2020 | 9:39 AM

ಹುಬ್ಬಳ್ಳಿ: ಸ್ವಿಮ್ಮಿಂಗ್ ಪೂಲ್​ನಲ್ಲಿ ಈಜಲು ಹೋಗಿ ಯುವಕ ಪ್ರಾಣ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ. ತರಬೇತುದಾರನ ಮುಂದೆಯೇ ನೀರಿನಲ್ಲಿ ಮುಳುಗಿ ಸಿರಾಜ್ ಅಣ್ಣಿಗೇರಿ (24) ಸಾವಿಗೀಡಾಗಿದ್ದಾನೆ.

ಪ್ಲ್ಯಾಶ್ ಸ್ವಿಮ್ಮಿಂಗ್ ಪೂಲ್​ನಲ್ಲಿ ಸ್ನೇಹಿತರೊಡನೆ ಈಜಾಡಲು ನಲವಲಗುಂದ ನಿವಾಸಿ ಸಿರಾಜ್ ಅಣ್ಣಿಗೇರಿ ಬಂದಿದ್ದ. ನೀರಿನಲ್ಲಿ ಮುಳುಗುವ ವೇಳೆ ಯುವಕ ಜೋರಾಗಿ ಕೈ ಬಡಿದಿದ್ದಾನೆ. ಯುವಕ‌ ನೀರಿನಲ್ಲಿ ಮುಳುಗುತ್ತಿದ್ರೂ ತರಬೇತುದಾರ ರಕ್ಷಿಸಲು ಹೋಗಲಿಲ್ಲ. ಈ ವೇಳೆ ಸ್ನೇಹಿತರು ಸಹ ಆತನ ಜೊತೆ ಇರಲಿಲ್ಲ. ಹೀಗಾಗಿ ಸಿರಾಜ್ ಸಾವಿನಲ್ಲಿ ಹಲವು ಅನುಮಾನ ವ್ಯಕ್ತವಾಗಿವೆ.

ಅಲ್ಲದೆ ಮಾರ್ಚ್ 18ರಂದು ಸಿರಾಜ್ ಅಣ್ಣಿಗೇರಿ ಮದುವೆ ನಿಗದಿಯಾಗಿತ್ತು. ಯುವಕ ನೀರಿನಲ್ಲಿ ಮುಳುಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕನ ಸಾಯುವ ಕೊನೆ ಕ್ಷಣದ ವಿಡಿಯೋ ಎದೆ ಝಲ್ ಎನ್ನಿಸುವಂತಿದೆ.

Published On - 9:38 am, Thu, 12 March 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us