AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಕ್ಕೆ ಅಸಲಿ ಕಾರಣ ಇದು!

ಬೆಂಗಳೂರು: ಕಾಂಗ್ರೆಸ್​ ಹೈಕಮಾಂಡ್​ ಎದ್ನೋ ಬಿದ್ನೋ ಎಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಕ್ಕೆ ಅಸ್ತು ಅಂದಿದೆ. ಯಾಕಪ್ಪಾ? 2-3 ತಿಂಗಳಿಂದ ಡಿಕೆಶಿ ಜಪ ನಡೀತಾ ಇತ್ತು ಅಲ್ವಾ? ಈಗ್ಯಾಕೆ ಒಂದೇ ಉಸಿರಿಗೆ ಎಐಸಿಸಿ ಅವರನ್ನ ನೇಮಕ ಮಾಡಬೇಕು ಅನ್ನಬಹುದು. ಆದ್ರೆ ಡಿಕೆಶಿಯನ್ನ ಕ್ಷಿಪ್ರವಾಗಿ ನೇಮಕ ಮಾಡಲೂ ಬಲವಾದ ಕಾರಣ ಇಲ್ಲಿದೆ. ಕಮಲ್ ನಾಥ್ ಸರ್ಕಾರಕ್ಕೆ ಮುಳುಗುನೀರು ತರುವಲ್ಲಿ ಯಶಸ್ವಿ: ನಾಯಕತ್ವ ಮತ್ತು ದೂರದೃಷ್ಟಿ ಇಲ್ಲದೆ ತೊಳಲಾಡುತ್ತಿರುವ ಕಾಂಗ್ರೆಸ್​ ಹೈಕಮಾಂಡ್​ಗೆ ಮಧ್ಯಪ್ರದೇಶದಲ್ಲಿ ಯುವಶಕ್ತಿಯೊಂದು ಮೂರು ದಿನಗಳ ಹಿಂದೆ […]

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಕ್ಕೆ ಅಸಲಿ ಕಾರಣ ಇದು!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Mar 11, 2020 | 4:29 PM

Share

ಬೆಂಗಳೂರು: ಕಾಂಗ್ರೆಸ್​ ಹೈಕಮಾಂಡ್​ ಎದ್ನೋ ಬಿದ್ನೋ ಎಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಕ್ಕೆ ಅಸ್ತು ಅಂದಿದೆ. ಯಾಕಪ್ಪಾ? 2-3 ತಿಂಗಳಿಂದ ಡಿಕೆಶಿ ಜಪ ನಡೀತಾ ಇತ್ತು ಅಲ್ವಾ? ಈಗ್ಯಾಕೆ ಒಂದೇ ಉಸಿರಿಗೆ ಎಐಸಿಸಿ ಅವರನ್ನ ನೇಮಕ ಮಾಡಬೇಕು ಅನ್ನಬಹುದು. ಆದ್ರೆ ಡಿಕೆಶಿಯನ್ನ ಕ್ಷಿಪ್ರವಾಗಿ ನೇಮಕ ಮಾಡಲೂ ಬಲವಾದ ಕಾರಣ ಇಲ್ಲಿದೆ.

ಕಮಲ್ ನಾಥ್ ಸರ್ಕಾರಕ್ಕೆ ಮುಳುಗುನೀರು ತರುವಲ್ಲಿ ಯಶಸ್ವಿ: ನಾಯಕತ್ವ ಮತ್ತು ದೂರದೃಷ್ಟಿ ಇಲ್ಲದೆ ತೊಳಲಾಡುತ್ತಿರುವ ಕಾಂಗ್ರೆಸ್​ ಹೈಕಮಾಂಡ್​ಗೆ ಮಧ್ಯಪ್ರದೇಶದಲ್ಲಿ ಯುವಶಕ್ತಿಯೊಂದು ಮೂರು ದಿನಗಳ ಹಿಂದೆ ಬಲವಾದ ಪೆಟ್ಟು ಕೊಟ್ಟಿತ್ತು! ರಾಜಕೀಯ ಮೇಲಾಟಗಳು ಏನೇ ಇರಬಹುದು. ಯುವಶಕ್ತಿ ಮತ್ತು ನಿಷ್ಠಾವಂತ ನಾಯಕರನ್ನು ಕಡೆಗಣಿಸಿದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶವೊಂದು ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯದ ಮೂಲಕ ರವಾನೆಯಾಗಿತ್ತು. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ರಾಯ್ ಸರ್ಕಾರಕ್ಕೆ ಮುಳುಗುನೀರು ತರುವಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಯಶಸ್ವಿಯಾದರು. ತನ್ಮೂಲಕ ತಮ್ಮಂತಹ ನಿಷ್ಠಾವಂತರನ್ನು ಕಡೆಗಣಿಸಿದ್ರೆ ಪಕ್ಷದ ಕಥೆ ಇಷ್ಟೇ ಕಣಣ್ಣೋ ಎಂಬುದನ್ನು ಎತ್ತಿತೋರಿಸಿದರು.

ಅಲ್ಲಿಗೂ ಕಾಂಗ್ರೆಸ್​ ಹೈಕಮಾಂಡ್ ಎಂದಿನ ಉದಾಸೀನತೆಗೆ ಜಾರಿತು. ಸರಿಯಾಗಿ ಅದೇ ವೇಳೆ ಡಿಕೆ ಶಿವಕುಮಾರ್​ಗೂ ತಮ್ಮ ತಾಕತ್ತು ಏನು ಎಂಬುದನ್ನು ಹೈಕಮಾಂಡ್​ಗೆ ರುಜುವಾತು ಪಡಿಸಲು ಸ್ವತಃ ಹೈಕಮಾಂಡೇ ಅಸ್ತ್ರವೊಂದನ್ನು ಕಲ್ಪಿಸಿಕೊಟ್ಟಿತು!

ಹೈಕಮಾಂಡ್ ಒಪ್ಪಿಸಿದ್ದ ಕಾರ್ಯವನ್ನ ಡಿಕೆಶಿ ನಿಭಾಯಿಸಿದ್ದರು: ಮಧ್ಯ ಪ್ರದೇಶದಂತಹ ಪ್ರಕರಣಗಳು ಕಾಂಗ್ರೆಸ್​ಗೆ ಇತ್ತೀಚಿನ ದಿನಗಳಲ್ಲಿ ಹೊಸದೇನೂ ಅಲ್ಲ. ಆದ್ರೆ ಅಂತಹ ಸಂದರ್ಭಗಳಲ್ಲೆಲ್ಲಾ ಆಪತ್ಬಾಂಧವನಾಗಿ ಇದೇ ಡಿಕೆಶಿ ತಮಗೆ ಒಪ್ಪಿಸಿದ್ದ ಕಾರ್ಯಭಾರವನ್ನು ನಿಭಾಯಿಸಿದ್ದರು. ಅದನ್ನೇ ನೆಚ್ಚಿಕೊಂಡು ಹೈಕಮಾಂಡ್ ಮತ್ತೊಮ್ಮೆ ಮಧ್ಯಪ್ರದೇಶ ಬಿಕ್ಕಟ್ಟಿನಲ್ಲಿ ನೆರವಿನ ಹಸ್ತ ಕೋರಿ ಡಿಕೆಶಿಯತ್ತ ಮುಖಮಾಡಿತು.

ಆದ್ರೆ ಇನ್ನಾದರೂ ತಮ್ಮನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ನೇಮಕ ಮಾಡದೇ, ಪಕ್ಷಕ್ಕೆ ಹೊರಗಿನಿಂದ ಬಂದಿರುವ ಯಾರದೋ ಮಾತಿಗೆ ಮಣೆ ಹಾಕುತ್ತಾ ಕಾಲಹರಣ ಮಾಡುತ್ತಿರುವ ಹೈಕಮಾಂಡ್​ ವಿರುದ್ಧ ಅದ್ಯಾವ ಪರಿಯ ಸಿಟ್ಟು ಇತ್ತೆಂದರೆ ಮಧ್ಯಪ್ರದೇಶ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಲ್ಲಿನ ಬಂಡಾಯ ಶಾಸಕರನ್ನು ಭೇಟಿಯಾಗಿ ಪೂಸಿ ಹೊಡೆಯುವುದಕ್ಕೆ ಆಗೋಲ್ಲ ಎಂದು ಕಡ್ಡಿಮುರಿದ ಹಾಗೆ ಹೇಳಿಕಳುಹಿಸಿದ್ದರು. ಜೊತೆಜೊತೆಗೆ ತಾನೂ ಮತ್ತೊಬ್ಬ ಜ್ಯೋತಿರಾದಿತ್ಯ ಸಿಂಧಿಯಾ ಆಗಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.

ಆಗ ಎದ್ದುಕುಳಿತುಕೊಂಡಿತು ನೋಡಿ ಕಾಂಗ್ರೆಸ್​ ಹೈಕಮಾಂಡ್. ಯಾವುದೇ ಕಾರಣಕ್ಕೂ ಇನ್ನು ವಿಳಂಬ ಮಾಡುವುದು ಬೇಡ. ಮೊದಲು ಡಿಕೆಶಿ ಕೈಗೆ ಕರ್ನಾಟಕ ಕಾಂಗ್ರೆಸ್​ ಅಧಿಪತ್ಯ ಕೊಟ್ಟುಬಿಡೋಣ ಎಂಬ ಅನಿವಾರ್ಯ ತೀರ್ಮಾನಕ್ಕೆ ಹೈಕಮಾಂಡ್ ಬಂದಿತು. ತತ್ಫಲವಾಗಿ ಡಿಕೆಶಿ ಕಾಂಗ್ರೆಸ್​ ಅಧ್ಯಕ್ಷರಾಗಿ ಕೊನೆಗೂ ನೇಮಕವಾಗಿಯೇ ಬಿಟ್ಟರು.

Published On - 4:26 pm, Wed, 11 March 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ