AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಳ ವಿಚಾರ: ಇತ್ಯರ್ಥಕ್ಕೆಂದು ಕರೆದವರು ಕೊಂದೇಬಿಟ್ರು, ಆದರೆ ಕೊಂದಿದ್ಯಾರನ್ನ?

ನೆಲಮಂಗಲ: ಸಂಬಳ ಕೊಡಿಸುವ ವಿಚಾರದಲ್ಲಿ ಮಧ್ಯವರ್ತಿಯಾಗಿ ಹೋಗಿದ್ದವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಸಮೀಪದ ಸಾಯಿ ಲೇಔಟ್​ನಲ್ಲಿ ನಡೆದಿದೆ. ತುಮಕೂರಿನ ಕೊರಟಗೆರೆ ಮೂಲದ ಸತೀಶ್(26)ಕೊಲೆಯಾದ ಯುವಕನಾಗಿದ್ದು, ಪ್ರದೀಪ್ ಎಂಬ ಯುವಕನಿಗೆ ಐದು ತಿಂಗಳಿಂದ ಬರೀ ಅಡ್ವಾನ್ಸ್ ಹಣ ಕೊಟ್ಟು ಸಂಬಳ ಕೊಡದೆ ದುಡಿಸಿ ಕೊಳ್ಳತ್ತಿದ್ದ ಬಸ್ ಒನರ್ ಬಳಿ ಚಾಲಕ ಪ್ರದೀಪ್, ಜೊತೆಗೆ ಇರಲಿ ಅಂತ ಮಧ್ಯವರ್ತಿಯಾಗಿ  ಸತೀಶ್ ನನ್ನ ಜೊತೆಗೆ ಕರೆತಂದಿದ್ದ. ತಡರಾತ್ರಿ ಸಂಬಳ ಕೊಡುವ ವಿಚಾರವಾಗಿ ಬಸ್ […]

ಸಂಬಳ ವಿಚಾರ: ಇತ್ಯರ್ಥಕ್ಕೆಂದು ಕರೆದವರು ಕೊಂದೇಬಿಟ್ರು, ಆದರೆ ಕೊಂದಿದ್ಯಾರನ್ನ?
Follow us
ಸಾಧು ಶ್ರೀನಾಥ್​
|

Updated on:Sep 19, 2020 | 7:45 AM

ನೆಲಮಂಗಲ: ಸಂಬಳ ಕೊಡಿಸುವ ವಿಚಾರದಲ್ಲಿ ಮಧ್ಯವರ್ತಿಯಾಗಿ ಹೋಗಿದ್ದವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಸಮೀಪದ ಸಾಯಿ ಲೇಔಟ್​ನಲ್ಲಿ ನಡೆದಿದೆ.

ತುಮಕೂರಿನ ಕೊರಟಗೆರೆ ಮೂಲದ ಸತೀಶ್(26)ಕೊಲೆಯಾದ ಯುವಕನಾಗಿದ್ದು, ಪ್ರದೀಪ್ ಎಂಬ ಯುವಕನಿಗೆ ಐದು ತಿಂಗಳಿಂದ ಬರೀ ಅಡ್ವಾನ್ಸ್ ಹಣ ಕೊಟ್ಟು ಸಂಬಳ ಕೊಡದೆ ದುಡಿಸಿ ಕೊಳ್ಳತ್ತಿದ್ದ ಬಸ್ ಒನರ್ ಬಳಿ ಚಾಲಕ ಪ್ರದೀಪ್, ಜೊತೆಗೆ ಇರಲಿ ಅಂತ ಮಧ್ಯವರ್ತಿಯಾಗಿ  ಸತೀಶ್ ನನ್ನ ಜೊತೆಗೆ ಕರೆತಂದಿದ್ದ.

ತಡರಾತ್ರಿ ಸಂಬಳ ಕೊಡುವ ವಿಚಾರವಾಗಿ ಬಸ್ ಒನರ್ ಹರೀಶ್​ ಚಾಲಕ ಪ್ರದೀಪ್​ನನ್ನು ಕರೆಸಿದ್ದರು. ಸಂಬಳ ಕೊಡ್ತೀನಿ ಅಂತ ಹೇಳಿದ ಬಳಿಕ ಎಲ್ರೂ ಸೇರಿ ಎಣ್ಣೆ ಹೊಡೆದ್ರು. ಬಳಿಕ ಮತ್ತೆ ಗಲಾಟೆ ಆರಂಭಿಸಿ ಮಧ್ಯವರ್ತಿಯಾಗಿ ಬಂದಿದ್ದವನ ಮೇಲೆ ಬಿಯರ್ ಬಾಟಲಿಯಿಂದ ಒನರ್ ಹರೀಶ್ ಮತ್ತು ಇತನ ಸಹಚರರಾದ ಮಲ್ಲೇಶ್,ಸಿದ್ದು, ಸೇರಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾಗಿದ್ದ ಸತೀಶನಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಬಳಕ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಆ್ಯಂಬುಲೆನ್ಸ್​ ಮುಖಾಂತರ ರವಾನೆ ಮಾಡಲಾಗಿದೆ. ಆದರೆ ನಿಮಾನ್ಸ್​ನಲ್ಲಿ ಬೆಡ್ ಸಿಗದ ಕಾರಣ ವಾಪಸ್ ನೆಲಮಂಗಲಕ್ಕೆ ಕರೆತಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Published On - 7:33 am, Sat, 19 September 20

ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ