
ದಾವಣಗೆರೆ: ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಜಗಳೂರು ತಾಲೂಕಿನ ತಮಲೇಹಳ್ಳಿಯ ಚೌಡೇಶ್ವರಿ ಕೆರೆಯಲ್ಲಿ ನಡೆದಿದೆ. ವೆಂಕಟೇಶ್(21) ಈಜಲು ಹೋಗಿದ್ದ ಯುವಕ.
ಗ್ರಾಮದ ಚೌಡೇಶ್ವರಿ ಕೆರೆಯಲ್ಲಿ ಈಜಲು ಹೋಗಿದ್ದ ವೆಂಕಟೇಶ್, ಕೆರೆಯ ಮಧ್ಯ ಭಾಗಕ್ಕೆ ಹೋಗಿ ವಾಪಸ್ಸು ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಎರೆಯಲ್ಲಿ ಶವ ಹುಡುಕಾಡುತ್ತಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:15 am, Mon, 27 July 20