AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾಗೆ ಸಾರಾಯಿ ರಾಮಬಾಣವಂತೆ… ಪರಿಷತ್​ನಲ್ಲಿ ಮರಿತಿಬ್ಬೇಗೌಡ ಹೇಳಿದ್ದು

ಬೆಂಗಳೂರು: ಪರಿಷತ್​ನಲ್ಲಿ ಕೊರೊನಾಗೆ ಬ್ರಾಂದಿ ಔಷಧಿ ಎನ್ನೋ ಹಾಸ್ಯಭರಿತ ಚರ್ಚೆ ಉಂಟಾಗಿತ್ತು. ಮರಿತಿಬ್ಬೇಗೌಡ ಕೊರೊನಾಗೆ ಸಾರಾಯಿ ರಾಮಬಾಣ ಎಂದಿದ್ದಾರೆ. ಇವತ್ತು ಕೊರೊನಾ ವೈರಸ್ ಎಲ್ಲೆಡೆ ಬಂದಿದೆ. ಮುಕ್ಕೋಟಿ ದೇವತೆಗಳು ಎಲ್ಲಿ ಹೋದ್ರು ಪೂಜಾರಿ ಅವ್ರೇ? ಎಂದು ಮುಜರಾಯಿ ಸಚಿವ ಸಿಟಿ ರವಿಗೆ ಮರಿತಿಬ್ಬೇಗೌಡ ಪ್ರಶ್ನೆ ಮಾಡಿದ್ದಾರೆ. ದೇವಸ್ಥಾನಗಳನ್ನು ಮುಚ್ಚಿ ಅಂತ ಹೇಳ್ತಿದ್ದಾರೆ. ದೇವರುಗಳಿಂದ ಕೊರೊನಾ ಕಡಿಮೆ ಮಾಡಲು ಆಗ್ತಿಲ್ಲ. ಈ ಸಣ್ಣ ವೈರಸ್​ಗೆ ಔಷಧಿ‌ ಕಂಡು ಹಿಡಿಯಲು ಆಗ್ತಿಲ್ಲ. ಆದ್ರೆ ಈ ವೈರಸ್ ಸಾಯಿಸಲು ಬ್ರಾಂದಿ ಇಂದ […]

ಕೊರೊನಾಗೆ ಸಾರಾಯಿ ರಾಮಬಾಣವಂತೆ... ಪರಿಷತ್​ನಲ್ಲಿ  ಮರಿತಿಬ್ಬೇಗೌಡ ಹೇಳಿದ್ದು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Mar 12, 2020 | 3:59 PM

Share

ಬೆಂಗಳೂರು: ಪರಿಷತ್​ನಲ್ಲಿ ಕೊರೊನಾಗೆ ಬ್ರಾಂದಿ ಔಷಧಿ ಎನ್ನೋ ಹಾಸ್ಯಭರಿತ ಚರ್ಚೆ ಉಂಟಾಗಿತ್ತು. ಮರಿತಿಬ್ಬೇಗೌಡ ಕೊರೊನಾಗೆ ಸಾರಾಯಿ ರಾಮಬಾಣ ಎಂದಿದ್ದಾರೆ. ಇವತ್ತು ಕೊರೊನಾ ವೈರಸ್ ಎಲ್ಲೆಡೆ ಬಂದಿದೆ. ಮುಕ್ಕೋಟಿ ದೇವತೆಗಳು ಎಲ್ಲಿ ಹೋದ್ರು ಪೂಜಾರಿ ಅವ್ರೇ? ಎಂದು ಮುಜರಾಯಿ ಸಚಿವ ಸಿಟಿ ರವಿಗೆ ಮರಿತಿಬ್ಬೇಗೌಡ ಪ್ರಶ್ನೆ ಮಾಡಿದ್ದಾರೆ.

ದೇವಸ್ಥಾನಗಳನ್ನು ಮುಚ್ಚಿ ಅಂತ ಹೇಳ್ತಿದ್ದಾರೆ. ದೇವರುಗಳಿಂದ ಕೊರೊನಾ ಕಡಿಮೆ ಮಾಡಲು ಆಗ್ತಿಲ್ಲ. ಈ ಸಣ್ಣ ವೈರಸ್​ಗೆ ಔಷಧಿ‌ ಕಂಡು ಹಿಡಿಯಲು ಆಗ್ತಿಲ್ಲ. ಆದ್ರೆ ಈ ವೈರಸ್ ಸಾಯಿಸಲು ಬ್ರಾಂದಿ ಇಂದ ಸಾಧ್ಯ ಅಂತಿದ್ದಾರೆ. ಗಾಂಧಿಯಿಂದ ಅಲ್ಲ ಬ್ರಾಂದಿಯಿಂದ ವೈರಸ್ ಸಾಯಿಸಲಾಗ್ತಿದೆ ಎಂದು ಇಂದು ಪರಿಷತ್​ನಲ್ಲಿ ಮರಿತಿಬ್ಬೇಗೌಡ ವಾದಿಸಿದ್ದು, ಇವರ ಮಾತಿಗೆ ಇಡೀ ಸದನ ನಗೆಯಲ್ಲಿ ತೆಲಾಡಿದೆ.

ಮಧ್ಯ ಪ್ರವೇಶ ಮಾಡಿದ ಗೋವಿಂದರಾಜು ಅಬಕಾರಿ ಮಂತ್ರಿಗಳಿಗೆ ಬ್ರಾಂದಿ ಹೆಚ್ಚು ಸೇಲ್ ಆಗಿ ಒಳ್ಳೆ ರೆವಿನ್ಯೂ ಬರುತ್ತೆ ಬಿಡಿ ಎಂದರು. ಹಿಂದೆ ಪ್ಲೇಗ್ ಬಂದಾಗ ಪ್ಲೇಗಮ್ಮ ದೇವಸ್ಥಾನ ಪ್ರಾರಂಭ ಆಗಿತ್ತು. ಇವತ್ತು ಕೊವಿಂದಮ್ಮ ದೇವಾಲಯ ಬಂದ್ರೆ ಆಶ್ಚರ್ಯ ಇಲ್ಲ. ತೀರ್ಥವಾಗಿ ಬ್ರಾಂದಿ ಕೊಡ್ತಾರೆ ಎಂದು ಮರಿತಿಬ್ಬೇಗೌಡರು ಮಾತು ಮುಂದುವರೆಸಿದರು.

ಬ್ರಾಂದಿ ಔಷಧಿ ಆಗಿರೋದ್ರಿಂದ ಇಲಾಖೆಗೆ ಜಾಸ್ತಿ ಆದಾಯ ಬರುತ್ತೆ. ದೇವಾಲಯ ಮುಚ್ಚಲು ಹೇಳ್ತಿದ್ದಾರೆ. ಆದ್ರೆ ಯಾರು ವೈನ್ ಶಾಪ್ ಮುಚ್ಚಬೇಕು ಅಂತ ಹೇಳ್ತಿಲ್ಲ. ಸ್ವಲ್ಪ ದಿನ ಈ ಕೊರೊನಾ ಉಳಿಸಿಕೊಳ್ಳಿ. ಅಬಕಾರಿ ಇಲಾಖೆಗೆ ಹಣ ಹೆಚ್ಚು ಬರುತ್ತೆ ಎಂದರು. ಅದಕ್ಕೆ ಕೇವಲ ಬ್ರಾಂದಿ ಮಾತ್ರನಾ? ಅದರ ಜೊತೆಗೆ ಏನು ಇಲ್ಲವೇ ಎಂದ ಸಚಿವ ಸಿ.ಟಿ.ರವಿ ಹೇಳಿದ್ರು.

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ