ಕೈಯ ರಂಗು ಹೆಚ್ಚಿಸುವ ಮದರಂಗಿಯಲ್ಲಿದೆ ಔಷಧೀಯ ಗುಣ, ಇಲ್ಲಿದೆ ಸರಳ ಮನೆ ಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 22, 2024 | 1:50 PM

ಕೈಕೆಂಪಾಗಿಸುವ ಮದರಂಗಿ ಎಂದರೆ ಎಲ್ಲರಿಗೂ ಇಷ್ಟ. ಪುರಾತನ ಕಾಲದಿಂದಲೂ ಮದರಂಗಿಯನ್ನು ದೇಹ ಸೌಂದರ್ಯ ಅಲಂಕಾರದಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ. ಆದರೆ ಇಂದು ಮಾರ್ಪಡು ಹೊಂದಿದ್ದು, ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮೆಹೆಂದಿ ಉತ್ಪನ್ನಗಳನ್ನು ನೋಡಬಹುದು. ಆದರೆ ಹಳ್ಳಿ ಕಡೆಗಳಲ್ಲಿ ಸಿಗುವ ಈ ಮದರಂಗಿ ಎಲೆಯಲ್ಲಿ ಔಷಧೀಯ ಗುಣವನ್ನು ಹೊಂದಿದ್ದು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗಿದೆ.

ಕೈಯ ರಂಗು ಹೆಚ್ಚಿಸುವ ಮದರಂಗಿಯಲ್ಲಿದೆ ಔಷಧೀಯ ಗುಣ, ಇಲ್ಲಿದೆ ಸರಳ ಮನೆ ಮದ್ದು
ಸಾಂದರ್ಭಿಕ ಚಿತ್ರ
Follow us on

ಮೆಹಂದಿ, ಗೋರಂಟಿ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ಮದರಂಗಿ ಹೆಂಗಳೆಯರಿಗೆ ಬಲು ಪ್ರಿಯ. ಮಹಿಳೆಯರ ನೆಚ್ಚಿನ ಮದರಂಗಿಯು ಶುಭದ ಸೂಚಕವಾಗಿದೆ. ಹೀಗಾಗಿ ಶುಭಸಮಾರಂಭಗಳಾದ ಮದುವೆ, ಹಬ್ಬ ಹರಿದಿನಗಳಲ್ಲಿ ಹೆಂಗಳೆಯರು ಕೈತುಂಬಾ ಮೆಹೆಂದಿಯನ್ನು ಹಚ್ಚಿ ಖುಷಿ ಪಡುತ್ತಾರೆ. ಈ ಮದರಂಗಿ ಕೇವಲ ಅಲಂಕಾರಿ ಬಣ್ಣದ ಸಸ್ಯವಾಗದೇ, ಮನೆ ಮದ್ದಿನಲ್ಲಿ

* ಮೆಹಂದಿ ಸೊಪ್ಪನ್ನು ಅರೆದು ತಲೆಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ

* ಮೆಹಂದಿ ಎಲೆಯ ರಸವನ್ನು ಮೈಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡಿದರೆ ಸೆಕೆ ಗುಳ್ಳೆಯ ಉರಿಯು ಕಡಿಮೆಯಾಗುತ್ತದೆ.

* ಬಾಯಿಹುಣ್ಣಿನ ಸಮಸ್ಯೆಗೆ ಒಂದೆರಡು ಮೆಹಂದಿ ಎಲೆಯನ್ನು ಬಾಯಲ್ಲಿ ಜಗಿಯುತ್ತಿದ್ದರೆ ಈ ಸಮಸ್ಯೆಯು ಗುಣಮುಖ ಕಾಣುತ್ತದೆ.

* ಮೆಹಂದಿ ಎಲೆಯ ರಸಕ್ಕೆ ಅರಶಿನ ಪುಡಿ, ಲಿಂಬೆಯ ರಸವನ್ನು ಸೇರಿಸಿ ಹಚ್ಚಿದರೆ ಚರ್ಮ ರೋಗಗಳು ಮತ್ತು ಚರ್ಮದ ಕಲೆಗಳು ಮಾಯವಾಗುತ್ತವೆ.

* ರಕ್ತಶುದ್ದಿಯಾಗಲು ಮೆಹಂದಿ ಎಲೆಯ ರಸವನ್ನು ಸೇವಿಸುತ್ತಿರಬೇಕು.

* ಅಂಗೈ, ಅಂಗಾಲು ಉರಿಗೆ ಮದರಂಗಿ ಸೊಪ್ಪನ್ನು ನುಣ್ಣಗೆ ಅರೆದು, ನಿಂಬೆ ರಸವನ್ನು ಸೇರಿಸಿ ಈ ಮಿಶ್ರಣವನ್ನು ಹಚ್ಚುತ್ತಿದ್ದರೆ ಉರಿಯು ಕಡಿಮೆಯಾಗುತ್ತದೆ.

* ತಲೆಯಲ್ಲಿ ಹೇನು, ಸೀರು ನಿವಾರಣೆಗೆ ಹಸಿ ಅಥವಾ ಒಣಗಿದ ಒಂದು ಹಿಡಿ ಮದರಂಗಿ ಸೊಪ್ಪನ್ನು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ಅರೆದು, ಅದಕ್ಕೆ ಕರ್ಪೂರವನ್ನು ಸೇರಿಸಿ ಈ ಮಿಶ್ರಣ ತಲೆಕೂದಲಿಗೆ ಹಚ್ಚುವುದು ಪರಿಣಾಮಕಾರಿ.

ಇದನ್ನೂ ಓದಿ: ಪಾದಗಳು ಕಪ್ಪಾಗದಂತೆ ನೋಡಿಕೊಳ್ಳುವುದು ಹೇಗೆ?

* ಬಿಳಿಕೂದಲು ಕಪ್ಪಾಗಲು ಮದರಂಗಿ ಕಾಯಿಯನ್ನು ನುಣ್ಣಗೆ ಅರೆದು, ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡಿಕೊಳ್ಳಬೇಕು. ಆ ಬಳಿಕ ನೀಲಿ ದ್ರಾಕ್ಷಿಯನ್ನು ನುಣ್ಣಗೆ ರುಬ್ಬಿ ಕಷಾಯ ಮಾಡಿ, ಈ ಎರಡು ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಹಚ್ಚುವುದು ಪರಿಣಾಮಕಾರಿ ಮನೆ ಮದ್ದಾಗಿದೆ.

* ಕಾಮಾಲೆ ಕಾಯಿಲೆಗೆ ಹಸಿ ಮದರಂಗಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ಒಂದು ರಾತ್ರಿ ನೆನೆ ಹಾಕಿ, ಮುಂಜಾನೆಯ ವೇಳೆ ನೀರನ್ನು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.

* ಮೂಲವ್ಯಾಧಿ ನಿವಾರಣೆಗೆ ಹಸಿ ಮದರಂಗಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ಬಟ್ಟೆಯಲ್ಲಿ ಸೋಸಿ, ಅದಕ್ಕೆ ಅರ್ಧ ಚಮಚ ರಸಕ್ಕೆ ಸುಟ್ಟ ಬಿಗಾರದ ಹುಡಿಯನ್ನು ಸೇರಿಸಿ ಬೆಳಿಗ್ಗೆ ಸೇವಿಸುವುದು ಉತ್ತಮ.

* ತಲೆಸುತ್ತುತ್ತಿದ್ದರೆ ಎರಡು ಗ್ರಾಂ ಮದರಂಗಿ ಬೀಜಗಳನ್ನು ನಯವಾಗಿ ಅರೆದು ಒಂದು ಚಮಚ ಶುದ್ಧ ಜೇನಿನಲ್ಲಿ ಮಿಶ್ರಣ ಮಾಡಿ ಸೇವಿಸಬೇಕು.

* ಗಜಕರ್ಣ, ಹುಳುಕಡ್ಡಿ ಮತ್ತು ದದ್ದುಗಳಿಗೆ ನಿವಾರಣೆಗೆ ಮದರಂಗಿ ಬೀಜವನ್ನು ಗಟ್ಟಿ ಮೊಸರಿನಲ್ಲಿ ಮೂರು ದಿನಗಳ ಕಾಲ ನೆನೆ ಹಾಕಬೇಕು. ಆ ಬಳಿಕ ಈ ಬೀಜವನ್ನು ಚೆನ್ನಾಗಿ ರುಬ್ಬಿ ಲೇಪಿಸಿದರೆ ಗುಣಮುಖವಾಗುತ್ತದೆ.

ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:49 pm, Thu, 22 February 24