AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾಗೆ ಸಾರಾಯಿ ರಾಮಬಾಣವಂತೆ… ಪರಿಷತ್​ನಲ್ಲಿ ಮರಿತಿಬ್ಬೇಗೌಡ ಹೇಳಿದ್ದು

ಬೆಂಗಳೂರು: ಪರಿಷತ್​ನಲ್ಲಿ ಕೊರೊನಾಗೆ ಬ್ರಾಂದಿ ಔಷಧಿ ಎನ್ನೋ ಹಾಸ್ಯಭರಿತ ಚರ್ಚೆ ಉಂಟಾಗಿತ್ತು. ಮರಿತಿಬ್ಬೇಗೌಡ ಕೊರೊನಾಗೆ ಸಾರಾಯಿ ರಾಮಬಾಣ ಎಂದಿದ್ದಾರೆ. ಇವತ್ತು ಕೊರೊನಾ ವೈರಸ್ ಎಲ್ಲೆಡೆ ಬಂದಿದೆ. ಮುಕ್ಕೋಟಿ ದೇವತೆಗಳು ಎಲ್ಲಿ ಹೋದ್ರು ಪೂಜಾರಿ ಅವ್ರೇ? ಎಂದು ಮುಜರಾಯಿ ಸಚಿವ ಸಿಟಿ ರವಿಗೆ ಮರಿತಿಬ್ಬೇಗೌಡ ಪ್ರಶ್ನೆ ಮಾಡಿದ್ದಾರೆ. ದೇವಸ್ಥಾನಗಳನ್ನು ಮುಚ್ಚಿ ಅಂತ ಹೇಳ್ತಿದ್ದಾರೆ. ದೇವರುಗಳಿಂದ ಕೊರೊನಾ ಕಡಿಮೆ ಮಾಡಲು ಆಗ್ತಿಲ್ಲ. ಈ ಸಣ್ಣ ವೈರಸ್​ಗೆ ಔಷಧಿ‌ ಕಂಡು ಹಿಡಿಯಲು ಆಗ್ತಿಲ್ಲ. ಆದ್ರೆ ಈ ವೈರಸ್ ಸಾಯಿಸಲು ಬ್ರಾಂದಿ ಇಂದ […]

ಕೊರೊನಾಗೆ ಸಾರಾಯಿ ರಾಮಬಾಣವಂತೆ... ಪರಿಷತ್​ನಲ್ಲಿ  ಮರಿತಿಬ್ಬೇಗೌಡ ಹೇಳಿದ್ದು
ಸಾಧು ಶ್ರೀನಾಥ್​
|

Updated on: Mar 12, 2020 | 3:59 PM

Share

ಬೆಂಗಳೂರು: ಪರಿಷತ್​ನಲ್ಲಿ ಕೊರೊನಾಗೆ ಬ್ರಾಂದಿ ಔಷಧಿ ಎನ್ನೋ ಹಾಸ್ಯಭರಿತ ಚರ್ಚೆ ಉಂಟಾಗಿತ್ತು. ಮರಿತಿಬ್ಬೇಗೌಡ ಕೊರೊನಾಗೆ ಸಾರಾಯಿ ರಾಮಬಾಣ ಎಂದಿದ್ದಾರೆ. ಇವತ್ತು ಕೊರೊನಾ ವೈರಸ್ ಎಲ್ಲೆಡೆ ಬಂದಿದೆ. ಮುಕ್ಕೋಟಿ ದೇವತೆಗಳು ಎಲ್ಲಿ ಹೋದ್ರು ಪೂಜಾರಿ ಅವ್ರೇ? ಎಂದು ಮುಜರಾಯಿ ಸಚಿವ ಸಿಟಿ ರವಿಗೆ ಮರಿತಿಬ್ಬೇಗೌಡ ಪ್ರಶ್ನೆ ಮಾಡಿದ್ದಾರೆ.

ದೇವಸ್ಥಾನಗಳನ್ನು ಮುಚ್ಚಿ ಅಂತ ಹೇಳ್ತಿದ್ದಾರೆ. ದೇವರುಗಳಿಂದ ಕೊರೊನಾ ಕಡಿಮೆ ಮಾಡಲು ಆಗ್ತಿಲ್ಲ. ಈ ಸಣ್ಣ ವೈರಸ್​ಗೆ ಔಷಧಿ‌ ಕಂಡು ಹಿಡಿಯಲು ಆಗ್ತಿಲ್ಲ. ಆದ್ರೆ ಈ ವೈರಸ್ ಸಾಯಿಸಲು ಬ್ರಾಂದಿ ಇಂದ ಸಾಧ್ಯ ಅಂತಿದ್ದಾರೆ. ಗಾಂಧಿಯಿಂದ ಅಲ್ಲ ಬ್ರಾಂದಿಯಿಂದ ವೈರಸ್ ಸಾಯಿಸಲಾಗ್ತಿದೆ ಎಂದು ಇಂದು ಪರಿಷತ್​ನಲ್ಲಿ ಮರಿತಿಬ್ಬೇಗೌಡ ವಾದಿಸಿದ್ದು, ಇವರ ಮಾತಿಗೆ ಇಡೀ ಸದನ ನಗೆಯಲ್ಲಿ ತೆಲಾಡಿದೆ.

ಮಧ್ಯ ಪ್ರವೇಶ ಮಾಡಿದ ಗೋವಿಂದರಾಜು ಅಬಕಾರಿ ಮಂತ್ರಿಗಳಿಗೆ ಬ್ರಾಂದಿ ಹೆಚ್ಚು ಸೇಲ್ ಆಗಿ ಒಳ್ಳೆ ರೆವಿನ್ಯೂ ಬರುತ್ತೆ ಬಿಡಿ ಎಂದರು. ಹಿಂದೆ ಪ್ಲೇಗ್ ಬಂದಾಗ ಪ್ಲೇಗಮ್ಮ ದೇವಸ್ಥಾನ ಪ್ರಾರಂಭ ಆಗಿತ್ತು. ಇವತ್ತು ಕೊವಿಂದಮ್ಮ ದೇವಾಲಯ ಬಂದ್ರೆ ಆಶ್ಚರ್ಯ ಇಲ್ಲ. ತೀರ್ಥವಾಗಿ ಬ್ರಾಂದಿ ಕೊಡ್ತಾರೆ ಎಂದು ಮರಿತಿಬ್ಬೇಗೌಡರು ಮಾತು ಮುಂದುವರೆಸಿದರು.

ಬ್ರಾಂದಿ ಔಷಧಿ ಆಗಿರೋದ್ರಿಂದ ಇಲಾಖೆಗೆ ಜಾಸ್ತಿ ಆದಾಯ ಬರುತ್ತೆ. ದೇವಾಲಯ ಮುಚ್ಚಲು ಹೇಳ್ತಿದ್ದಾರೆ. ಆದ್ರೆ ಯಾರು ವೈನ್ ಶಾಪ್ ಮುಚ್ಚಬೇಕು ಅಂತ ಹೇಳ್ತಿಲ್ಲ. ಸ್ವಲ್ಪ ದಿನ ಈ ಕೊರೊನಾ ಉಳಿಸಿಕೊಳ್ಳಿ. ಅಬಕಾರಿ ಇಲಾಖೆಗೆ ಹಣ ಹೆಚ್ಚು ಬರುತ್ತೆ ಎಂದರು. ಅದಕ್ಕೆ ಕೇವಲ ಬ್ರಾಂದಿ ಮಾತ್ರನಾ? ಅದರ ಜೊತೆಗೆ ಏನು ಇಲ್ಲವೇ ಎಂದ ಸಚಿವ ಸಿ.ಟಿ.ರವಿ ಹೇಳಿದ್ರು.

Follow Us
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ